ಸಾರಾಂಶ
ಕೇರಳದ ವಯನಾಡ್ ಜಿಲ್ಲೆಯಲ್ಲಿ ಭೂ ಕುಸಿತಗೊಂಡ ಮೆಪ್ಪಾಡಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ಹಿನ್ನೆಲೆ ಸರಕು ವಾಹನಗಳಿಗೆ ಗುಂಡ್ಲುಪೇಟೆಯ ಸುಲ್ತಾನ್ ಬತ್ತೇರಿಗೆ ಪೊಲೀಸರು ತಡೆ ಹಾಕಿದ್ದ ಕಾರಣ ನೂರಾರು ವಾಹನಗಳ ಸಾಲು ಗಟ್ಟಿ ನಿಂತಿದ್ದವು.
ಕಬ್ಬೇಕಟ್ಟೆ ಬಳಿ ಸಾಲು ಗಟ್ಟಿ ನಿಂತ ಗೂಡ್ಸ್ ವಾಹನಗಳು ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಕೇರಳದ ವಯನಾಡ್ ಜಿಲ್ಲೆಯಲ್ಲಿ ಭೂ ಕುಸಿತಗೊಂಡ ಮೆಪ್ಪಾಡಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ಹಿನ್ನೆಲೆ ಸರಕು ವಾಹನಗಳಿಗೆ ಸುಲ್ತಾನ್ ಬತ್ತೇರಿಗೆ ಪೊಲೀಸರು ತಡೆ ಹಾಕಿದ್ದ ಕಾರಣ ನೂರಾರು ವಾಹನಗಳ ಸಾಲು ಗಟ್ಟಿ ನಿಂತಿದ್ದವು.ಶನಿವಾರ ಬೆಳಗ್ಗೆ ೭ ಗಂಟೆಯಿಂದ ಮಧ್ಯಾಹ್ನ ೩ ಗಂಟೆ ತನಕ ಮೈಸೂರು-ಊಟಿ ಹೆದ್ದಾರಿಯ ಗುಂಡ್ಲುಪೇಟೆ ಬಳಿ ಕಬ್ಬೇಕಟ್ಟೆ ಶನೇಶ್ವರ ಸ್ವಾಮಿ ದೇವಸ್ಥಾನದ ಬಳಿ ಕೇರಳಕ್ಕೆ ಅದು ಸುಲ್ತಾನ್ ಬತ್ತೇರಿ ಮಾರ್ಗ ತೆರಳುತ್ತಿದ್ದ ಗೂಡ್ಸ್ ವಾಹನಗಳನ್ನು ಗುಂಡ್ಲುಪೇಟೆ ಪೊಲೀಸರು ತಡೆದು ನಿಲ್ಲಿಸಿದರು. ಪಟ್ಟಣದ ಬಳಿಯ ಕಬ್ಬೇಕಟ್ಟೆ ಶನೇಶ್ವರಸ್ವಾಮಿ ದೇವಸ್ಥಾನದ ಬಳಿ ಪೊಲೀಸರು ನಾಕಾ ಬಂಧಿ ಹಾಕಿ ಕೇರಳಕ್ಕೆ ತೆರಳುತ್ತಿದ್ದು ಗೂಡ್ಸ್ ವಾಹನಗಳನ್ನು ಜಿಲ್ಲಾ ಪೊಲೀಸ್ ವರಷ್ಠಾಧಿಕಾರಿಗಳ ಸೂಚನೆ ಮೇರೆಗೆ ತಡೆದು ನಿಲ್ಲಿಸಲಾಗಿತ್ತು ಎಂದರು. ಕೇರಳಕ್ಕೆ ತೆರಳುತ್ತಿದ್ದ ಲಘು ವಾಹನಗಳನ್ನು ಗೂಡಲೂರು ಮೂಲಕ ಕೇರಳಕ್ಕೆ ಹೋಗಲು ಅವಕಾಶ ಮಾಡಿಕೊಡಲಾಗಿತ್ತು ಎಂದರು.
ಕಬ್ಬೇಕಟ್ಟೆ ಬಳಿ ನಿಂತಿದ್ದ ನೂರಾರು ಗೂಡ್ಸ್ ವಾಹನಗಳಲ್ಲಿ ಚಾಲಕರು ಹಾಗೂ ಸಹಾಯಕರು ಪೊಲೀಸರ ಕ್ರಮಕ್ಕೆ ಆಕ್ರೋಶ ಹೊರ ಹಾಕುತ್ತಿದ್ದರು. ಪ್ರಧಾನಿ ಮೋದಿ ಅವರು ಮೆಪ್ಪಾಡಿಗೆ ಭೇಟಿ ನೀಡಿ ನೊಂದವರಿಗೆ ಸಾಂತ್ವನ ಹೇಳಲಿ ಆದರೆ ಗೂಡ್ಸ್ ವಾಹನಗಳ ತಡೆದದ್ದು ಸರಿಯಲ್ಲ ಎಂದು ಸುಲ್ತಾನ್ ಬತ್ತೇರಿಯ ಲಾರಿ ಚಾಲಕ ರಘು ಹೇಳಿದರು.