ಕೆ.ಎಂ.ದೊಡ್ಡಿಯಲ್ಲಿ 206ನೇ ಭೀಮ್ ಕೊರೇಗಾಂವ್ ವಿಜ್ಯೋತ್ಸವ ಆಚರಣೆ

| Published : Jan 02 2024, 02:15 AM IST

ಕೆ.ಎಂ.ದೊಡ್ಡಿಯಲ್ಲಿ 206ನೇ ಭೀಮ್ ಕೊರೇಗಾಂವ್ ವಿಜ್ಯೋತ್ಸವ ಆಚರಣೆ
Share this Article
  • FB
  • TW
  • Linkdin
  • Email

ಸಾರಾಂಶ

ಮಹಾರಾಷ್ಟ್ರದ ಪೂಣೆಯಲ್ಲಿ ಪ್ರತಿ ವರ್ಷ ಜ.1 ರಂದು ಅಸ್ಪೃಶ್ಯರ ವಿಜಯ ದಿನ ಭೀಮ್ ಕೊರೇಗಾಂವ್ ಎಂದು ಆಚರಣೆ ಮಾಡಲಾಗುತ್ತಿದೆ. ಇದು ಏಕೆ ನಡೆಯಿತು ಅನ್ನುವ ನೈಜ್ಯ ಇತಿಹಾಸವನ್ನು ಡಾ.ಬಿ.ಆರ್.ಅಂಬೇಡ್ಕರ್ ಜಗತ್ತಿಗೆ ಸಾರಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಭಾರತೀನಗರ

ಕಳೆದ 6 ವರ್ಷಗಳಿಂದೀಚೆಗೆ ದೇಶದಲ್ಲಿ ಭೀಮ್ ಕೊರೇಗಾಂವ್ ವಿಚಾರ ವಿಸ್ತಾರಗೊಳ್ಳುತ್ತಿದೆ ಎಂದು ಹಿರಿಯ ದಲಿತ ಮುಖಂಡ ಸಿ.ಎ. ಕೆರೆ ಮೂರ್ತಿ ಹೇಳಿದರು.

ವಿಶ್ವೇಶ್ವರಯ್ಯ ವೃತ್ತದ ಬಳಿ ದಲಿತ ಪ್ರಗತಿಪರ ಸಂಘಟನೆಗಳಿಂದ ನಡೆದ ಭೀಮ್ ಕೊರೇಗಾಂವ್ ವಿಜಯೋತ್ಸವ ವೇಳೆ ಮಾತನಾಡಿ, 1818ರ ಜ.1ರಂದು ಮಹರ್ ರೆಜಿಮೆಂಟ್‌ನ ಭೀಮಾ ಕೋರೆಗಾಂವ್ ಯುದ್ಧದಲ್ಲಿ ಜಯಗಳಿಸಿದ ದಲಿತ ಸ್ವಾಭಿಮಾನಿ, ಸೈನಿಕರ ರಕ್ತ ಚರಿತ್ರೆ ದೇಶದ ಎಲ್ಲರಿಗೂ ತಿಳಿಯ ಬೇಕಿದೆ ಎಂದರು.

ದೇಶದ ಸಾಕಷ್ಟು ಜನರಲ್ಲಿ ಮತ್ತು ವಿದ್ಯಾವಂತರಲ್ಲಿ ಹಾಗೂ ಹಳ್ಳಿಹಳ್ಳಿಗಳಲ್ಲಿ ಸ್ವಾಭಿಮಾನವನ್ನು ಅರಳಿಸುತ್ತಿದೆ. ಈ ಭೀಮಾ ಕೊರೇಗಾಂವ್ ಎಂದರೆ ಮಹಾರಾಷ್ಟ್ರದ ಭೀಮಾತೀರದಲ್ಲಿರುವ ಕೋರೆಗಾಂವ್ ಗ್ರಾಮದಲ್ಲಿ ಪೇಶ್ವೆಗಳಿಗೂ ಮಹಲ್ ರೆಜಿಮೆಂಟ್ ಸೈನಿಕರಿಗೂ ನಡೆದ ಮಹಾ ಯುದ್ಧವಾಗಿದೆ ಎಂದರು.

ಇದು ಏಕೆ ನಡೆಯಿತು ಅನ್ನುವ ನೈಜ್ಯ ಇತಿಹಾಸವನ್ನು ಡಾ.ಬಿ.ಆರ್.ಅಂಬೇಡ್ಕರ್ ಜಗತ್ತಿಗೆ ಸಾರಿ ಹೇಳಿದ್ದಾರೆ. ಈ ಯುದ್ಧವು ದಲಿತರ ಸ್ವಾಭಿಮಾನದ ಬದುಕು, ಶಿಕ್ಷಣ, ಗೌರವಯುತ ಉದ್ಯೋಗಕ್ಕಾಗಿ ನಡೆಯಿತು ಎಂದರು.

ಡಾ.ಬಿ.ಆರ್‌.ಅಂಬೇಡ್ಕರ್‌ ಶೋಧನೆಯಿಂದ ಈ ಸ್ವಾಭಿಮಾನದ ನಮ್ಮ ಪೂರ್ವಿಕರ ಇತಿಹಾಸ ಬೆಳಕಿಗೆ ಬಂದಿದೆ. ನಾವು ನೀವು ಪ್ರಸ್ತುತ ಈ ಸಾಮಾಜಿಕ ಜೀವನದಲ್ಲಿ ಎಲ್ಲರಂತೆ ಬದುಕುತ್ತಿದ್ದೇವೆ ಎಂದರೆ ಅದಕ್ಕೆ ಇಂತಹ ಹೋರಾಟಗಳೇ ಕಾರಣವಾಗಿವೆ ಎಂದರು.

ಸಮತ ಸೈನಿಕ ದಳದ ಜಿಲ್ಲಾಧ್ಯಕ್ಷ ಕರಡಕೆರೆ ಯೋಗೇಶ್ ಮಾತನಾಡಿ, 200 ವರ್ಷಗಳ ಹಿಂದೆ ಮಹಾರಾಷ್ಟ್ರದಲ್ಲಿ ಪೇಶ್ವೆಗಳ ಆಡಳಿತದಲ್ಲಿ ಅಸ್ಪೃಶ್ಯರಿಗೆ ಮೂಲಭೂತ ಹಕ್ಕುಗಳು ಇರಲಿಲ್ಲ. ಅವರ ವಿರುದ್ಧ 500 ಜನರ ದಲಿತ ಸೈನಿಕರು 28 ಸಾವಿರ ಪೇಶ್ವೆಗಳ ವಿರುದ್ಧ ಯುದ್ಧ ಮಾಡಿ ಸೋಲಿಸಿ ಅಸ್ಪೃಶ್ಯರಿಗೆ ಮೂಲ ಹಕ್ಕುಗಳನ್ನು ಕೊಡಿಸಿದರು ಎಂದರು.

ಈ ಯುದ್ಧದ ಸಂಕೇತವಾಗಿ ಮಹಾರಾಷ್ಟ್ರದಲ್ಲಿ 500 ಜನರ ಸೈನಿಕ ನೆನಪಿಗಾಗಿ ಧ್ವಜಕಂಭ ನಿರ್ಮಿಸಲಾಗಿದೆ. ಮಹಾರಾಷ್ಟ್ರದ ಪೂಣೆಯಲ್ಲಿ ಪ್ರತಿ ವರ್ಷ ಜ.1 ರಂದು ಅಸ್ಪೃಶ್ಯರ ವಿಜಯ ದಿನ ಭೀಮ್ ಕೊರೇಗಾಂವ್ ಎಂದು ಆಚರಣೆ ಮಾಡಲಾಗುತ್ತಿದೆ ಎಂದರು.

ಈ ವೇಳೆ ಅಂಬೇಡ್ಕರ್ ಭಾವಚಿತ್ರಕ್ಕೆ ಪುಪ್ಪಾರ್ಚನೆ ಮಾಡಿ ಗೌರವ ಸಮರ್ಪಿಸಿದರು. ಕಬ್ಬಾಳಯ್ಯ, ರಘುವೆಂಕಟೇಗೌಡ, ಮುಡೀನಹಳ್ಳಿ ತಿಮ್ಮಯ್ಯ, ಮಡೇನಹಳ್ಳಿ ಸಿದ್ದರಾಮಯ್ಯ, ಕಾಡುಕೊತ್ತನಹಳ್ಳಿ ರಾಜು, ಲೋಕೇಶ್, ಕಾರ್ಕಹಳ್ಳಿ ಬಸವರಾಜು, ಮಣಿಗೆರೆ ಪವನ, ಹೊಂಬಯ್ಯ, ಅಭಿ, ಶಶಿ, ಪುನೀತ್, ಪ್ರಸಾದ್, ಬಸವರಾಜು, ಸೇರಿದಂತೆ ಹಲವರಿದ್ದರು.