ತಾಲೂಕಿನ ಎಲ್ಲಾ ತಾಂಡಗಳು ಕಂದಾಯ ಗ್ರಾಮಗಳಾಗಿ ಪರಿವರ್ತನೆ: ಶಾಸಕ ಜಿ.ಎಚ್.ಶ್ರೀನಿವಾಸ್

| Published : Mar 02 2025, 01:17 AM IST

ತಾಲೂಕಿನ ಎಲ್ಲಾ ತಾಂಡಗಳು ಕಂದಾಯ ಗ್ರಾಮಗಳಾಗಿ ಪರಿವರ್ತನೆ: ಶಾಸಕ ಜಿ.ಎಚ್.ಶ್ರೀನಿವಾಸ್
Share this Article
  • FB
  • TW
  • Linkdin
  • Email

ಸಾರಾಂಶ

ತರೀಕೆರೆ, ತಾಲೂಕಿನ 10500 ಮನೆಗಳಿಗೆ ಇ-ಖಾತಾಗಳಿಲ್ಲ. ತಾಲೂಕಿನ ಎಲ್ಲಾ ತಾಂಡಗಳನ್ನು ಕಂದಾಯ ಮತ್ತು ಉಪಕಂದಾಯ ಗ್ರಾಮಗಳನ್ನಾಗಿ ಮಾಡಿ ಎಲ್ಲರಿಗೂ ೯೪(ಸಿ) ಇ-ಖಾತಾ ಮಾಡಿಕೊಡಲು ತಾವು ಬದ್ಧರಾಗಿದ್ದು, ಈಗಾಗಲೇ ಲಿಂಗದಹಳ್ಳಿ ಹೋಬಳಿ ದೊಡ್ಡ ಲಿಂಗದಹಳ್ಳಿ ತಾಂಡವನ್ನು ಕಂದಾಯ ಗ್ರಾಮವನ್ನಾಗಿ ಮಾಡಲಾಗಿದೆ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದರು.

ಶ್ರೀ ಸಂತ ಸೇವಾಲಾಲರ ೨೮೬ ನೇ ಜಯಂತ್ಯುತ್ಸವ, ಬಂಜಾರ ಸಮಾವೇಶ

--

- ಕಂದಾಯ ಗ್ರಾಮವಾದ ಲಿಂಗದಹಳ್ಳಿ ಹೋಬಳಿ ದೊಡ್ಡ ಲಿಂಗದಹಳ್ಳಿ ತಾಂಡ

- ಲಕ್ಕವಳ್ಳಿ ಕ್ರಾಸ್‌ನಲ್ಲಿ ಬಂಜಾರ ಸಮಾಜಕ್ಕೆ ನಿವೇಶನ, ಭವನ ನಿರ್ಮಾಣಕ್ಕೆ ಅಗತ್ಯ ನೆರವು

- ಸಮಾಜದ ಏಳಿಗೆಗಾಗಿ ಗುರು ಸಂತ ಸೇವಾಲಾಲರ ಅವಿರತ ಶ್ರಮ

- ಸಂಘಟನಾತ್ಮಕ ಹೋರಾಟ ಅಗತ್ಯ

- ಸಾಲುರದಮ್ಮ ದೇಗುಲದಿಂದ ಡಾ.ಬಿ.ಆರ್. ಅಂಬೇಡ್ಕರ್ ಭವನದವರೆಗೆ ಮೆರವಣಿಗೆಕನ್ನಡಪ್ರಭ ವಾರ್ತೆ, ತರೀಕೆರೆ

ತಾಲೂಕಿನ 10500 ಮನೆಗಳಿಗೆ ಇ-ಖಾತಾಗಳಿಲ್ಲ. ತಾಲೂಕಿನ ಎಲ್ಲಾ ತಾಂಡಗಳನ್ನು ಕಂದಾಯ ಮತ್ತು ಉಪಕಂದಾಯ ಗ್ರಾಮಗಳನ್ನಾಗಿ ಮಾಡಿ ಎಲ್ಲರಿಗೂ ೯೪(ಸಿ) ಇ-ಖಾತಾ ಮಾಡಿಕೊಡಲು ತಾವು ಬದ್ಧರಾಗಿದ್ದು, ಈಗಾಗಲೇ ಲಿಂಗದಹಳ್ಳಿ ಹೋಬಳಿ ದೊಡ್ಡ ಲಿಂಗದಹಳ್ಳಿ ತಾಂಡವನ್ನು ಕಂದಾಯ ಗ್ರಾಮವನ್ನಾಗಿ ಮಾಡಲಾಗಿದೆ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದರು. ತರೀಕೆರೆ ತಾಲೂಕು ಬಂಜಾರ (ಲಂಬಾಣಿ) ಸಮಾಜದಿಂದ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಬಂಜಾರರ ಧರ್ಮಗುರು ಕುಲದೈವ ಶ್ರೀ ಸಂತ ಸೇವಾಲಾಲ್ ಮಹಾರಾಜರ 286ನೇ ನೇ ಜಯಂತ್ಯುತ್ಸವ, ಬಂಜಾರರ ಸಮಾವೇಶ , ಧರ್ಮ ಜಾಗೃತಿ ಸಭೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ನಾಗೇನಹಳ್ಳಿ ದೇವಾಲಯ ಸಮಸ್ಯೆಯನ್ನು ಮುಂದಿನ 2 ತಿಂಗಳ ಒಳಗೆ ಎರಡೂ ಜನಾಂಗದ ಮುಖಂಡರ ಸಭೆ ಕರೆದು ಸೌಹಾರ್ದಯುತವಾಗಿ ಬಗೆಹರಿಸಲಾಗುವುದು. ಲಕ್ಕವಳ್ಳಿ ಕ್ರಾಸ್‌ನಲ್ಲಿ ಬಂಜಾರ ಸಮಾಜಕ್ಕೆ ನಿವೇಶನ ನೀಡಿ ಸಂತ ಸೇವಾಲಾಲರ ಸಮುದಾಯ ಭವನ ನಿರ್ಮಾಣಕ್ಕೆ ಅಗತ್ಯ ನೆರವು ನೀಡಲಾಗುವುದು ಎಂದು ಭರವಸೆ ನೀಡಿದರು.ಚಿತ್ರದುರ್ಗ ಸಿಬಾರ ಬಂಜಾರ ಗುರುಪೀಠಾಧ್ಯಕ್ಷ ಶ್ರೀ ಸರ್ದಾರ್ ಸೇವಾಲಾಲ್ ಸ್ವಾಮಿ ಆರ್ಶೀವಚನ ನೀಡಿ ಸಮಾಜದವರೆಲ್ಲರೂ ಒಂದಾಗಿ ಸಂಘಟನಾತ್ಮಕ ಹೋರಾಟ ಮಾಡಬೇಕಾಗಿದ್ದು ಶಾಸಕರು ಈ ಸಮಾಜಕ್ಕೆ ಆಗಿರುವ ಅನ್ಯಾಯದ ಬಗ್ಗೆ ಖಂಡನೆ ಮಾಡಬೇಕಾಗಿದೆ. ಹೇಗೆ ಏಕಲವ್ಯ ಗುರುವಿಲ್ಲದೇ ಗುರುವಿದ್ಯೆ ಕಲಿತಿದ್ದರು ಹಾಗೆ ನಮ್ಮ ಸಮಾಜಕ್ಕೆ ಯಾವ ಗುರುಗಳು ವಿದ್ಯೆ ನೀಡಲು ಇಲ್ಲದೇ ಇದ್ದ ಸಂದರ್ಭದಲ್ಲಿ ನಮ್ಮ ಪೂಜ್ಯ ಗುರು ಸಂತ ಸೇವಾಲಾಲರು ಮಹಾನ್ ವಿದ್ವಾಂಸರಾಗಿ ತಮ್ಮ ನಿಪುಣತೆ ಮೂಲಕ ಸಮಾಜದ ಏಳಿಗೆಗಾಗಿ ಅವಿರತವಾಗಿ ಶ್ರಮಪಟ್ಟರು. ಅವರ ಜಯಂತ್ಯುತ್ಸವದ ಕಾರಣದಿಂದ ಬಂಜಾರ ಸಮಾಜದವರೆಲ್ಲರೂ ಒಂದೆಡೆ ಸೇರಿ ಸಂತರ ಮಾರ್ಗದರ್ಶನದಲ್ಲಿ ಮುನ್ನಡೆಯಬೇಕು ಎಂದು ಹೇಳಿದರು.ವಿಜಯನಗರ ಶ್ರೀ ಶಕ್ತಿ ಪೀಠದ ಶ್ರೀ ಶಿವಪ್ರಕಾಶ್ ಸ್ವಾಮಿ, ತರೀಕೆರೆ ಸಿದ್ಲೀಪುರ ಗಾಳಿಕೆಂಚೇಶ್ವರ ಮಠ ಶ್ರೀ ಮಂಜು ಮಹಾರಾಜ್ ಸ್ವಾಮೀಗಳು, ಬಂಜಾರ ಸಮಾಜ ತಾಲೂಕು ಅಧ್ಯಕ್ಷ ಎಚ್.ಎಲ್ ಮಂಜುನಾಥ್, ಲೇಖಕ ರುದ್ರಪುನೀತ್, ವಿಜಯಬಾಯಿ, ಕೃಷ್ಣನಾಯ್ಕ, ಸರಿಗಮಪ ವೇದಿಕೆಯ ರಮೇಶ್ ಲಂಬಾಣಿ ಮುಂತಾದವರು ಮಾತನಾಡಿದರು. ಇದಕ್ಕೂ ಮೊದಲು ಪಟ್ಟಣದ ಸಾಲುರದಮ್ಮ ದೇವಾಲಯದಿಂದ ಡಾ.ಬಿ.ಆರ್. ಅಂಬೇಡ್ಕರ್ ಭವನದವರೆಗೆ ಬಂಜಾರ ಸಮಾಜದ ಗುರುಗಳು, ಸಂಘದ ಪದಾಧಿಕಾರಿಗಳು, ಎಲ್ಲಾ ಬಾಂಧವರು ಮೆರವಣಿಗೆ ನಡೆಸುವ ಮೂಲಕ ಸಂತ ಸೇವಾ ಲಾಲರ ಭಾವಚಿತ್ರಕ್ಕೆ ನಮನ ಸಲ್ಲಿಸಲಾಯಿತು. ತಾಲೂಕು ಬಂಜಾರ ಸಂಘದ ಕಾರ್ಯಾಧ್ಯಕ್ಷ ಟಿ ಚಂದ್ರನಾಯ್ಕ, ಯೋಗೇಂದ್ರನಾಯ್ಕ, ರಾಮನಾಯ್ಕ, ಸತ್ಯಪ್ಪ, ಶೋಭ್ಯಾ ನಾಯ್ಕ, ಡಾಕ್ಯಾನಾಯ್ಕ, ಗೋವಿಂದನಾಯ್ಕ, ಯೋಗೀಶ್ ನಾಯ್ಕ, ಹಾಲನಾಯ್ಕ, ಸಾರ್ವಜನಿಕ ಆಸ್ಪತ್ರೆ ಆಡಳಿತಾಧಿಕಾರಿ ಡಾ.ಟಿ.ಎಂ.ದೇವರಾಜ್, ಅಧಿಕಾರಿ ವರ್ಗ ಮತ್ತಿತರರು ಭಾಗವಹಿಸಿದ್ದರು.1ಕೆಟಿಆರ್.ಕೆ.10-

ತರೀಕೆರೆಯಲ್ಲಿ ನಡೆದ ಬಂಜಾರ ಧರ್ಮಗುರು ಶ್ರೀ ಸಂತ ಸೇವಾಲಾಲ್ ಮಹಾರಾಜರ 286 ನೇ ಜಯಂತ್ಯುತ್ಸವ ಮತ್ತು ಬಂಜಾರರ ಸಮಾವೇಶವನ್ನು ಶಾಸಕ ಜಿ.ಎಚ್.ಶ್ರೀನಿವಾಸ್, ಬಂಜಾರ ಗುರು ಶ್ರೀ ಸರ್ದಾರ್ ಸೇವಾಲಾಲ್, ಶ್ರೀ ಶಿವ ಪ್ರಕಾಶ್ ಸ್ವಾಮಿ, ಶ್ರೀ ಮಂಜು ಮಹಾರಾಜ್ ಮಹಾಸ್ವಾಮಿ, ಎಚ್.ಎಲ್ ಮಂಜುನಾಥ್, ಕೃಷ್ಣನಾಯ್ಕ, ಮುಂತಾದವರು ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿದರು.