ಸಾರಾಂಶ
ಹಿಂದೂ ದೇವಾಲಯಗಳ ಮತ್ತು ದೇವರ ವಿಗ್ರಹಗಳನ್ನು ಭಂಜನ ಮಾಡಲಾಗುತ್ತಿದೆ. ಕೂಡಲೇ ಭಾರತ ಸರ್ಕಾರ ಬಾಂಗ್ಲಾ ಸರ್ಕಾರದ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹಿಂದೂ ಹಿತರಕ್ಷಣಾ ವೇದಿಕೆಯ ಜಿಲ್ಲಾ ಸಂಚಾಲಕ ಜಗದೀಶ್ ಒತ್ತಾಯಿಸಿದರು. ಶಿರಾದಲ್ಲಿ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಶಿರಾ ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಯುತ್ತಿದೆ. ಹಿಂದೂ ದೇವಾಲಯಗಳ ಮತ್ತು ದೇವರ ವಿಗ್ರಹಗಳನ್ನು ಭಂಜನ ಮಾಡಲಾಗುತ್ತಿದೆ. ಕೂಡಲೇ ಭಾರತ ಸರ್ಕಾರ ಬಾಂಗ್ಲಾ ಸರ್ಕಾರದ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹಿಂದೂ ಹಿತರಕ್ಷಣಾ ವೇದಿಕೆಯ ಜಿಲ್ಲಾ ಸಂಚಾಲಕ ಜಗದೀಶ್ ಒತ್ತಾಯಿಸಿದರು.ನಗರದಲ್ಲಿ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಖಂಡಿಸಿ ಹಿಂದೂ ಹಿತರಕ್ಷಣಾ ವೇದಿಕೆ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು.
ಬಾಂಗ್ಲಾ ದೇಶದಲ್ಲಿ ಇಸ್ಕಾನ್ನ ಹಿಂದೂ ಸಂತ ಶ್ರೀ ಚಿನ್ಮಯ ಕೃಷ್ಣದಾಸ್ ಅವರನ್ನು ಮೂಲಭೂತವಾದಿ ಎಂಬು ಬಂಧಿಸಿದ್ದಾರೆ. ಅವರಿಗೆ ಆಹಾರ ಔಷಧ ನೀಡಲು ಹೋಗಿದ್ದ ಮತ್ತಿಬ್ಬರು ಸಂತರನ್ನು ವಾರಂಟ್ ಇಲ್ಲದೆ ಬಂಧಿಸಿದ್ದಾರೆ. ಕೂಡಲೇ ಹಿಂದೂ ಸಂತರನ್ನು ಬಿಡುಗಡೆಗೊಳಿಸಬೇಕು. ಭಾರತ ಸರ್ಕಾರ ಬಾಂಗ್ಲಾ ಸರ್ಕಾರದ ಮೇಲೆ ರಾಜತಾಂತ್ರಿಕ ಒತ್ತಡ ತಂದು ಅಲ್ಲಿನ ಅಲ್ಪಸಂಖ್ಯಾತ ಹಿಂದುಗಳ ಜೀವನ, ಆಸ್ತಿ, ದೇವಸ್ಥಾನ, ಶ್ರದ್ಧಾಕೇಂದ್ರ, ಉದ್ಯೋಗ, ವ್ಯಾಪಾರ ರಕ್ಷಣೆ ಮಾಡಬೇಕೆಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಹಿಂದೂ ಜಾಗರಣಾ ವೇದಿಕೆಯ ರಾಜ್ಯ ಸಹ ಸಂಚಾಲಕ ಮಂಜುನಾಥ್, ಗ್ರಾಮಾಂತರ ಬಿಜೆಪಿ ಅಧ್ಯಕ್ಷ ಹೊನ್ನಗೊಂಡನಹಳ್ಳಿ ಚಿಕ್ಕಣ್ಣ, ನಗರ ಅಧ್ಯಕ್ಷ ಗಿರಿಧರ್, ಮಧುಗಿರಿ ವಿಭಾಗದ ಬಿಜೆಪಿ ಓಬಿಸಿ ಘಟಕದ ಅಧ್ಯಕ್ಷ ಮಾಗೋಡು ಪ್ರತಾಪ್, ಮಧುಗಿರಿ ವಿಭಾಗದ ಬಿಜೆಪಿ ಅಧ್ಯಕ್ಷೆ ಉಮಾ ವಿಜಯರಾಜ್, ಮಾಜಿ ನಗರಸಭಾ ಸದಸ್ಯ ಸಂತೆಪೇಟೆ ನಟರಾಜ್, ನರಸಿಂಹರಾಜು, ಹನುಮಂತನಾಯ್ಕ, ಶ್ರೀನಿವಾಸ ನಾಯ್ಕ.ಎಲ್.ಟಿ, ಸೇರಿದಂತೆ ಹಲವರು ಭಾಗವಹಿಸಿದ್ದರು.