ಜನರ ಸಮಸ್ಯೆ ಬಗ್ಗೆ ಮೋದಿ ಮೌನ: ಕಾಂಗ್ರೆಸ್‌ ಟೀಕೆ

| Published : Jul 01 2024, 01:51 AM IST / Updated: Jul 01 2024, 07:22 AM IST

PM Narendra Modi
ಜನರ ಸಮಸ್ಯೆ ಬಗ್ಗೆ ಮೋದಿ ಮೌನ: ಕಾಂಗ್ರೆಸ್‌ ಟೀಕೆ
Share this Article
  • FB
  • TW
  • Linkdin
  • Email

ಸಾರಾಂಶ

ಜನರು ತಮ್ಮ ಸಮಸ್ಯೆ ಬಗ್ಗೆ ಕೇಳಬಯಸುವ ಯಾವುದೇ ವಿಷಯಗಳ ಬಗ್ಗೆಯೂ ಪ್ರಧಾನಿ ನರೇಂದ್ರ ಮೋದಿ ತಮ್ಮ ಮನ್‌ ಕೀ ಬಾತ್‌ನಲ್ಲಿ ಜನರ ಸಮಸ್ಯೆಗಳ ಬಗ್ಗೆ ಯಾವುದೇ ಪ್ರಸ್ತಾಪ ಮಾಡಿಲ್ಲ ಎಂದು ಕಾಂಗ್ರೆಸ್‌ ಕಿಡಿಕಾರಿದೆ.

ನವದೆಹಲಿ: ಜನರು ತಮ್ಮ ಸಮಸ್ಯೆ ಬಗ್ಗೆ ಕೇಳಬಯಸುವ ಯಾವುದೇ ವಿಷಯಗಳ ಬಗ್ಗೆಯೂ ಪ್ರಧಾನಿ ನರೇಂದ್ರ ಮೋದಿ ತಮ್ಮ ಮನ್‌ ಕೀ ಬಾತ್‌ನಲ್ಲಿ ಜನರ ಸಮಸ್ಯೆಗಳ ಬಗ್ಗೆ ಯಾವುದೇ ಪ್ರಸ್ತಾಪ ಮಾಡಿಲ್ಲ ಎಂದು ಕಾಂಗ್ರೆಸ್‌ ಕಿಡಿಕಾರಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್‌ ವಕ್ತಾರ ಪವನ್‌ ಖೇರಾ, ‘ಇದು ಮೋದಿ ಅವರ ಮೂರನೇ ಅವಧಿ. ಆದರೆ ಪೂರ್ಣ ಸ್ವಂತ ಬಲದಿಂದ ಅಲ್ಲ. ಹೀಗಾಗಿ ಈ ಬಾರಿಯಾದರೂ ಅವರು ಸ್ವಲ್ಪ ಸಂವೇದನಾಶೀಲರಾಗಿ ಇರುತ್ತಾರೆ ಎಂದು ಅಂದುಕೊಂಡಿದ್ದೆವು. ಆದರೆ ಪ್ರಧಾನಿ ಮೋದಿ ಇತ್ತೀಚಿನ ನೀಟ್‌ ಪ್ರವೇಶ ಪರೀಕ್ಷೆ ಅಕ್ರಮ, ರೈಲ್ವೆ ಅಪಘಾತ, ಮೂಲಸೌಕರ್ಯ ಕುಸಿತ (ಸೇತುವೆ, ಮೇಲ್ಛಾವಣಿ ಕುಸಿತ)ದ ಬಗ್ಗೆ ಪ್ರಸ್ತಾಪಿಸಿಲ್ಲ.’ ಎಂದು ಟೀಕಿಸಿದರು.