ಛಲ, ಶಿಸ್ತು, ಸಂಯಮದಿಂದ ಸಾಧನೆ ಸಾಧ್ಯ: ಪದ್ಮಶ್ರೀ ಡಾ.ಕೆ.ಎಸ್‌.ರಾಜಣ್ಣ

| Published : Jun 02 2025, 12:28 AM IST / Updated: Jun 02 2025, 12:29 AM IST

ಛಲ, ಶಿಸ್ತು, ಸಂಯಮದಿಂದ ಸಾಧನೆ ಸಾಧ್ಯ: ಪದ್ಮಶ್ರೀ ಡಾ.ಕೆ.ಎಸ್‌.ರಾಜಣ್ಣ
Share this Article
  • FB
  • TW
  • Linkdin
  • Email

ಸಾರಾಂಶ

ವಿಶ್ವಕರ್ಮ ಸಹಕಾರ ಬ್ಯಾಂಕಿನಲ್ಲಿ ಭಾನುವಾರ ಬ್ಯಾಂಕಿನ ಸ್ಥಾಪಕ ಕಾರ್ಯದರ್ಶಿ ಹಿರಿಯ ಸಮಾಜ ಸೇವಕ ದಿವಂಗತ ಬೊಳೂರು ಹರಿಶ್ಚಂದ್ರ ಆಚಾರ್ಯ ಅವರ 112ನೇ ಜನ್ಮದಿನಾಚರಣೆ ನಡೆಯಿತು.

ಕನ್ನಡಪ್ರಭ ವಾರ್ತೆ ಮಂಗಳೂರು

ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯು ಛಲ, ಶಿಸ್ತು ಮತ್ತು ಸಂಯಮವನ್ನು ಮೈಗೂಡಿಸಿಕೊಂಡಾಗ ಮೇರು ಸಾಧನೆಯನ್ನು ಮಾಡುವುದಕ್ಕೆ ಸಾಧ್ಯ ಎಂದು ಪದ್ಮಶ್ರೀ ಪುರಸ್ಕೃತ ಡಾ. ಕೆ. ಎಸ್. ರಾಜಣ್ಣ ಹೇಳಿದರು.ವಿಶ್ವಕರ್ಮ ಸಹಕಾರ ಬ್ಯಾಂಕಿನಲ್ಲಿ ಭಾನುವಾರ ನಡೆದ ಬ್ಯಾಂಕಿನ ಸ್ಥಾಪಕ ಕಾರ್ಯದರ್ಶಿ ಹಿರಿಯ ಸಮಾಜ ಸೇವಕ ದಿವಂಗತ ಬೊಳೂರು ಹರಿಶ್ಚಂದ್ರ ಆಚಾರ್ಯ ಅವರ 112ನೇ ಜನ್ಮದಿನಾಚರಣೆಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ವಿಶ್ವಕರ್ಮ ಬ್ಯಾಂಕಿನ ಅಧ್ಯಕ್ಷರಾದ ಡಾ. ಎಸ್ ಆರ್ ಹರೀಶ್ ಆಚಾರ್ಯ ಅವರು ಪದ್ಮಶ್ರೀ ಪುರಸ್ಕೃತ ಡಾ. ಎಸ್ ರಾಜಣ್ಣ ಅವರ ಜೀವನವು ಹೇಗೆ ಪ್ರತಿಯೊಬ್ಬರ ಜೀವನಕ್ಕೆ ಅಮಿತ ಜೀವನೋತ್ಸಾಹವನ್ನು ತುಂಬುವ ಜೀವನ ಎಂದು ವಿವರಿಸಿದರು. ಏಳು ತಿಂಗಳ ಮಗುವಾಗಿದ್ದಾಗಲೇ ತನ್ನ ಎರಡೂ ಕೈ ಮತ್ತು ಕಾಲುಗಳನ್ನು ಕಳೆದುಕೊಂಡ ಕೆ. ಎಸ್. ರಾಜಣ್ಣ ಅವರನ್ನು ಇಂದು ಜಗತ್ತೇ ಗುರುತಿಸಿದೆ. ಪದ್ಮಶ್ರೀ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಪ್ರಧಾನಿಯವರು ಕೆ. ಎಸ್. ರಾಜಣ್ಣ ಅವರನ್ನು ಅಭಿನಂದಿಸಿ, ನೀವು ನನ್ನ ದೇಶದ ಹೆಮ್ಮೆ ಎಂದು ಹೇಳಿರುವುದು ಅವರ ಸಾಧನೆಗಳಿಗೆ ಸಾಕ್ಷಿಯಾಗಿದೆ ಎಂದರು.

ತಮ್ಮ ಧರ್ಮಪತ್ನಿ ಭಾಗ್ಯಲಕ್ಷ್ಮಿ ಅವರೊಂದಿಗೆ ಭಾಗವಹಿಸಿದ ಡಾ.ಕೆ.ಎಸ್‌ ರಾಜಣ್ಣ ಅವರು ಬ್ಯಾಂಕಿನ ಸಿಬ್ಬಂದಿ ಜೊತೆ ಸಂವಾದ ನಡೆಸಿದರು.

ಉಪಾಧ್ಯಕ್ಷ ಜಗದೀಶ್‌ ಆಚಾರ್ಯ ಪಿ., ವ್ಯವಸ್ಥಾಪಕ ನಿರ್ದೇಶಕ ವಸಂತ ಅಡ್ಯಂತಾಯ, ನಿರ್ದೇಶಕರಾದ ಭಾಸ್ಕರ ಆಚಾರ್ಯ, ಸೀತಾರಾಮ ಆಚಾರ್ಯ, ಜಯಪ್ರಕಾಶ ಆಚಾರ್ಯ, ಸುಮಂಗಲಾ, ವಾಣಿಶ್ರೀ, ಯಶೋದಾ ಇದ್ದರು.

ಬಳಿಕ ಲೆಕ್ಕಪರಿಶೋಧಕ ಸಿಎ ನಾಗರಾಜ್‌ ಆಚಾರ್‌ ಅವರಿಂದ ಸಿಬ್ಬಂದಿಗೆ ತರಬೇತಿ ಕಾರ್ಯಕ್ರಮ ನಡೆಯಿತು.ಬ್ಯಾಂಕ್‌ ನಿರ್ದೇಶಕ ಭರತ್ ನಿಡ್ಪಳ್ಳಿ ಸ್ವಾಗತಿಸಿದರು.