ಸಾರಾಂಶ
ಮಹಾರಾಷ್ಟ್ರದಲ್ಲಿ ಎನ್ಡಿಎ ಸರ್ಕಾರ ರಚನೆಗೊಂಡರೂ ಎರಡೂ ಮೈತ್ರಿಕೂಟದಲ್ಲಿನ ಒಳಏಟು, ಒಳಪೆಟ್ಟು ನಿಂತಿಲ್ಲ. ಡಿಸಿಎಂ ಶಿಂಧೆಗೆ ಸಿಎಂ ಫಡ್ನವೀಸ್ ಟಾಂಗ್ ಕೊಟ್ಟಿದ್ದರೆ, ಉದ್ಧವ್ ಬಣಕ್ಕೆ ಶರದ್ ಪವಾರ್ ಚಿವುಟಿದ್ದಾರೆ. ಈ ಬೆಳವಣಿಗೆ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ.
ಮುಂಬೈ : ಮಹಾರಾಷ್ಟ್ರದಲ್ಲಿ ಮಹಾವಿಕಾಶ ಅಘಾಡಿ ಸರ್ಕಾರ ಪತನಗೊಂಡು, ಎನ್ಡಿಎ ಸರ್ಕಾರ ರಚನೆಗೊಂಡರೂ ಎರಡೂ ಮೈತ್ರಿಕೂಟದಲ್ಲಿನ ಒಳಏಟು, ಒಳಪೆಟ್ಟು ನಿಂತಿಲ್ಲ. ಇದಕ್ಕೆ ಉದಾಹರಣೆಯಾಗಿ ಸೋಮವಾರದಿಂದೀಚೆಗೆ ಹಲವು ಬೆಳವಣಿಗೆ ನಡೆದಿವೆ.
ಡಿಸಿಎಂ ಶಿಂಧೆಗೆ ಸಿಎಂ ಫಡ್ನವೀಸ್ ಟಾಂಗ್ ಕೊಟ್ಟಿದ್ದರೆ, ಉದ್ಧವ್ ಬಣಕ್ಕೆ ಶರದ್ ಪವಾರ್ ಚಿವುಟಿದ್ದಾರೆ. ಈ ಬೆಳವಣಿಗೆ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ.