ವೈಭವಯುತವಾಗಿ ನಡೆದ ವೈಕುಂಠ ಏಕಾದಶಿ

| Published : Jan 11 2025, 12:45 AM IST

ಸಾರಾಂಶ

ವೈ​ಕುಂಠ ಏ​ಕಾ​ದ​ಶಿ​ಯಂದು ದೈ​ವ​ತ್ವದ ಬಾ​ಗಿ​ಲು ತೆ​ರೆ​ಯು​ತ್ತದೆ ಎಂಬ ನಂಬಿಕೆ. ಕು​ಟುಂಬ ಸ​ಮೇತ ವೆಂಕ​ಟೇ​ಶ್ವರ ದೇ​ವ​ಸ್ಥಾ​ನ​ಗ​ಳಿಗೆ ತೆ​ರಳಿ ಪೂ​ಜೆ, ಅ​ಭಿ​ಷೇಕ ಸ​ಮ​ರ್ಪಿಸಿ ವೆಂಕೆ​ಟೇ​ಶ್ವರ ದೇ​ವರ ದ​ರ್ಶ​ನಾ​ಶೀ​ರ್ವಾದ ಪ​ಡೆದು ಪು​ನೀತ​ರಾ​ದರು.

ಹು​ಬ್ಬಳ್ಳಿ:

ಮ​ಹಾ​ನ​ಗ​ರ​ದ ವಿ​ವಿಧ ದೇ​ವಾ​ಲ​ಯ​, ಮನೆ-ಮ​ನೆ​ಗ​ಳಲ್ಲಿ ವೈ​ಕುಂಠ ಏ​ಕಾ​ದಶಿಯನ್ನು ವೈ​ಭ​ವ​ಯು​ತ​ವಾಗಿ ಆ​ಚ​ರಿ​ಸ​ಲಾ​ಯಿ​ತು.

ವೈ​ಕುಂಠ ಏ​ಕಾ​ದ​ಶಿ​ಯಂದು ದೈ​ವ​ತ್ವದ ಬಾ​ಗಿ​ಲು ತೆ​ರೆ​ಯು​ತ್ತದೆ ಎಂಬ ನಂಬಿಕೆ. ಕು​ಟುಂಬ ಸ​ಮೇತ ವೆಂಕ​ಟೇ​ಶ್ವರ ದೇ​ವ​ಸ್ಥಾ​ನ​ಗ​ಳಿಗೆ ತೆ​ರಳಿ ಪೂ​ಜೆ, ಅ​ಭಿ​ಷೇಕ ಸ​ಮ​ರ್ಪಿಸಿ ವೆಂಕೆ​ಟೇ​ಶ್ವರ ದೇ​ವರ ದ​ರ್ಶ​ನಾ​ಶೀ​ರ್ವಾದ ಪ​ಡೆದು ಪು​ನೀತ​ರಾ​ದರು.

ನೃ​ಪ​ತುಂಗ ಬೆ​ಟ್ಟ​ದ​​ಲ್ಲಿ​ರುವ ವೆಂಕ​ಟೇ​ಶ್ವರ ದೇ​ವ​ಸ್ಥಾನ, ಕುಂಬ​ಕೋಣಂ ಹಾಗೂ ರಾ​ಯಾ​ಪುರ ಇ​ಸ್ಕಾನ್‌ ಮಂದಿ​ರ​ದಲ್ಲಿ ಶ್ರೀ​ನಿ​ವಾಸ ಕ​ಲ್ಯಾ​ಣೋ​ತ್ಸ​ವದ ಉ​ತ್ಸಾಹ ಸಂಭ್ರ​ಮದಿಂದ ಕೂ​ಡಿ​ದ್ದ​ವು. ಭಗವಂತನ ದರ್ಶನಕ್ಕಾಗಿ ಸಾ​ವಿ​ರಾ​ರು ಭಕ್ತರು ಆಗಮಿಸಿದ್ದರು.ಇ​ಸ್ಕಾನ್‌ ಮಂದಿ​ರ​ದಲ್ಲಿ ಬೆಳಗಿನ ಜಾವ 4.30ಕ್ಕೆ ಶ್ರೀ​ಕೃಷ್ಣ ಬಲರಾಮರ ಮಹಾ ಮಂಗಳಾರತಿಯೊಂದಿಗೆ ಶುಕ್ರವಾರದ ಕಾರ್ಯಕ್ರಮ ಆರಂಭವಾದವು. ಈ ಸಮಯದಲ್ಲಿ ನೂರಾರು ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ವೈಕುಂಠ ನಾರಾಯಣನ ಅಲಂಕಾರದಲ್ಲಿದ್ದ ​ಶ್ರೀ​ಕೃಷ್ಣನ ದರ್ಶನ ಪ​ಡೆದು ಭ​ಕ್ತರು ಧ​ನ್ಯತೆ ಮೆರೆದರು. ಭಗವಂತನನ್ನು ಸ್ತುತಿಸುವ ಭಜನೆ ಹಾಗೂ ಕೀರ್ತನೆಗಳಲ್ಲಿ ಪಾ​ಲ್ಗೊಂಡು ಭಾವುಕರಾದ ಭಕ್ತರು ಭಗವಂತನ ವಿಗ್ರಹಗಳ ಮುಂದೆ ನರ್ತಿಸಿದರು.

ವಿಶೇಷವಾಗಿ ಅಲಂಕರಿಸಿ ಸ್ಥಾಪಿಸಲಾಗಿದ್ದ ಸ್ವರ್ಣ ವರ್ಣದ ವೈಕುಂಠ ದ್ವಾರವನ್ನು 10.30ಕ್ಕೆ ತೆರೆಯಲಾಯಿತು. ಈ ಮಂಗಳಕರ ಸಂದರ್ಭಕ್ಕೆಂದೇ ಭಗವಂತನ ಒಂದು ಲಕ್ಷನಾಮಗಳ ಜಪ ಸೇವೆಯು ಇಡೀ ದಿನ ನೆರವೇರಿತು. ವಿಶೇಷ ಮಂಟಪದ ಮುಂದೆ ಸುಂದರವಾಗಿ ಅಲಂಕಾರದೊಂದಿಗೆ ಸ್ಥಾಪಿತಗೊಂಡ ಕಲಶಗಳಿಗೆ ಭ​ಕ್ತರು ಪುಷ್ಪಾರ್ಚನೆ ಸೇವೆ ಮಾ​ಡಿ ಭ​ಕ್ತಿಯ ಪ​ರ​ವ​ಶ​ರಾ​ದ​ರು.

ಶ್ರೀವೈಕುಂಠ ನಾರಾಯಣನನ ಕೃಪೆ ಮತ್ತು ವಿಶ್ವ ಶಾಂತಿಗಾಗಿ ಮ​ಹ​ತ್ವ​ವಾ​ದ ವೆಂಕಟೇಶ್ವರನ ಹೋಮ ನೆ​ರ​ವೇ​ರಿ​ಸ​ಲಾಯಿತು.