ಮೂಲ್ಕಿ: ಮೂಳೂರು-ಅಡ್ಡೂರು ಜೋಡುಕರೆ ಕಂಬಳ ಸಮಿತಿ ಅಧ್ಯಕ್ಷ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಆಲಿ ನೇತೃತ್ವದಲ್ಲಿ ಗುರುಪುರ ಮಾಣಿಬೆಟ್ಟು ಗುತ್ತಿನಲ್ಲಿ ನಡೆದ 3ನೇ ವರ್ಷದ ಮೂಳೂರು- ಅಡ್ಡೂರು ಜೋಡುಕರೆ ಗುರುಪುರ ಹೊನಲು ಬೆಳಕಿನ ಕಂಬಳದಲ್ಲಿ ಒಟ್ಟು 160 ಜೊತೆ ಕೋಣಗಳು ಭಾಗವಹಿಸಿದ್ದವು. ಕನೆ ಹಲಗೆ- 15 ಜೊತೆ, ಅಡ್ಡ ಹಲಗೆ-7 ಜೊತೆ, ಹಗ್ಗ ಹಿರಿಯ-11 ಜೊತೆ, ನೇಗಿಲು ಹಿರಿಯ-21 ಜೊತೆ, ಹಗ್ಗ ಕಿರಿಯ-30 ಜೊತೆ, ನೇಗಿಲು ಕಿರಿಯ- 76 ಜೊತೆ ಪಾಲ್ಗೊಂಡಿದ್ದವು.ಕನೆ ಹಲಗೆ (6.5 ಕೋಲು ನೀರು ಹಾಯಿಸಿದ) ವಿಭಾಗದಲ್ಲಿ ಬೋಳಾರ ತ್ರಿಶಾಲ್ ಕೆ. ಪೂಜಾರಿ ‘ಎ’, (ಹಲಗೆ ಮೆಟ್ಟಿದವರು ತೆಕ್ಕಟ್ಟೆ ಸುಧೀರ್), ಅಡ್ಡ ಹಲಗೆ: ಪ್ರ-ಇರುವೈಲು ದೊಡ್ಡಗುತ್ತು ಅಮರ್ಥ್ಯ ಪದ್ಮನಾಭ ಶೆಟ್ಟಿ (ಹಲಗೆ ಮೆಟ್ಟಿದವರು: ತೆಕ್ಕಟ್ಟೆ ಸುಧೀರ್ ದೇವಾಡಿಗ), ದ್ವಿ: ನಾರಾವಿ ರಕ್ಷಿತ್ ಜೈನ್ (11.48), (ಹಲಗೆ ಮೆಟ್ಟಿದವರು: ಭಟ್ಕಳ ಪಾಂಡು). ಹಗ್ಗ ಹಿರಿಯ: ಪ್ರ- ಕೊಳಕೆ ಇರ್ವತ್ತೂರು ಭಾಸ್ಕರ ಕೋಟ್ಯಾನ್ , (10.67) (ಓಡಿಸಿದವರು- ಕಕ್ಕೆಪದವು ಪೆಂರ್ಗಾಲು ಕೃತಿಕ್), ದ್ವಿ- ನಂದಳಿಕೆ ಶ್ರೀಕಾಂತ್ ಭಟ್ ಬಿ., ಓಡಿಸಿದವರು-ಬಂಬ್ರಾಣಬೈಲು ವಂದಿತ್ ಶೆಟ್ಟಿ, ಹಗ್ಗ ಕಿರಿಯ: ಪ್ರ- ಶ್ರೀ ಸ್ವಾಮಿಧಾಮ ಹೊಳೆಕಟ್ಟು ಕುಂಭಾಶಿ (11.27) ಓಡಿಸಿದವರು-ಉಜಿರೆ ಸ್ಪಂದನ್ ಶೆಟ್ಟಿ. ದ್ವಿ: ಪಡೀಲ್ ಕಬತ್ತಾರು ಗುತ್ತು ದಿನಕರ ಜಯರಾಜ ಶೆಟ್ಟಿ (11.56), (ಓಡಿಸಿದವರು: ಮಂದಾರ್ತಿ ಮುದ್ದುಮನೆ ಭರತ್ ನಾಯ್ಕ). ನೇಗಿಲು ಹಿರಿಯ: ಪ್ರ-80 ಬಡಗು ಬೆಟ್ಟು ಕಲ್ಲಪಾಪು ಶ್ರೀಕ ಸಂದೀಪ್ ಶೆಟ್ಟಿ (10.73) (ಓಡಿಸಿದವರು: ಮಾಸ್ತಿಕಟ್ಟೆ ಸ್ವರೂಪ್), ದ್ವಿ- ಸುರತ್ಕಲ್ ಪಾಂಚಜನ್ಯ ಯೋಗೀಶ್ ಕರಿಯ ಪೂಜಾರಿ, ಓಡಿಸಿದವರು: ಭಟ್ಕಳ ಶಂಕರ್. ನೇಗಿಲು ಕಿರಿಯ: ಪ್ರಥಮ-ನಿಂಜೂರು ಪಡುಮನೆ ಅಮಯ್ ಆದ್ಯ ಶೆಟ್ಟಿ (10.68) (ಓಡಿಸಿದವರು: ಬೈಂದೂರು ವಿಶ್ವನಾಥ ದೇವಾಡಿಗ). ದ್ವಿ.: ಹೊಸ್ಮಾರು ಸೂರ್ಯಶ್ರೀ ಜ್ಯೋತಿ ಸುರೇಶ್ ಶೆಟ್ಟಿ ಎ. (ಓಡಿಸಿದವರು ಮುಳಿಕ್ಕಾರು ವಿವೇಕ ದೇವಾಡಿಗ. ಬಹುಮಾನ: ಕನೆಹಲಗೆ 6.5 ಕೋಲು ನೀರು ಹಾಯಿಸಿದ ಕೋಣಕ್ಕೆ ಅರ್ಧ ಪವನ್, ಉಳಿದಂತೆ ಹಗ್ಗ ವಿಭಾಗ ಹಿರಿಯ-ಕಿರಿಯ, ನೇಗಿಲು ವಿಭಾಗ ಹಿರಿಯ-ಕಿರಿಯ, ಅಡ್ಡ ಹಲಗೆ ವಿಭಾಗದಲ್ಲಿ ಪ್ರಥಮ 1 ಪವನ್, ದ್ವಿತೀಯ ಅರ್ಧ ಪವನ್, ತೃತೀಯ 1 ಗ್ರಾಂ ಚಿನ್ನ, ಚತುರ್ಥ 1 ಗ್ರಾಂ ಚಿನ್ನ ಬಹುಮಾನ ನೀಡಲಾಗಿದೆ. ಕನೆಹಲಗೆ ವಿಭಾಗದಲ್ಲಿ ನೀರು ಹಾಯಿಸದಿದ್ದರೂ ಎಲ್ಲ ಕೋಣಗಳಿಗೆ 1 ಗ್ರಾಂ ಚಿನ್ನದ ಪದಕ, ಭಾಗವಹಿಸಿದ ಎಲ್ಲ ಕೋಣಗಳ ಮಾಲೀಕರಿಗೆ ಬೆಳ್ಳಿಯ ನಾಣ್ಯ ಹಾಗೂ 1 ಬ್ಯಾಗ್ ಹುರುಳಿ ನೀಡಲಾಯಿತು. ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಗಣ್ಯರ ಉಪಸ್ತಿತಿಯಲ್ಲಿ ಕಂಬಳ ಸಮಿತಿ ಅಧ್ಯಕ್ಷ ಇನಾಯತ್ ಆಲಿಯವರು ಬಹುಮಾನ ವಿತರಿಸಿದರು.
(ಚಿತ್ರ:7ಕಂಬಳ)ಗುರುಪುರ ಮಾಣಿಬೆಟ್ಟು 3ನೇ ವರ್ಷದ ಮೂಳೂರು- ಅಡ್ಡೂರು ಜೋಡುಕರೆ ಕಂಬಳ ಸಂಪನ್ನ
ಮೂಳೂರು-ಅಡ್ಡೂರು ಜೋಡುಕರೆ ಕಂಬಳ ಸಮಿತಿ ಅಧ್ಯಕ್ಷ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಆಲಿ ನೇತೃತ್ವದಲ್ಲಿ ಗುರುಪುರ ಮಾಣಿಬೆಟ್ಟು ಗುತ್ತಿನಲ್ಲಿ ನಡೆದ 3ನೇ ವರ್ಷದ ಮೂಳೂರು- ಅಡ್ಡೂರು ಜೋಡುಕರೆ ಗುರುಪುರ ಹೊನಲು ಬೆಳಕಿನ ಕಂಬಳದಲ್ಲಿ ಒಟ್ಟು 160 ಜೊತೆ ಕೋಣಗಳು ಭಾಗವಹಿಸಿದ್ದವು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.