ಸಾರಾಂಶ
---ಅಂಶಿ ಪ್ರಸನ್ನಕುಮಾರ್ಕನ್ನಡಪ್ರಭ ವಾರ್ತೆ ಮೈಸೂರುಪಿರಿಯಾಪಟ್ಟಣ ತಾಲೂಕು ಸೆಣಬಿನಕುಪ್ಪೆಯ ಎಸ್.ಎ. ದಿನೇಶ್ ಅವರು ತಂಬಾಕು, ರೇ,ಷ್ಮೆ, ತೆಂಗು, ಬಾಳೆ ಬೆಳೆಯಲ್ಲಿ ಹೆಸರು ಮಾಡಿದ್ದಾರೆ.ಅವರಿಗೆ ಆರು ಎಕರೆ ಜಮೀನಿದೆ. ಒಂದು ವಿದ್ಯುತ್, ಮತ್ತೊಂದು ಸೋಲಾರ್ ಚಾಲಿತ ಕೊಳವೆ ಬಾವಿಗಳಿವೆ. ಇವರ ಜಮೀನಿನಲ್ಲಿ ಅಡಕೆ- 700, ತೆಂಗು- 70 ಮರಗಳಿವೆ. ಒಂದೂವರೆ ಎಕರೆಯಲ್ಲಿ ತಂಬಾಕು, ಎರಡು ಎಕರೆಯಲ್ಲಿ ರೇಷ್ಮೆ ಬೆಳೆದಿದ್ದಾರೆ. ರೇಷ್ಮೆಯಲ್ಲಿ ವರ್ಷಕ್ಕೆ ಏಳೆಂಟು ಬೆಳೆ ತೆಗೆಯುತ್ತಾರೆ. ಮೈಸೂರಿನ ರೇಷ್ಮೆ ಮಾರುಕಟ್ಟೆಯಲ್ಲಿ ಗೂಡುಗಳನ್ನು ಮಾರಾಟ ಮಾಡುತ್ತಾರೆ. ಒಂದು ಬೆಳೆಗೆ ಒಂದೂವರೆ ಲಕ್ಷ ರು. ಸಿಗುತ್ತದೆ. ಹೊಗೆಸೊಪ್ಪಿನಲ್ಲೂ ಉತ್ತಮ ಆದಾಯವಿದೆ.ಎರಡು ಹಸುಗಳಿದ್ದು, ಡೇರಿಗೆ ಪ್ರತಿನಿತ್ಯ 5 ಲೀಟರ್ ಹಾಲು ಹಾಕುತ್ತಾರೆ. 20 ಕೋಳಿ, 2 ಮೇಕೆಗಳಿವೆ. ಇವರ ಕೃಷಿ ಕಾರ್ಯದಲ್ಲಿ ಪತ್ನಿ ಮೈತ್ರಾ ಕೈಜೋಡಿಸುತ್ತಾರೆ. ಮಕ್ಕಳಾದ ಯೋಗೇಶ್- ಪೊಲೀಸ್, ಉಮೇಶ್- ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ರಾಕೇಶ್ ಓದುತ್ತಿದ್ದಾರೆ. ರೇಷ್ಮೆ ಕ್ಷೇತ್ರದಲ್ಲಿನ ಸಾಧನೆಗಾಗಿ ಎಸ್.ಎ.ದಿನೇಶ್ ಅವರನ್ನು 2022 ರ ರೈತ ದಸರಾದಲ್ಲಿ ಸನ್ಮಾನಿಸಲಾಗಿದೆ..ಸಂಪರ್ಕ ವಿಳಾಸ
ಎಸ್.ಎ. ದಿನೇಶ್ ಬಿನ್ ಅಣ್ಣೇಗೌಡಸೆಣಬಿನಕುಪ್ಪೆಪಿರಿಯಾಪಟ್ಟಣ ತಾಲೂಕುಮೈಸೂರು ಜಿಲ್ಲೆಮೊ. 94821 12256 ಕೋಟ್ಕೃಷಿಯಲ್ಲಿ ನಮ್ಮ ಕೆಲಸ ನಾವು ಮಾಡಿಕೊಂಡು ಹೋದರೆ ಆರಾಮ. ಸರ್ಕಾರಿ ನೌಕರರ ರೀತಿಯಲ್ಲಿ ಬದುಕಬಹುದು. ನಾವು ಬೇಕಾದಾಗ ಕೆಲ್ಸ ಮಾಡಬಹುದು. ಬೇಕಾದಾಗ ವಿಶ್ರಾಂತಿ ಮಾಡಬಹುದು.- ಎಸ್.ಎ. ದಿನೇಶ್, ಸೆಣಬಿನಕೊಪ್ಪಲು--