ದ್ಯಾಮವ್ವನ ಮೂರ್ತಿ ಸೃಷ್ಟಿಸಿದ ಆತಂಕ

| Published : Jun 16 2024, 01:56 AM IST / Updated: Jun 16 2024, 06:57 AM IST

ಸಾರಾಂಶ

ಮೂರ್ತಿ ಸೃಷ್ಟಿಸಿದ ಆತಂಕ, ಮೂರ್ತಿ ಇಟ್ಟು ಹೋಗಿದ್ದ ಅಪರಿಚಿತರು, ಚಕ್ಕಡಿಯಲ್ಲಿದ್ದ ದೇವಿ ಮೂರ್ತಿ, ಸ್ಥಳೀಯರಲ್ಲಿ ಆತಂಕ

ಬೈಲಹೊಂಗಲ: ಸಮೀಪದ ಸಂಪಗಾಂವ ಗ್ರಾಮದ ಹಳೇ ತಿಗಡಿ ರಸ್ತೆಯ ಹತ್ತಿರ ಯಾರೋ ಅಪರಿಚಿತರು ಚಕ್ಕಡಿಯ ಸಮೇತ ಎರಡು ಕಟಗಿಯ ದ್ಯಾಮವ್ವನ ಮೂರ್ತಿಗಳನ್ನು ಇಟ್ಟುಹೋಗಿರುವುದು ಗ್ರಾಮದಲ್ಲಿ ಚರ್ಚೆಗೆ ಗ್ರಾಸವಾಗಿದೆ. 

ಬೆಳಗ್ಗೆ ಗ್ರಾಮದ ಹತ್ತಿರ ಈ ರೀತಿ ಚಕ್ಕಡಿಯಲ್ಲಿ ದೇವತೆಗಳನ್ನು ಇಟ್ಟುಹೋಗಿರುವದರಿಂದ ಗ್ರಾಮಸ್ಥರು ಗುಂಪು-ಗುಂಪಾಗಿ ಹೋಗಿ ಚಕ್ಕಡಿಯಲ್ಲಿರುವ ಮೂರ್ತಿಗಳನ್ನು ಕಂಡು ಏಕೆ ಬಿಟ್ಟು ಹೋಗಿದ್ದಾರೆ ಎಂದು ಸಂಕೆ ವ್ಯಕ್ತಪಡಿಸುತ್ತಿದ್ದಾರೆ. 

ಈ ದೇವತೆ ಮೂರ್ತಿಗಳನ್ನು ಪೂಜೆ ಮಾಡಿ ಒಂದು ಊರಿನಿಂದ ಇನ್ನೊಂದು ಊರಿನ ಹದ್ದಿಗೆ ಬಿಟ್ಟು ಹೋಗಿದ್ದಾರೆ ಎನ್ನಲಾಗಿದೆ. ಮೂರ್ತಿಗಳನ್ನು ಏನೂ ಮಾಡಬೇಕೆಂಬುದು ತೋಚದಂತಾಗಿದೆ ಎಂದು ಗ್ರಾಮಸ್ಥರು ಮಾತನಾಡಿಕೊಳ್ಳುತ್ತಿದ್ದಾರೆ.