ಕನ್ನಡಪ್ರಭ ವಾರ್ತೆ ಪಾವಗಡ

ತಾಲೂಕಿನ ವೈ.ಎನ್‌.ಹೊಸಕೋಟೆ ಹೋಬಳಿ ವ್ಯಾಪ್ತಿಯಲ್ಲಿ ಸಿಸಿರಸ್ತೆ, ಚರಂಡಿ ಹಾಗೂ ಡಾಂಬರೀಕರಣ ಸಂಪರ್ಕ ರಸ್ತೆ ಸೇರಿದಂತೆ ಇತರೆ 4 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶನಿವಾರ ಶಾಸಕ ಹಾಗೂ ತುಮುಲ್‌ ಅಧ್ಯಕ್ಷ ಎಚ್‌.ವಿ.ವೆಂಕಟೇಶ್‌ ಭೂಮಿ ಪೂಜೆ ನೆರೆವೇರಿಸಿದರು

ತಾಲೂಕಿನ ಜೆ.ಅಚ್ಚಮನಹಳ್ಳಿ-ಮೇಗಳಪಾಳ್ಯ ಮಾರ್ಗದ 1ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ, ಬೂದಿಬೆಟ್ಟ- ರಾಚಮಾರನಹಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ 50 ಲಕ್ಷ ವೆಚ್ಚದ ಡಾಂಬರ್ ರಸ್ತೆ ನಿರ್ಮಾಣ, ₹ 50 ಲಕ್ಷ ರೂ.ಗಳ ಅನುದಾನದಲ್ಲಿ ತಿಪ್ಪಗಾನಹಳ್ಳಿಯಿಂದ- ಬಲ್ಲೆನಹಳ್ಳಿಗೆ ಸಂಪರ್ಕ ರಸ್ತೆಗಳ ಪ್ರಗತಿ ಮತ್ತು ತಾ,ವೈ.ಎನ್‌.ಹೊಸಕೋಟೆಯಲ್ಲಿ 1ಲಕ್ಷ ವೆಚ್ಚದ ಅಂಬೇಡ್ಕರ್ ವೃತ್ತ ದಿಂದ ಬಸ್ ನಿಲ್ದಾಣದವರೆಗೆ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣದ ಕಾಮಗಾರಿಗೆ ಚಾಲನೆ ನೀಡಿದರು. ಇದೇ ವೇಳೆ ತುಮುಲ್‌ ನಿರ್ದೇಶಕ ಚಂದ್ರಶೇಖರರೆಡ್ಡಿ,ಆರ್ಯ ಈಡಿಗ ಸಮಾಜದ ಅಧ್ಯಕ್ಷ,ವೀರಾಂಜನೇಯ,ಸ್ಥಳೀಯ ಮುಖಂಡರಾದ ಮಲ್ಲರೆಡ್ಡಿ ಅರುಣ್ ಕುಮಾರ್,ಬೋರಪ್ಪ, ಹರಿರೆಡ್ಡಿ,ವಿರೂಪಾಕ್ಷಪ್ಪ,ಕೆಂಚಪ್ಪ,ದಶರಥ, ಆನಂದಪ್ಪ, ಚಂದ್ರಶೇಖರಪ್ಪ, ಜಿ ಟಿ ರೆಡ್ಡಿ, ನಾರಾಯಣಪ್ಪ, ಪ್ರಕಾಶ್,ರಾಜಕುಮಾರ್,ಸುಬ್ಬರೆಡ್ಡಿ, ರಂಗಪ್ಪ,ಟಿಪಿಎಸ್‌ ಹನುಮಂತರಾಯಪ್ಪ, ಬಲರಾಮಯ್ಯ, ವೆಂಕಟೇಶ್,ದಿವಾಕರಪ್ಪ ಇತರರಿದ್ದರು.