ಸಿಂಹಾಸನ ಸಿನಿಮಾ ಮುಹೂರ್ತ

| Published : Jul 17 2024, 12:46 AM IST

ಸಾರಾಂಶ

ಸಿಂಹಾಸನ ಸಿನಿಮಾದ ಮುಹೂರ್ತ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆಯಿತು.

ಕನ್ನಡಪ್ರಭ ಸಿನಿವಾರ್ತೆ

ಡಿ ಆರ್ ದಯಾನಂದಸ್ವಾಮಿ ನಿರ್ದೇಶನದ ‘ಸಿಂಹಾಸನ’ ಸಿನಿಮಾದ ಮುಹೂರ್ತ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆಯಿತು. ಉದ್ಯಮಿ ವಿ.ಜಯಚಂದ್ರ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿದರು.

ಸಿನಿಮಾ ಕುರಿತು ನಿರ್ದೇಶಕ ಡಿ ಆರ್‌ ದಯಾನಂದ ಸ್ವಾಮಿ, ‘ಇದೊಂದು ಪೊಲಿಟಿಕಲ್‌ ಡ್ರಾಮಾ. ಜೊತೆಗೆ ಸೋಷಿಯಲ್‌ ಮೀಡಿಯಾ ಕುರಿತ ಎಳೆಯೂ ಇದೆ. ಶ್ರೀಸಾಮಾನ್ಯನ ರಾಜಕೀಯ ಪ್ರವೇಶದ ಸಂಘರ್ಷಗಳನ್ನು ಸಿನಿಮಾ ಕಟ್ಟಿಕೊಡುತ್ತದೆ’ ಎಂದರು.

ಚಂದ್ರು ನಾಲ್‌ರೋಡ್ ಕೂಲಿ ಮಾಡುವ ಯುವಕನ ಪಾತ್ರದಲ್ಲಿ ನಟಿಸಿದ್ದಾರೆ. ಕಾಲೇಜು ಹುಡುಗಿ ಪಾತ್ರದಲ್ಲಿ ನಾಯಕಿ ರೇಷ್ಮಾ ಕಾಣಿಸಿಕೊಂಡಿದ್ದಾರೆ. ಪ್ರಕಾಶ್‌ ಸಣ್ಣಕ್ಕಿ ವಿಲನ್‌ ಪಾತ್ರದಲ್ಲಿದ್ದಾರೆ. ಸಂಜಯ್‌ ಹಾಸ್ಯ ಪಾತ್ರದಲ್ಲಿ ನಟಿಸಿದ್ದಾರೆ.