ಸಾರಾಂಶ
ದಾಬಸ್ಪೇಟೆ: ರಸ್ತೆ ದಾಟುತ್ತಿದ್ದ ಓಂಶಕ್ತಿ ಮಾಲಾಧಾರಿ ಮಹಿಳೆಯರಿಗೆ ಶಾಸಕರ ಪಾಸ್ ಇದ್ದ ಕಾರು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮಹಿಳೆಯರು ಗಾಯಗೊಂಡಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 48ರ ಟಿ.ಬೇಗೂರು ಬಳಿ ನಡೆದಿದೆ.
ದಾಬಸ್ಪೇಟೆ: ರಸ್ತೆ ದಾಟುತ್ತಿದ್ದ ಓಂಶಕ್ತಿ ಮಾಲಾಧಾರಿ ಮಹಿಳೆಯರಿಗೆ ಶಾಸಕರ ಪಾಸ್ ಇದ್ದ ಕಾರು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮಹಿಳೆಯರು ಗಾಯಗೊಂಡಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 48ರ ಟಿ.ಬೇಗೂರು ಬಳಿ ನಡೆದಿದೆ.
ಗುರುವಾರ ಬೆಳಿಗ್ಗೆ ಚಿತ್ರದುರ್ಗದಿಂದ ತುಮಕೂರು ಮಾರ್ಗವಾಗಿ ಬೆಂಗಳೂರು ಕಡೆಗೆ ಬರುತ್ತಿದ್ದ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಅವರ ಪಾಸ್ ಇದ್ದ ಬೆಂಜ್ ಕಾರು ಡಿಕ್ಕಿ ಹೊಡೆದಿದೆ. ಬೇಗೂರು ಗ್ರಾಮದ ನಿವಾಸಿಗಳಾದ ರಂಗಮ್ಮ(55), ಬಿಂದು(23) ಓಂ ಶಕ್ತಿ ಮಾಲೆ ಧರಿಸಿದ್ದರು. ಇವರಿಬ್ಬರು ಪೂಜೆಗಾಗಿ ಸಂಬಂಧಿಕರ ಮನೆಗೆ ಹೋಗಲು ರಸ್ತೆ ದಾಟುವಾಗ ಅಪಘಾತ ಸಂಭವಿಸಿದೆ. ಕೂಡಲೇ ಕಾರಿನಲ್ಲಿದ್ದ ವ್ಯಕ್ತಿಯೇ ರಸ್ತೆಯಲ್ಲಿ ಬಿದ್ದಿದ್ದ ಮಹಿಳೆಯರನ್ನು ಅದೇ ಕಾರಿನಲ್ಲಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದಾರೆ.ಶಾಸಕರ ಪತ್ನಿ ಸಂಚರಿಸುತ್ತಿದ್ದರು: ಬೆಂಜ್ ಕಾರಿನಲ್ಲಿ ಕಾಂಗ್ರೆಸ್ ಶಾಸಕ ವೀರೇಂದ್ರ ಪಪ್ಪಿ ಪತ್ನಿ ಚೈತ್ರಾ ಬೆಂಗಳೂರಿಗೆ ಹೋಗುತ್ತಿದ್ದರು ಎನ್ನಲಾಗಿದೆ. ಅಪಘಾತ ಸಂಭವಿಸಿದ ಬಳಿಕ ಶಾಸಕರ ಕಾರಿನಲ್ಲಿ ಬೆಂಗಳೂರಿಗೆ ಹೋದರು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಆದರೆ, ಪೊಲೀಸರು ಇದು ಶಾಸಕರ ಪಾಸ್ ಇದ್ದ ಸಂಬಂಧಿಕರ ಕಾರು, ಶಾಸಕರ ಕಾರಲ್ಲ, ಕಾರಿನಲ್ಲಿ ಮೂವರು ಮಾತ್ರ ಇದ್ದರು ಎಂದು ಮಾಹಿತಿ ನೀಡಿದ್ದಾರೆ.
ಮಹಿಳೆಯರಿಗೆ ಚಿಕಿತ್ಸೆ: ಮಹಿಳೆಯರಿಗೆ ಕಾರು ಡಿಕ್ಕಿ ಆಗುತ್ತಿದ್ದಂತೆ ಇಬ್ಬರನ್ನು ಬೆಂಜ್ ಕಾರಿನಲ್ಲಿಯೇ ನೆಲಮಂಗಲದ ಖಾಸಗಿ ಆಸ್ಪತ್ರೆಗೆ ಕರೆ ತಂದು ತಕ್ಷಣ ಚಿಕಿತ್ಸೆ ಕೊಡಿಸಿ ಸಂಪೂರ್ಣ ಚಿಕಿತ್ಸೆ ಮುಗಿಸುವ ತನಕ ಆಸ್ಪತ್ರೆಯಲ್ಲಿಯೇ ಇದ್ದು ಚಿಕಿತ್ಸೆಯ ವೆಚ್ಚವನ್ನು ಅವರೇ ಬರಿಸಿದ್ದಾರೆ ಎಂದು ಗಾಯಾಳುಗಳ ಸಂಬಂಧಿಕರು ಮಾಹಿತಿ ನೀಡಿದ್ದಾರೆ. ---ಪೋಟೋ 8 : ಡಿಕ್ಕಿ ಹೊಡೆದಿರುವ ಕಾರು.
ಪೋಟೋ 9 : ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಿರುವುದು.