ಕೃಷ್ಣ ಜನ್ಮಭೂಮಿ ಈದ್ಗಾ ಕೇಸು ಅನಾಮಿಕರಿಂದ ಅರ್ಜಿದಾರರಿಗೆ ಬೆದರಿಕೆ

| Published : Mar 21 2024, 01:01 AM IST

ಕೃಷ್ಣ ಜನ್ಮಭೂಮಿ ಈದ್ಗಾ ಕೇಸು ಅನಾಮಿಕರಿಂದ ಅರ್ಜಿದಾರರಿಗೆ ಬೆದರಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ಶ್ರೀಕೃಷ್ಣ ಜನ್ಮಭೂಮಿ ಶಾಹಿ ಈದ್ಗಾ ಪ್ರಕರಣವನ್ನು ಹಿಂಪಡೆಯುವಂತೆ ಟ್ರಸ್ಟ್ ಅಧ್ಯಕ್ಷ ಮತ್ತು ಅರ್ಜಿದಾರರಿಗೆ ಬೆದರಿಕೆ ಕರೆ ಬಂದಿದೆ.

ಕೌಶಾಂಬಿ: ಶ್ರೀಕೃಷ್ಣ ಜನ್ಮಭೂಮಿ ಶಾಹಿ ಈದ್ಗಾ ಪ್ರಕರಣವನ್ನು ಹಿಂಪಡೆಯುವಂತೆ ಟ್ರಸ್ಟ್ ಅಧ್ಯಕ್ಷ ಮತ್ತು ಅರ್ಜಿದಾರರಿಗೆ ಬೆದರಿಕೆ ಕರೆ ಬಂದಿದೆ. ಶ್ರೀ ಕೃಷ್ಣ ಜನ್ಮಭೂಮಿ ಮುಕ್ತಿ ನಿರ್ಮಾಣ ಟ್ರಸ್ಟ್ ಅಧ್ಯಕ್ಷ ಅಶುತೋಶ್ ಪಾಂಡೆ ನೀಡಿದ ದೂರಿನ ಅನ್ವಯ ಶೈನಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ. ಪಾಂಡೆಗೆ ಮಂಗಳವಾರ ರಾತ್ರಿ ಕರೆ ಮಾಡಿದವನು ನಕ್ಸಲ್ ಏಜೆಂಟ್ ಎಂದು ಗುರುತಿಸಲಾಗಿದೆ. ಅವನು ಮೂರು ದಿನಗಳಲ್ಲಿ ಪ್ರಕರಣ ಹಿಂಪಡೆಯದಿದ್ದರೆ ತೊಂದರೆ ನೀಡುವುದಾಗಿ ಕರೆಯಲ್ಲಿ ಹೇಳಿದ್ದಾನೆ. ಅಲ್ಲದೆ ಪ್ರಧಾನಿ ನರೇಂದ್ರ ಮೋದಿ ಮತ್ತು ಹಿಂದೂ ದೇವತೆಗಳನ್ನು ನಿಂದಿಸಿದ್ದಾರೆ ಎಂದು ಅಶುತೋಶ್ ಪಾಂಡೆ ಹೇಳಿದ್ದಾರೆ.