ರಾಮನಾಥಪುರದ ಕಾವೇರಿ ನದಿ ದಂಡೆಯಲ್ಲಿರುವ ಪುಷ್ಕರಣಿ ಹಾಗೂ ಚತುರ್ಯುಗಮೂರ್ತಿ ಶ್ರೀರಾಮೇಶ್ವರ ದೇವಾಲಯದ ಪಕ್ಕದಲ್ಲಿ ನಿರ್ಮಾಣವಾಗಿರುವ ಶೃಂಗೇರಿ ಶಾಖಾ ಮಠದ ಶ್ರೀ ಭಾರತೀತೀರ್ಥ ಕೃಪಾಭವನದಲ್ಲಿ ಗೌರವ ಸಮರ್ಪಣೆ ಪಡೆದ ನಂತರ ಕಾಮಗಾರಿ ನಡೆಯುತ್ತಿರುವ ದೇವಾಲಯಗಳ ನಿರ್ಮಾಣದ ವೀಕ್ಷಣೆ ಮಾಡಿದ ನಂತರ ಮಾತನಾಡಿದ ಅವರು, ಸುಮಾರು 2 ಕೋಟಿ ರುಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಶೃಂಗೇರಿ ಮಠದ ಜಾಗದಲ್ಲಿ ದೇವಾಲಯ ಹಾಗೂ ಮಠದ ಅಭಿವೃದ್ಧಿಗೆ ಸಹಾಯ ಸಹಕಾರ ನೀಡಲಾಗುವುದು. ಅಲ್ಲದೇ ಹೆಚ್ಚಿನ ರೀತಿಯಲ್ಲಿ ಇನ್ನೂ ಹಲವಾರು ಭಕ್ತರಿಂದ ಸಹಾಯ ಸಹಕಾರ ಕೊಡಿಸುದಾಗಿ ಭರವಸೆ ನೀಡಿದರು.

ಕನ್ನಡಪ್ರಭ ವಾರ್ತೆ ರಾಮನಾಥಪುರ

ಕಾವೇರಿ ನದಿ ದಂಡೆಯಲ್ಲಿರುವ ಶೃಂಗೇರಿ ಶಂಕರಮಠದ ಜಾಗದಲ್ಲಿ ಶ್ರೀ ಗಣಪತಿ ಜಗನ್ಮಾತೆ ಶಾರದಾಂಬೆ ಹಾಗೂ ಶಂಕರಭಗವತ್ಪಾದರ ಪ್ರತ್ಯೇಕ ಕಲ್ಲಿನ ಗರ್ಭಗುಡಿಗಳ ಜೊತೆಗೆ ಪ್ರಾಂಗಣದೊಳಗೆ ಹೊಂದಿಕೊಂಡಿರುವ ಮತ್ತು ಪ್ರತ್ಯೇಕ ವಿಮಾನ ಗೋಪುರ ಮತ್ತು ರಾಜಗೋಪುರಗಳು ಅಭಿವೃದ್ಧಿಗೆ ಪ್ರತಿಯೊಬ್ಬರು ಸಹಕರಿಸಿಬೇಕೆಂದು ಮಾಜಿ ಅಡ್ವೋಕೇಟ್ ಜನರಲ್ ಅಶೋಕ್ ಹಾರನಹಳ್ಳಿ ತಿಳಿಸಿದರು.

ರಾಮನಾಥಪುರದ ಕಾವೇರಿ ನದಿ ದಂಡೆಯಲ್ಲಿರುವ ಪುಷ್ಕರಣಿ ಹಾಗೂ ಚತುರ್ಯುಗಮೂರ್ತಿ ಶ್ರೀರಾಮೇಶ್ವರ ದೇವಾಲಯದ ಪಕ್ಕದಲ್ಲಿ ನಿರ್ಮಾಣವಾಗಿರುವ ಶೃಂಗೇರಿ ಶಾಖಾ ಮಠದ ಶ್ರೀ ಭಾರತೀತೀರ್ಥ ಕೃಪಾಭವನದಲ್ಲಿ ಗೌರವ ಸಮರ್ಪಣೆ ಪಡೆದ ನಂತರ ಕಾಮಗಾರಿ ನಡೆಯುತ್ತಿರುವ ದೇವಾಲಯಗಳ ನಿರ್ಮಾಣದ ವೀಕ್ಷಣೆ ಮಾಡಿದ ನಂತರ ಮಾತನಾಡಿದ ಅವರು, ಸುಮಾರು 2 ಕೋಟಿ ರುಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಶೃಂಗೇರಿ ಮಠದ ಜಾಗದಲ್ಲಿ ದೇವಾಲಯ ಹಾಗೂ ಮಠದ ಅಭಿವೃದ್ಧಿಗೆ ಸಹಾಯ ಸಹಕಾರ ನೀಡಲಾಗುವುದು. ಅಲ್ಲದೇ ಹೆಚ್ಚಿನ ರೀತಿಯಲ್ಲಿ ಇನ್ನೂ ಹಲವಾರು ಭಕ್ತರಿಂದ ಸಹಾಯ ಸಹಕಾರ ಕೊಡಿಸುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಶೃಂಗೇರಿ ಶ್ರೀ ಶಂಕರಮಠದ ವ್ಯವಸ್ಥಾಪಕರಾದ ಕೊಣನೂರು ಕೆ. ಗಣೇಶ್ ಹಿರಿಯ ಪತ್ರಕರ್ತ ಎಂ.ಎನ್. ಕುಮಾರಸ್ವಾಮಿ ಮುಂತಾದವರು ಇದ್ದರು.