ಮಣಿಪುರದಲ್ಲಿ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿಯ ಮೇಲೆ 300 ಜನರು ದಾಳಿ ಮಾಡಿದ್ದಾರೆ.

ಇಂಫಾಲ್‌: ಮಣಿಪುರದಲ್ಲಿ ಮತ್ತೆ ಹಿಂಸೆ ಮರುಕಳಿಸಿದ್ದು, ಪೊಲೀಸ್ ಪೇದೆಯೊಬ್ಬನ ಅಮಾನತು ಖಂಡಿಸಿ ಗುರುವಾರ ರಾತ್ರಿ ಉದ್ರಿಕ್ತರ ಗುಂಪೊಂದು ಚುರಾಚಂದ್‌ಪುರ ಎಸ್ಪಿ ಕಚೇರಿ ಮೇಲೆ ದಾಳಿ ಮಾಡಿದೆ.

ವಿಡಿಯೋವೊಂದರಲ್ಲಿ ಈ ಪೇದೆ ಶಸ್ತ್ರಧಾರಿಗಳ ಜತೆ ಕಾಣಿಸಿಕೊಂಡಿದ್ದ.

ಹೀಗಾಗಿ ಆತನನ್ನು ಅಮಾನತು ಮಡಲಾಗಿತ್ತು.

ಇದನ್ನು ಖಂಡಿಸಿ 300 ಉದ್ರಿಕ್ತರು ಎಸ್ಪಿ ಕಚೇರಿ ಮೇಲೆ ಕಲ್ಲು ತೂರಿ ದಾಳಿ ಮಾಡಿದ್ದಾರೆ.