ಚಿಂತಾಮಣಿ: ತಾಲೂಕಿನ ಸೀಕಲ್ ಗ್ರಾಮದ ಬಿಜೆಪಿ ಜಿಲ್ಲಾಧ್ಯಕ್ಷ ರಾಮಚಂದ್ರಗೌಡ ನಿವಾಸದಲ್ಲಿ ಅಧಿಕ ಮಾಸದ ಪ್ರಯುಕ್ತ ವಿಶೇಷವಾಗಿ ಚಂಡಿಕಾಹೋಮ ಮತ್ತು ಸತ್ಯನಾರಾಯಣ ವೃತ ಹಮ್ಮಿಕೊಳ್ಳಲಾಗಿತ್ತು. ಈ ಪೂಜಾ ಕೈಂಕರ್ಯದಲ್ಲಿ ಕನ್ನಡದ ಖ್ಯಾತ ನಟ, ಹ್ಯಾಟ್ರಿಕ್ ಹೀರೋ ಡಾ.ಶಿವರಾಜ್ಕುಮಾರ್ ಮತ್ತು ಗೀತಾ ಶಿವರಾಜ್ಕುಮಾರ್ ದಂಪತಿ ಭಾಗವಹಿಸಿದ್ದರು. ಇವರೊಂದಿಗೆ ಶಿಡ್ಲಘಟ್ಟ ತಾಲೂಕಿನವರಾದ ಕನ್ನಡದ ಖ್ಯಾತ ನಿರ್ದೇಶಕ ಕೆ.ಚಂದ್ರು ಭಾಗವಹಿಸಿ ಪೂಜೆ ಸಲ್ಲಿಸಿದರು. ಗ್ರಾಮಾಂತರ ಮಂಡಲ ಅಧ್ಯಕ್ಷ ಆನಂದಗೌಡ ಮತ್ತಿತರರು ಇದ್ದರು.
ಚಂಡಿಕಾ ಹೋಮದಲ್ಲಿ ನಟ ಶಿವರಾಜ್ಕುಮಾರ್ ದಂಪತಿ ಭಾಗಿ
ಈ ಪೂಜಾ ಕೈಂಕರ್ಯದಲ್ಲಿ ಕನ್ನಡದ ಖ್ಯಾತ ನಟ, ಹ್ಯಾಟ್ರಿಕ್ ಹೀರೋ ಡಾ.ಶಿವರಾಜ್ಕುಮಾರ್ ಮತ್ತು ಗೀತಾ ಶಿವರಾಜ್ಕುಮಾರ್ ದಂಪತಿ ಭಾಗವಹಿಸಿದ್ದರು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.