ಸಿಎಎಗೆ ತಮಿಳು ನಟ ಕಮಲ್‌ ಹಾಸನ್‌, ವಿಜಯ್‌ ಅಪಸ್ವರ

| Published : Mar 13 2024, 02:05 AM IST

ಸಿಎಎಗೆ ತಮಿಳು ನಟ ಕಮಲ್‌ ಹಾಸನ್‌, ವಿಜಯ್‌ ಅಪಸ್ವರ
Share this Article
  • FB
  • TW
  • Linkdin
  • Email

ಸಾರಾಂಶ

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಜಾರಿಗೆ ನಟ, ಎಂಎನ್ಎಂ ಸ್ಥಾಪಕ ಕಮಲ್‌ ಹಾಸನ್‌ ಹಾಗೂ ನಟ ಕಂ ರಾಜಕಾರಣಿ ವಿಜಯ್‌ ವಿರೋಧ ವ್ಯಕ್ತಪಡಿಸಿದ್ದಾರೆ.

ಚೆನ್ನೈ: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಜಾರಿಗೆ ನಟ, ಎಂಎನ್ಎಂ ಸ್ಥಾಪಕ ಕಮಲ್‌ ಹಾಸನ್‌ ಹಾಗೂ ನಟ ಕಂ ರಾಜಕಾರಣಿ ವಿಜಯ್‌ ವಿರೋಧ ವ್ಯಕ್ತಪಡಿಸಿದ್ದಾರೆ.ಕಮಲ್‌ ಹಾಸನ್‌ ಮಾತನಾಡಿ, ‘ಪೌರತ್ವ ತಿದ್ದುಪಡಿ ಕಾಯ್ದೆಯು ಸಮಾನತೆಯ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ಮೊದಲ ಬಾರಿಗೆ ಸುಪ್ರೀಂ ಕೋರ್ಟ್‌ನಲ್ಲಿ ನಮ್ಮ ಪಕ್ಷದ ವತಿಯಿಂದಲೇ ಅರ್ಜಿ ಸಲ್ಲಿಸಲಾಗಿತ್ತು. ಈಗಲೂ ಕಾಯ್ದೆ ಜಾರಿಗೆ ವಿರೋಧ ಮಾಡುತ್ತೇವೆ. ಅದನ್ನು ಜಾರಿ ಮಾಡುವುದೇ ಆದರಲ್ಲಿ ಶ್ರೀಲಂಕಾದಲ್ಲಿ ದೌರ್ಜನ್ಯಕ್ಕೊಳಗಾಗಿರುವ ತಮಿಳರನ್ನೂ ಕಾಯ್ದೆ ವ್ಯಾಪ್ತಿಗೆ ಸೇರಿಸಬೇಕು’ ಎಂದು ಆಗ್ರಹಿಸಿದ್ದಾರೆ.

ತಮಿಳಿನ ಖ್ಯಾತ ನಟ ವಿಜಯ್‌ ಮಾತನಾಡಿ ‘ಸಿಎಎ ಜಾರಿ ಒಪ್ಪಲಾಗದು. ದೇಶದ ಜನರು ಸೌಹಾರ್ದಯುತವಾಗಿ ಬದುಕುತ್ತಿದ್ದಾರೆ. ಇದನ್ನು ಕದಡಲು ಕೇಂದ್ರ ಸರ್ಕಾರ ಸಿಎಎ ಜಾರಿ ತಂದಿದೆ. ತಮಿಳುನಾಡು ಸರ್ಕಾರ ಇದನ್ನು ಜಾರಿ ಮಾಡಬಾರದು’ ಎಂದು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ಗೆ ಪತ್ರದಲ್ಲಿ ಹೇಳಿದ್ದಾರೆ.