ಸಾರಾಂಶ
ಚುನಾವಣಾ ಭರವಸೆಯಂತೆ 1 ಲಕ್ಷದ ರು.ವರೆಗಿನ ಕೃಷಿ ಸಾಲಗಳನ್ನು ಗುರುವಾರ ಮನ್ನಾ ಮಾಡುತ್ತದೆ ಎಂದು ಮುಖ್ಯಮಂತ್ರಿ ರೇವಂತ್ ರೆಡ್ಡಿ ಬುಧವಾರ ಘೋಷಿಸಿದ್ದಾರೆ.
ಹೈದರಾಬಾದ್: ಚುನಾವಣಾ ಭರವಸೆಯಂತೆ 1 ಲಕ್ಷದ ರು.ವರೆಗಿನ ಕೃಷಿ ಸಾಲಗಳನ್ನು ಗುರುವಾರ ಮನ್ನಾ ಮಾಡುತ್ತದೆ ಎಂದು ಮುಖ್ಯಮಂತ್ರಿ ರೇವಂತ್ ರೆಡ್ಡಿ ಬುಧವಾರ ಘೋಷಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ಸಭೆಯಲ್ಲಿ ಮಾತನಾಡಿದ ಅವರು, ‘ರೈತರ ಮೇಲಿನ ಸಾಲದ ಹೊರೆಯನ್ನು ತಗ್ಗಿಸಲು ₹2 ಲಕ್ಷ ಕೃಷಿ ಸಾಲ ಮನ್ನಾ ಮಾಡುವ ಸರ್ಕಾರದ ಭರವಸೆಯಂತೆ ಗುರುವಾರ 7,000 ಕೋಟಿ ರು. ಬಿಡುಗಡೆ ಮಾಡಲಾಗುತ್ತದೆ. ಹಂತಹಂತವಾಗಿ ₹1 ಲಕ್ಷ ಸಾಲ ಮಾಡಿರುವ ರೈತರ ಖಾತೆಗೆ ಸೇರಲಿದೆ’ ಎಂದರು.