ಸಾರಾಂಶ
ಗಾಂಧಿ ಪರಿವಾರದ ಹೊರಗೆ ನಾಯಕತ್ವವನ್ನು ಕಾಂಗ್ರೆಸ್ ಹುಡುಕಬೇಕು ಎಂದು ಪ್ರಣಬ್ ಪುತ್ರಿ ಶರ್ಮಿಷ್ಠಾ ತಿಳಿಸಿದ್ದಾರೆ.
ಜೈಪುರ: ಕಾಂಗ್ರೆಸ್ ಪಕ್ಷವು ಗಾಂಧಿ ಹಾಗೂ ನೆಹರು ಪರಿವಾರದ ಹೊರಗೂ ನಾಯಕತ್ವವನ್ನು ಹುಡುಕಬೇಕು ಎಂದು ಮಾಜಿ ರಾಷ್ಟ್ರಪತಿ, ಹಿರಿಯ ಕಾಂಗ್ರೆಸ್ ನಾಯಕರಾಗಿದ್ದ ಪ್ರಣಬ್ ಮುಖರ್ಜಿ ಅವರ ಪುತ್ರಿ ಶರ್ಮಿಷ್ಠಾ ಮುಖರ್ಜಿ ಅಭಿಮತ ವ್ಯಕ್ತಪಡಿಸಿದ್ದಾರೆ.
ಜೈಪುರ ಲಿಟ್ ಫೆಸ್ಟ್ನಲ್ಲಿ ಮಾತನಾಡಿದ ಅವರು,‘ಕಾಂಗ್ರೆಸ್ ಈಗಲೂ ಲೋಕಸಭೆಯಲ್ಲಿ ಪ್ರಮುಖ ವಿಪಕ್ಷ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಪಕ್ಷ ತಳಮಟ್ಟದ ನಾಯಕರಿಗೆ ಅವಕಾಶ ನೀಡಬೇಕು. ಅ
ದರ, ಆಂತರಿಕ ಚುನಾವಣೆಗಳಲ್ಲಿ ಪ್ರತಿಯೊಬ್ಬರಿಗೂ ಸಮಾನವಕಾಶ ನೀಡಬೇಕು. ಪಕ್ಷ ತನ್ನ ಮೂಲ ತತ್ವಗಳಾದ ಪ್ರತಿಯೊಬ್ಬರಿಗೂ ಅವಕಾಶವನ್ನು ಎತ್ತಿಹಿಡಿಯಬೇಕು. ಆಗ ಪಕ್ಷ ಇನ್ನು ಗಟ್ಟಿಯಾಗುತ್ತದೆ ಎಂದು ಹೇಳಿದರು.