ಹಾವು ಕಡಿತಕ್ಕೆ 5, ಸಿಡಿಲಿಗೆ 12 ಕುರಿಮರಿಗಳ ದುರ್ಮರಣ

| Published : May 23 2025, 12:05 AM IST

ಸಾರಾಂಶ

5 lambs die from snake bites, 12 from lightning

ಯಾದಗಿರಿ: ಸಮೀಪದ ಯರಗೋಳ ಗ್ರಾಮದಲ್ಲಿ ಬುಧವಾರ ನಸುಕಿನ ಜಾವ ಗವಿಸಿದ್ದಲಿಂಗೇಶ್ವರ ಮಠದ ಆವರಣದಲ್ಲಿ ತಂಗಿದ್ದ ರೈತ ಕಾಳಪ್ಪ ಇದ್ಲಿ ಅವರಿಗೆ ಸೇರಿದ 5 ಆಡು ಮರಿಗಳು ಹಾವು ಕಚ್ಚಿ ಮೃತಪಟ್ಟರೆ, ಮಧ್ಯಾಹ್ನದ ಹೊತ್ತಿನಲ್ಲಿ ಇದೇ ರೈತನಿಗೆ ಸೇರಿದ 12 ಆಡುಗಳು ಚಿಲಕಲ್ ಗುಡ್ಡದಲ್ಲಿ ಸಿಡಿಲು ಬಡಿದು ಮೃತಪಟ್ಟಿವೆ. ಹಾವನ್ನು ಕಟ್ಟಿಗೆಯಿಂದ ಹೊಡೆದು ಸಾಯಿಸಿದ್ದಾರೆ ಎಂದು ಯುವಕರಾದ ರಾಕೇಶ್ ಜೋಗಿ, ಗ್ರಾಮ ಪಂಚಾಯತಿ ಸದಸ್ಯ ಪುಂಡಲೀಕ ಹಿರಿಕೇರಿ ತಿಳಿಸಿದರು.22ವೈಡಿಆರ್‌5 ಹಾಗೂ 22ವೈಡಿಆರ್‌6 :