ಜಮ್ಮು-ಕಾಶ್ಮೀ​ರದ ಅನಂತ​ನಾಗ್‌ ಜಿಲ್ಲೆ​ಯ ಬ್ರರಿಂಗ್ನಾನ್‌ ಎಂಬಲ್ಲಿ ಉಮಾ ಭಗ​ವತಿ ಮಂದಿ​ರ​ದಲ್ಲಿ ರಾಮ​ನ​ವ​ಮಿ​ಯನ್ನು 34 ವರ್ಷ ಬಳಿಕ ಇದೇ ಮೊದಲ ಬಾರಿ ಆಚ​ರಿ​ಸ​ಲಾ​ಯಿ​ತು.

ಶ್ರೀನಗರ: ಜಮ್ಮು-ಕಾಶ್ಮೀ​ರದ ಅನಂತ​ನಾಗ್‌ ಜಿಲ್ಲೆ​ಯ ಬ್ರರಿಂಗ್ನಾನ್‌ ಎಂಬಲ್ಲಿ ಉಮಾ ಭಗ​ವತಿ ಮಂದಿ​ರ​ದಲ್ಲಿ ರಾಮ​ನ​ವ​ಮಿ​ಯನ್ನು 34 ವರ್ಷ ಬಳಿಕ ಇದೇ ಮೊದಲ ಬಾರಿ ಆಚ​ರಿ​ಸ​ಲಾ​ಯಿ​ತು. ಉಗ್ರಗಾಮಿ​ಗಳ ಉಪ​ಟ​ಳದ ಕಾರಣ 34 ವರ್ಷ ಹಿಂದೆ ಅಂದರೆ 1990ರಲ್ಲಿ ದೇವಾ​ಲ​ಯ​ವನ್ನು ಮುಚ್ಚ​ಲಾ​ಗಿತ್ತು.

 ಭಯೋ​ತ್ಪಾ​ದನೆ ಕಡಿಮೆ ಆದ ಕಾರ​ಣ ಕಳೆದ ವರ್ಷ​ವಷ್ಟೇ ದೇವಾ​ಲಯ ತೆರೆ​ಯ​ಲಾ​ಗಿತ್ತು. ಈಗ 34 ವರ್ಷ ಬಳಿಕ ಮೊದಲ ಬಾರಿ​ಗೆ ದೇವಾ​ಲ​ಯ​ದಲ್ಲಿ ರಾಮ​ನ​ವಮಿ ಆಚ​ರಿ​ಸ​ಲಾ​ಯಿತು. ಹಿಂದೂ-ಮುಸ್ಲಿ​ಮರು ಒಟ್ಟಿಗೇ ಹಬ್ಬ ಆಚ​ರಿಸಿದ್ದು ವಿಶೇ​ಷ​ವಾ​ಗಿತ್ತು ಎಂದು ದೇಗು​ಲದ ಮುಖ್ಯಸ್ಥ ಯಜಿನ್‌ ಭಟ್‌ ಹರ್ಷಿ​ಸಿ​ದ್ದಾ​ರೆ.