ಸೂಲಿಬೆಲೆ: ಸಮೀಪದ ನಲ್ಲೂರು ಟೋಲ್ ಬಳಿ ನೂತನ ಬ್ರಹ್ಮರಥಕ್ಕೆ ಶಾಸಕ ಶರತ್ ಬಚ್ಚೇಗೌಡ ಪೂಜೆ ಸಲ್ಲಿಸಿ ಚಾಲನೆ ನೀಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೈರೇಗೌಡ, ರಾಜ್ಯ ಒಕ್ಕಲಿಗ ಸಂಘದ ನಿರ್ದೇಶಕ ಬಿ.ವಿ.ರಾಜಶೇಖರಗೌಡ, ಸಹಕಾರ ಬ್ಯಾಂಕ್ ಅಧ್ಯಕ್ಷ ಬಿ.ವಿ.ಸತೀಶಗೌಡ, ಯುವ ಮುಖಂಡ ನಾರಾಯಣಗೌಡ, ನಿವೃತ್ತ ಇಒ ಡಾ. ನಾರಾಯಣಸ್ವಾಮಿ, ಸುಭಾಷಗೌಡ, ಸೂಲಿಬೆಲೆ ಸಹಕಾರ ಸಂಘದ ಸಿಇಒ ವಸಂತಕುಮಾರ್, ಸಿಬ್ಬಂದಿ ವರ್ಗ, ಜೇನುಗೂಡು ಟ್ರಸ್ಟ್ ನಿರ್ದೇಶಕ ನಗರೇನಹಳ್ಳಿ ನಾಗರಾಜಪ್ಪ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.