ಕ। ಸೋಫಿಯಾ ಖುರೇಷಿ ಬಗ್ಗೆ ಕೀಳು ನುಡಿ : ಕ್ಷಮೆ ಕೇಳದ ಸಚಿವಗೆ ಸುಪ್ರೀಂ ಚಾಟಿ

| N/A | Published : Jul 29 2025, 01:01 AM IST / Updated: Jul 29 2025, 02:16 AM IST

ಕ। ಸೋಫಿಯಾ ಖುರೇಷಿ ಬಗ್ಗೆ ಕೀಳು ನುಡಿ : ಕ್ಷಮೆ ಕೇಳದ ಸಚಿವಗೆ ಸುಪ್ರೀಂ ಚಾಟಿ
Share this Article
  • FB
  • TW
  • Linkdin
  • Email

ಸಾರಾಂಶ

ಭಾರತೀಯ ಸೇನೆಯ ಆಪರೇಷನ್‌ ಸಿಂದೂರದ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡುತ್ತಿದ್ದ ಸೇನಾಧಿಕಾರಿ ಕ। ಸೋಫಿಯಾ ಖುರೇಷಿ ಅವರನ್ನು ‘ಉಗ್ರರ ಸಹೋದರಿ’ ಎಂದಿದ್ದ ಮಧ್ಯಪ್ರದೇಶದ ಸಚಿವ ಕುನ್ವರ್‌ ವಿಜಯ್‌ ಶಾಗೆ ಮತ್ತೆ ಚಾಟಿ ಬೀಸಿರುವ ಸುಪ್ರೀಂ ಕೋರ್ಟ್‌ 

ನವದೆಹಲಿ: ಭಾರತೀಯ ಸೇನೆಯ ಆಪರೇಷನ್‌ ಸಿಂದೂರದ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡುತ್ತಿದ್ದ ಸೇನಾಧಿಕಾರಿ ಕ। ಸೋಫಿಯಾ ಖುರೇಷಿ ಅವರನ್ನು ‘ಉಗ್ರರ ಸಹೋದರಿ’ ಎಂದಿದ್ದ ಮಧ್ಯಪ್ರದೇಶದ ಸಚಿವ ಕುನ್ವರ್‌ ವಿಜಯ್‌ ಶಾಗೆ ಮತ್ತೆ ಚಾಟಿ ಬೀಸಿರುವ ಸುಪ್ರೀಂ ಕೋರ್ಟ್‌, ‘ಇನ್ನೂ ಏಕೆ ಬಹಿರಂಗ ಕ್ಷಮೆ ಕೇಳಿಲ್ಲ?’ ಎಂದು ಪ್ರಶ್ನಿಸಿದೆ.

ಸೋಮವಾರ ವಿಚಾರಣೆ ನಡೆಸಿದ ದ್ವಿಸದಸ್ಯ ಪೀಠ, ‘ಅವರು ನಡೆದುಕೊಳ್ಳುತ್ತಿರುವ ರೀತಿ ನೋಡಿದರೆ, ಪ್ರಮಾಣಿಕತೆ ಮತ್ತು ಉದ್ದೇಶಗಳ ಬಗ್ಗೆ ಸಂಶಯವಾಗುತ್ತಿದೆ’ ಎಂದಿತು. ಆಗ ಶಾ ಪರ ವಾದ ಮಂಡಿಸಿದ ವಕೀಲರು, ‘ಅವರು ಆನ್‌ಲೈನ್‌ನಲ್ಲಿ ಕ್ಷಮೆ ಯಾಚಿಸಿದ್ದರು’ ಎಂದರು. 

ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಈ ಬಗ್ಗೆ ಆ.13ರರೊಳಗಾಗಿ ವರದಿ ಸಲ್ಲಿಸುವಂತೆ ವಿಶೇಷ ತನಿಖಾ ತಂಡಕ್ಕೆ ಆದೇಶಿಸಿ, ವಿಚಾರಣೆಯನ್ನು ಆಗಸ್ಟ್ 18ಕ್ಕೆ ಮುಂದೂಡಿತು.

Read more Articles on