ಅಂಬೇಡ್ಕರ 133ನೇ ಜಯಂತಿ ಆಚರಣೆ

| Published : Apr 16 2024, 01:09 AM IST

ಸಾರಾಂಶ

ಬಾಗಲಕೋಟೆ: ಹೆಚ್.ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆಯಿಂದ ಭಾರತರತ್ನ, ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ್ ಅಂಬೇಡ್ಕರವರ 133 ನೇಯ ಜನ್ಮದಿನ ಆಚರಿಸಲಾಯಿತು. ನವನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿ ಗೌರವ ಸೂಚಿಸಿ, ಜಯಘೋಷ ಹಾಕುವ ಮೂಲಕ ಅಂಬೇಡ್ಕರರವರ ಜಯಂತಿಯನ್ನು ಆಚರಿಸಲಾಯಿತು.

ಬಾಗಲಕೋಟೆ: ಹೆಚ್.ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆಯಿಂದ ಭಾರತರತ್ನ, ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ್ ಅಂಬೇಡ್ಕರವರ 133 ನೇಯ ಜನ್ಮದಿನ ಆಚರಿಸಲಾಯಿತು. ನವನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿ ಗೌರವ ಸೂಚಿಸಿ, ಜಯಘೋಷ ಹಾಕುವ ಮೂಲಕ ಅಂಬೇಡ್ಕರರವರ ಜಯಂತಿಯನ್ನು ಆಚರಿಸಲಾಯಿತು. ಈ ವೇಳೆ ಕರವೇ ಜಿಲ್ಲಾ ಸಂಚಾಲಕ ನವೀನ್ ಕಪಾಲಿ, ಯುವ ಘಟಕದ ಜಿಲ್ಲಾಧ್ಯಕ್ಷ ರಾಘು ರಾಠೂಡ್, ಸಂಜೀವ್ ಕೋಲ್ಕಾರ, ಹರೀಶ್ ತೆಗ್ಗಿ, ಆಶಿಪ್ ಭಾಗವಾನ, ದಯಾನಂದ ಉತ್ತರಕರ, ಅರ್ಜುನ್ ಸಿಂಗ್ ರಜಪೂತ, ಸಿದ್ದು ಅಂಬಿಗೇರ, ಚೇತನ್ ಸೂಳಿಕೇರಿ, ಮಹೆಬೂಬ ಗುಲಾಬರ್ಗಿ ಸೇರಿದಂತೆ ಇನ್ನಿತರ ಕರವೇ ಕಾರ್ಯಕರ್ತರು ಭಾಗವಹಿಸಿದ್ದರು.