ಹಳೇ ನಟ​ರಿಂದ ಯುವ ನಟ​ರಿಗೆ ಚಾನ್ಸ್‌ ಮಿಸ್‌: ರಜ​ನಿಗೆ ತಮಿ​ಳು​ನಾ​ಡಿನ ಹಿರಿ​ಯ ಸಚಿವ ದುರೈ​ಮು​ರು​ಗನ್‌ ಟಾಂಗ್‌

| Published : Aug 26 2024, 01:33 AM IST / Updated: Aug 26 2024, 04:47 AM IST

ಹಳೇ ನಟ​ರಿಂದ ಯುವ ನಟ​ರಿಗೆ ಚಾನ್ಸ್‌ ಮಿಸ್‌: ರಜ​ನಿಗೆ ತಮಿ​ಳು​ನಾ​ಡಿನ ಹಿರಿ​ಯ ಸಚಿವ ದುರೈ​ಮು​ರು​ಗನ್‌ ಟಾಂಗ್‌
Share this Article
  • FB
  • TW
  • Linkdin
  • Email

ಸಾರಾಂಶ

‘ಹ​ಳೆಯ, ಗಡ್ಡ ಬಿಟ್ಟ ಹಾಗೂ ಹಲ್ಲು ಬಿದ್ದಿ​ರುವ ನಟ​ರಿಂದ ಯುವ ನಟ​ರಿಗೆ ಅವಕಾ​ಶವೇ ಸಿಗ​ದಂತಾ​ಗಿ​ದೆ ಎಂದು ತಮಿ​ಳು​ನಾ​ಡಿನ ಹಿರಿ​ಯ ಸಚಿವ ದುರೈ​ಮು​ರು​ಗನ್‌ ಹೇಳಿ​ದ್ದಾರೆ.

ಚೆನ್ನೈ: ‘ಹ​ಳೆಯ, ಗಡ್ಡ ಬಿಟ್ಟಹಾಗೂ ಹಲ್ಲು ಬಿದ್ದಿ​ರುವ ನಟ​ರಿಂದ ಯುವ ನಟ​ರಿಗೆ ಅವಕಾ​ಶವೇ ಸಿಗ​ದಂತಾ​ಗಿ​ದೆ ಎಂದು ತಮಿ​ಳು​ನಾ​ಡಿನ ಹಿರಿ​ಯ ಸಚಿವ ದುರೈ​ಮು​ರು​ಗನ್‌ ಹೇಳಿ​ದ್ದಾರೆ. ನಟ ರಜ​ನೀ​ಕಾಂತ್‌ ರನ್ನು ಉದ್ದೇ​ಶಿ​ಸಿಯೇ ಅವರು ಹೀಗೆ ಹೇಳಿ​ದ್ದಾರೆ ಎಂದು ವಿಶ್ಲೇ​ಷಿ​ಸ​ಲಾ​ಗಿದೆ. ಇತ್ತೀ​ಚೆಗೆ ರಜನಿ ಅವರು ಸಿಎಂ ಎಂ.ಕೆ. ಸ್ಟಾಲಿ​ನ್‌​ರನ್ನು ಹೊಗಳಿ ಅವರ ಸುತ್ತ​ಲಿನ ಹಿರಿಯ ಸಚಿ​ವ​ರನ್ನು ತೆಗ​ಳಿ​ದ್ದರು. ಹೀಗಾಗಿ ದುರೈ​ಮು​ರು​ಗನ್‌ ರಜನಿ ಹಿರಿ​ ತನ ಉದ್ದೇ​ಶಿಸಿ ಟಾಂಗ್‌ ನೀಡಿ​ದ್ದಾರೆನ್ನ​ಲಾ​ಗಿದೆ.

ಬಿಡುಗಡೆಯಾದ 10 ದಿನಕ್ಕೇ ₹500 ಕೋಟಿ ಬಾಚಿಕೊಂಡ ‘ಸ್ತ್ರೀ-2’

ನವದೆಹಲಿ: ರಾಜ್‌ಕುಮಾರ್‌ ರಾವ್ ಮತ್ತು ಶ್ರದ್ಧಾ ಕಪೂರ್‌ ಅಭಿನಯದ ಹಾರರ್‌ ಕಾಮಿಡಿ ಚಿತ್ರ ‘ಸ್ತ್ರೀ-2’ ಬಿಡುಗಡೆಯಾದ 10 ದಿನಗಳಲ್ಲಿ ವಿಶ್ವಾದ್ಯಂತ ₹500 ಕೋಟಿ ಬಾಚಿಕೊಂಡಿದೆ.ಭಾರತದಲ್ಲಿ ₹426 ಕೋಟಿ ಹಾಗೂ ವಿದೇಶದಲ್ಲಿ ₹78.5 ಕೋಟಿ ಕಲೆಕ್ಷನ್‌ ಮಾಡಿದೆ. ಮದ್ದೊಕ್‌ ಫಿಲ್ಮ್ಸ್‌ ನಿರ್ಮಾಣದಲ್ಲಿ ಅಮರ್‌ ಕೌಶಿಕ್ ನಿರ್ದೇಶನದಲ್ಲಿ ಆ.15 ರಂದು ತೆರೆಕಂಡ ಈ ಚಿತ್ರವು 2018 ರಲ್ಲಿ ಬಿಡುಗಡೆಯಾದ ‘ಸ್ತ್ರೀ’ ಚಿತ್ರದ ಮುಂದುವರೆದ ಭಾಗವಾಗಿದೆ.

ಈ ಕುರಿತು ಮದ್ದೊಕ್‌ ಫಿಲ್ಮ್ಸ್‌ ತನ್ನ ಅಧಿಕೃತ ಟ್ವೀಟರ್‌ ಖಾತೆಯಲ್ಲಿ, ‘ಸ್ತ್ರೀ-2’ ಚಿತ್ರ ಬಿಡುಗಡೆಯಾದ 10 ದಿನಗಳಲ್ಲಿ 500 ಕೋಟಿ ರು. ಸಂಪಾದಿಸಿ ದಾಖಲೆ ನಿರ್ಮಿಸಿದೆ. ಸಿನಿ ಪ್ರೇಕ್ಷಕರ ಪ್ರೀತಿ ಹಾಗೂ ಬೆಂಬಲಕ್ಕಾಗಿ ಎಲ್ಲರಿಗೂ ಧನ್ಯವಾದಗಳು’ ಎಂದು ಫೋಸ್ಟ್‌ ಮಾಡಿದೆ.