ಪೊಲೀಸರು- ಮಕ್ಕಳ ನಡುವೆ ಉತ್ತಮ ಬಾಂಧವ್ಯ ಬೆಳೆಸುವುದೇ ಉದ್ದೇಶ: ಜ್ಯೋತಿ

| Published : Nov 26 2023, 01:15 AM IST

ಪೊಲೀಸರು- ಮಕ್ಕಳ ನಡುವೆ ಉತ್ತಮ ಬಾಂಧವ್ಯ ಬೆಳೆಸುವುದೇ ಉದ್ದೇಶ: ಜ್ಯೋತಿ
Share this Article
  • FB
  • TW
  • Linkdin
  • Email

ಸಾರಾಂಶ

ಪೊಲೀಸರು- ಮಕ್ಕಳ ನಡುವೆ ಉತ್ತಮ ಬಾಂಧವ್ಯ ಬೆಳೆಸುವುದೇ ಉದ್ದೇಶ: ಜ್ಯೋತಿವಿದ್ಯಾರ್ಥಿಗಳಿಂದ ಪೊಲೀಸ್‌ ಠಾಣೆಯಲ್ಲಿ ಕಾರ್ಯಕ್ರಮ

ಸೇಂಟ್‌ ಜೋಸೆಫ್‌ ಪಬ್ಲಿಕ್ ಶಾಲೆ ವಿದ್ಯಾರ್ಥಿಗಳಿಂದ ಪೊಲೀಸ್‌ ಠಾಣೆಯಲ್ಲಿ ತೆರೆದ ಮನೆ ಕಾರ್ಯಕ್ರಮ

ಕನ್ನಡ ಪ್ರಭ ವಾರ್ತೆ, ನರಸಿಂಹರಾಜಪುರ

ಪೊಲೀಸ್‌ ಠಾಣೆಯಲ್ಲಿ ತೆರೆದ ಮನೆ ಕಾರ್ಯಕ್ರಮದಡಿ ಪಟ್ಟಣದ ಸೇಂಟ್‌ ಜೋಸೆಫ್‌ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ಶನಿವಾರ ಪೊಲೀಸ್‌ ಠಾಣೆಗೆ ಭೇಟಿ ಪೊಲೀಸರಿಂದ ಮಾಹಿತಿ ಪಡೆದರು.

ಈ ಸಂದರ್ಭದಲ್ಲಿ ಕ್ರೈಂ ಸಬ್‌ ಇನ್ಸಪೆಕ್ಟರ್‌ ಜ್ಯೋತಿ ಮಕ್ಕಳಿಗೆ ಮಾಹಿತಿ ನೀಡಿ, ಮಕ್ಕಳು ಹಾಗೂ ಪೊಲೀಸರ ನಡುವೆ ಉತ್ತಮ ಬಾಂಧವ್ಯ ಬೆಳೆಸುವುದೇ ತೆರೆದ ಮನೆ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ಪೊಲೀಸರು ಎಂದರೆ ಮಕ್ಕಳು ಭಯ ಪಡಬಾರದು. ಸಾಮಾನ್ಯ ಕಾನೂನಿನ ಜ್ಞಾನವನ್ನು ಮಕ್ಕಳು ಪಡೆದುಕೊಂಡಿರಬೇಕು. 18 ವರ್ಷದ ಒಳಗಿನ ಮಕ್ಕಳು ವಾಹನ ಚಾಲನೆ ಮಾಡಬಾರದು. ದ್ವಿ ಚಕ್ರ ವಾಹನ ಚಾಲಕರು ಕಡ್ಡಾಯವಾಗಿ ಹೆಲ್ಮೆಟ್‌ ಧರಿಸಿರಬೇಕು. ನಾಲ್ಕು ಚಕ್ರದ ವಾಹನ ಚಾಲಕರು ಸೀಟು ಬೆಲ್ಟ್‌ ಹಾಕಬೇಕು ಎಂದು ವಿವರಿಸಿದರು. ಪೋಕ್ಸೋ ಕಾಯ್ದೆ, ಸೈಬರ್ ಅಪರಾಧದ ಬಗ್ಗೆ ಮಕ್ಕಳಿಗೆ ವಿವರಿಸಿದರು. ಪೊಲೀಸ್‌ ಠಾಣಾಧಿಕಾರಿ ನಿರಂಜನ್ ಗೌಡ ಮಕ್ಕಳಿಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ದೀಪ್ತಿ ಎಜುಕೇಶನ್‌ ಸೊಸೈಟಿ ಸದಸ್ಯ ಸಜು ಡಿ ಪೆರುಮಯನ್‌, ಖಜಾಂಚಿ ಡೆನ್ನಿ, ಶಿಕ್ಷಕರಾದ ಅಲೆಕ್ಸ್, ಮಾಲಿನಿ, ದಿವ್ಯ, ಕೌಸಲ್ಯ, ಪ್ರಿನ್ಸಿ ಇದ್ದರು.