ಜೈಪುರ: ‘ಕಾಂಗ್ರೆಸ್‌ ಸ್ವಜನಪಕ್ಷಪಾತವೆಂಬ ವಿಷವರ್ತುಲದೊಳಗೆ ಸಿಲುಕಿರುವ ಬಹುತೇಕರು ಕಾಂಗ್ರೆಸ್‌ ಪಕ್ಷವನ್ನು ಒಬ್ಬೊಬ್ಬರಾಗಿ ಬಿಡುತ್ತಿದ್ದಾರೆ.

ಕೊನೆಗೆ ಒಂದು ಕುಟುಂಬ ಮಾತ್ರ ಆ ಪಕ್ಷದೊಳಗೆ ಕಾಣುತ್ತಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ವ್ಯಂಗ್ಯವಾಡಿದ್ದಾರೆ. 

ವಿಕಸಿತ ಭಾರತ ವಿಕಸಿತ ರಾಜಸ್ಥಾನ ಸನಾವೇಶದಲ್ಲಿ ಮಾತನಾಡಿದ ಅವರು, ‘ಕಾಂಗ್ರೆಸ್‌ಗೆ ಏಕಮಾತ್ರ ಉದ್ದೇಶವಿದೆ. ಅದೆಂದರೆ ಪ್ರಧಾನಿ ಮೋದಿಯನ್ನು ವಿರೋಧಿಸುವುದು.


ಈ ಗುರಿಯನ್ನು ಸಾಧಿಸಲು ತಾನು ಸ್ವಜನಪಕ್ಷಪಾತವೆಂಬ ವಿಷವರ್ತುಲದೊಳಗೆ ಸಿಲುಕಿ ದೇಶವನ್ನು ಕಾಂಗ್ರೆಸ್‌ ಪಕ್ಷ ವಿಭಜಿಸಿದೆ. ಆ ಪಕ್ಷಕ್ಕೆ ಕುಟುಂಬ ರಾಜಕಾರಣ ಬಿಟ್ಟು ಬೇರೇನೂ ಗೊತ್ತಿಲ್ಲ. 

ಹಾಗಾಗಿ ಇಂದು ಎಲ್ಲರೂ ಕಾಂಗ್ರೆಸ್‌ ಪಕ್ಷವನ್ನು ತೊರೆಯುತ್ತಿದ್ದು, ಕೇವಲ ಒಂದು ಕುಟುಂಬವನ್ನು ಮಾತ್ರ ಆ ಪಕ್ಷದಲ್ಲಿ ಕಾಣಬಹುದಾಗಿದೆ’ ಎಂದು ಟೀಕಿಸಿದರು.