ದ್ವಿಚಕ್ರ ವಾಹನ ಹಾಗೂ ಕ್ಯಾಂಟರ್‌ ವಾಹನ ನಡುವೆ ಅಪಘಾತ

| Published : Jan 27 2025, 12:47 AM IST

ದ್ವಿಚಕ್ರ ವಾಹನ ಹಾಗೂ ಕ್ಯಾಂಟರ್‌ ವಾಹನ ನಡುವೆ ಅಪಘಾತ
Share this Article
  • FB
  • TW
  • Linkdin
  • Email

ಸಾರಾಂಶ

ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಸಂಪೂರ್ಣವಾಗಿ ಸುರಕ್ಷಿತವಿಲ್ಲದೆ ಅಪಘಾತಗಳಿಗೆ ಕಾರಣವಾಗುತ್ತಿದೆ.

ಗುಬ್ಬಿ: ತಾಲೂಕಿನ ನಿಟ್ಟೂರು ಹೋಬಳಿ ರಾಷ್ಟ್ರೀಯ ಹೆದ್ದಾರಿಯಿಂದ ದೊಡ್ಡಗುಣಿ ಸಮೀಪದ ಬಡವನ ಪಾಳ್ಯ ಹಾಗೂ ಶಿವಸಂದ್ರ ಗ್ರಾಮಕ್ಕೆ ತೆರಳುವ ತಿರುವಿನಲ್ಲಿ ಕ್ಯಾಂಟರ್ ವಾಹನ ಹಾಗೂ ದ್ವಿಚಕ್ರ ವಾಹನದ ನಡುವೆ ಅಪಘಾತ ಸಂಭವಿಸಿ ಶಿವಸಂದ್ರ ಗ್ರಾಮದ ಬಸವಣ್ಣ (60) ಸ್ಥಳದಲ್ಲೇ ಸಾವನ್ನಪ್ಪಿರುವಂತಹ ಘಟನೆ ನಡೆದಿದೆ.

ಈ ಭಾಗದಲ್ಲಿ ಇದುವರೆಗೂ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಸಂಪೂರ್ಣವಾಗಿ ಸುರಕ್ಷಿತವಿಲ್ಲದೆ ಅಪಘಾತಗಳಿಗೆ ಕಾರಣವಾಗುತ್ತಿದೆ ಎಂದು ಸಾರ್ವಜನಿಕರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಗುಬ್ಬಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಗುಬ್ಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

26 ಜಿ ಯು ಬಿ 3

ಗುಬ್ಬಿ ತಾಲೂಕಿನ ನಿಟ್ಟೂರು ಹೋಬಳಿ ರಾಷ್ಟ್ರೀಯ ಹೆದ್ದಾರಿ ಯಿಂದ ದೊಡ್ಡಗುಣಿ ಸಮೀಪದ ಬಡವನ ಪಾಳ್ಯ, ಹಾಗೂ ಶಿವಸಂದ್ರ ಗ್ರಾಮಕ್ಕೆ ತೆರಳುವ ತಿರುವಿನಲ್ಲಿ ದ್ವಿಚಕ್ರ ಹಾಗೂ ಕ್ಯಾಂಟರ್ ನಡುವೆ ಅಪಘಾತ ಸ್ಥಳದಲ್ಲೇ ಓರ್ವನ ಸಾವು