ನಿಸ್ವಾರ್ಥ ಸೇವೆಯ ರಿಯಲ್ ಹೀರೋ ಜನಾರ್ದನ ಎಂ.ಗೆ ಎಪಿಎಂಸಿ ಗೌರವ

| Published : Nov 19 2024, 12:45 AM IST

ನಿಸ್ವಾರ್ಥ ಸೇವೆಯ ರಿಯಲ್ ಹೀರೋ ಜನಾರ್ದನ ಎಂ.ಗೆ ಎಪಿಎಂಸಿ ಗೌರವ
Share this Article
  • FB
  • TW
  • Linkdin
  • Email

ಸಾರಾಂಶ

ಉಪ್ಪೂರು ಕೆ.ಜಿ. ರೋಡ್ ಬಳಿಯ ಸ್ಪಂದನ ವಿಶೇಷ ಮಕ್ಕಳ ಶಾಲೆಯ ಸಂಸ್ಥಾಪಕ ಜನಾರ್ದನ ಎಂ. ಅವರ ವಿಶೇಷ ಮಕ್ಕಳ ಲಾಲನೆ, ಪಾಲನೆ ಮತ್ತು ಪೋಷಣೆಯನ್ನು ಗುರುತಿಸಿ ಸನ್ಮಾನಿಸಲಾಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ಇಲ್ಲಿನ ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ ನ. ೧೫ರಂದು ಸಾಮಾಜಿಕ ಕಳಕಳಿಯ ಕಾರ್ಯಕ್ರಮ ರಿಯಲ್ ಹೀರೋ ಇದರ ಮತ್ತೊಂದು ಆವೃತಿ ನಡೆಸಲ್ಪಟ್ಟಿತು.ಉಪ್ಪೂರು ಕೆ.ಜಿ. ರೋಡ್ ಬಳಿಯ ಸ್ಪಂದನ ವಿಶೇಷ ಮಕ್ಕಳ ಶಾಲೆಯ ಸಂಸ್ಥಾಪಕ ಜನಾರ್ದನ ಎಂ. ಅವರ ವಿಶೇಷ ಮಕ್ಕಳ ಲಾಲನೆ, ಪಾಲನೆ ಮತ್ತು ಪೋಷಣೆಯನ್ನು ಗುರುತಿಸಿ ಸನ್ಮಾನಿಸಲಾಯಿತು.ಬುದ್ಧಿಮಾಂದ್ಯತೆ ಎನ್ನುವುದು ಸುಧಾರಣೆ ಆಗಬಹುದು, ವಿನಃ ಗುಣಮುಖರಾಗುವುದಿಲ್ಲ. ಆದರೆ ಬುದ್ಧಿ ಮಾಂದ್ಯತೆ ಬಾರದಿರಲು ಕಾಳಜಿಯೇ ಮದ್ದು ಎಂದು ತಿಳಿಸಿದ ಅವರು, ಹಾಗೆಯೇ ಈ ಲಕ್ಷಣಕ್ಕೆ ಕಾರಣವಾಗುವ ವಿವಿಧ ಆಯಾಮದ ಬಗೆಗೆ ವಿವರಿಸಿದರು. ಮುಂದಿನ ದಿನಗಳಲ್ಲಿ ಸಾಮಾಜಿಕ ಸೇವೆ ಮಾಡಬೇಕು ಎಂದು ತೀರ್ಮಾನಿಸಿದವರು ಇಂತಹ ಸಂಸ್ಥೆಗಳಿಗೆ ಸಹಾಯ ಮಾಡಿರಿ ಎಂದು ಕರೆ ನೀಡಿದರು.ಈ ಸಂದರ್ಭದಲ್ಲಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನ ಘಟಕ ಹಮ್ಮಿಕೊಂಡ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.ಕಾಲೇಜಿನ ಪ್ರಾಚಾರ್ಯರಾದ ಆಶಾ ಕುಮಾರಿ ಅಧ್ಯಕ್ಷತೆ ವಹಿಸಿದ್ದರು. ಎನ್‌ಎಸ್‌ಎಸ್‌ ಅಧಿಕಾರಿ ರಾಜೇಶ್ ಕುಮಾರ್ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಸಹ ಯೋಜನಾಧಿಕಾರಿ ಚಂದ್ರಶೇಖರ್ ವಂದಿಸಿದರು. ವಾಣಿಜ್ಯ ಉಪನ್ಯಾಸಕ ರಾಘವೇಂದ್ರ ಜಿ.ಜಿ. ಕಾರ್ಯಕ್ರಮ ನಿರೂಪಿಸಿದರು.