ನಿಯಮ ಉಲ್ಲಂಘನೆ: 600 ವಿದ್ಯಾರ್ಥಿಗಳ ಎಂಬಿಬಿಎಸ್ ಪ್ರವೇಶ ರದ್ದು
1 Min read
Author : KannadaprabhaNewsNetwork
Published : Oct 22 2023, 01:01 AM IST
Share this Article
FB
TW
Linkdin
Whatsapp
21ಎಚ್ಎಸ್ಎನ್18 : ಬೇಲೂರು ತಾಲ್ಲೂಕಿನ ದೊಡ್ಡಬ್ಯಾಡಿಗೆರೆ ಗ್ರಾಮದ ರೈತರ ಕಬ್ಬಿನ ಹೊಲಕ್ಕೆ ಬೆಂಕಿ ಬಿದ್ದ ಕಾರಣದಿಂದ ಸುಟ್ಟು ಕರಕಲಾದ ಕಬ್ಬನಿನ ಬೆಳೆ. | Kannada Prabha
Image Credit: KP
ವೈದ್ಯಕೀಯ ಶಿಕ್ಷಣಕ್ಕೆ ಸೇರುವ ಸಮಯದಲ್ಲಿ ನಿಯಮಗಳನ್ನು ಉಲ್ಲಂಘನೆ ಮಾಡಿ ನಡೆದ ಎಂಬಿಬಿಎಸ್ ಪ್ರವೇಶಾತಿಗಳ ವಿರುದ್ಧ ರಾಷ್ಟ್ರೀಯ ವೈದ್ಯಕೀಯ ಆಯೋಗ ಕಠಿಣ ಕ್ರಮಕ್ಕೆ ನಿರ್ಧರಿಸಿದೆ. ಹೀಗಾಗಿ ಎಂಬಿಬಿಎಸ್ ಪ್ರವೇಶ ಪಡೆದ 600 ಹೊಸ ವಿದ್ಯಾರ್ಥಿಗಳ ಅಡ್ಮಿಶನ್ ರದ್ದಾಗಲಿದೆ ಎಂದು ಗೊತ್ತಾಗಿದೆ.
ಚೆನ್ನೈ: ವೈದ್ಯಕೀಯ ಶಿಕ್ಷಣಕ್ಕೆ ಸೇರುವ ಸಮಯದಲ್ಲಿ ನಿಯಮಗಳನ್ನು ಉಲ್ಲಂಘನೆ ಮಾಡಿ ನಡೆದ ಎಂಬಿಬಿಎಸ್ ಪ್ರವೇಶಾತಿಗಳ ವಿರುದ್ಧ ರಾಷ್ಟ್ರೀಯ ವೈದ್ಯಕೀಯ ಆಯೋಗ ಕಠಿಣ ಕ್ರಮಕ್ಕೆ ನಿರ್ಧರಿಸಿದೆ. ಹೀಗಾಗಿ ಎಂಬಿಬಿಎಸ್ ಪ್ರವೇಶ ಪಡೆದ 600 ಹೊಸ ವಿದ್ಯಾರ್ಥಿಗಳ ಅಡ್ಮಿಶನ್ ರದ್ದಾಗಲಿದೆ ಎಂದು ಗೊತ್ತಾಗಿದೆ. ಸುಪ್ರೀಂ ಕೋರ್ಟು ಪ್ರವೇಶಾತಿಗೆ ಸೆ.30ರ ಗಡುವು ವಿಧಿಸಿತ್ತು. ಈ ಗಡುವು ಮೀರಿ ಪ್ರವೇಶಾತಿ ನಡೆದಿದೆ ಹಾಗೂ ಹಲವು ರಾಜ್ಯಗಳಲ್ಲಿ ಕೌನ್ಸೆಲಿಂಗ್ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಕೌನ್ಸೆಲಿಂಗ್ ಹೊರತಾಗಿ 3ನೇ ಸಂಸ್ಥೆಯು ಕೌನ್ಸೆಲಿಂಗ್ ನಡೆಸಿದೆ ಎಂಬ ದೂರು ಸಲ್ಲಿಕೆಯಾಗಿದ್ದವು. ಹೀಗಾಗಿ ನಿಯಮ ಮೀರಿ ಪ್ರವೇಶ ಪಡೆದ 600ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸೀಟು ವಂಚಿತರಾಗಿದ್ದಾರೆ ಎಂದು ಮಾಧ್ಯಮ ವರದಿಯೊಂದು ಹೇಳಿದೆ.
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.