ಸಾರಾಂಶ
ಸಿದ್ದಾಪುರ: ತಾಲೂಕಿನ ಎಲ್ಲೆಡೆ ತ್ಯಾಗ ಬಲಿದಾನದ ಸಂಕೇತವಾದ ಬಕ್ರೀದ್ ಹಬ್ಬವನ್ನು ಮುಸ್ಲಿಮರು ಶನಿವಾರ ಸಂಭ್ರಮದಿಂದ ಆಚರಿಸಿದರು.ಮುಂಗಾರು ಮಳೆ ಬಿಡುವು ನೀಡಿದ ಕಾರಣ ಪಟ್ಟಣದ ಈದ್ಗಾ ಮೈದಾನದಲ್ಲಿ ಮುಸ್ಲಿಮರು ಹಬ್ಬದ ವಿಶೇಷ ಸಾಮೂಹಿಕ ಪ್ರಾರ್ಥನೆಯನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಧರ್ಮಗುರು ಮೌಲಾನ ಮೆಹಮೂದ್ ರಝಾ ಧಾರ್ಮಿಕ ಪ್ರವಚನ ನೀಡಿ ಅಲ್ಲಾಹುವಿನ ಆಜ್ಞೆಯನ್ನು ಎಲ್ಲರೂ ಪರಿಪಾಲಿಸಿ ತ್ಯಾಗ ಬಲಿದಾನದ ಪ್ರತೀಕವಾದ ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಿ, ದೇವರ ಕೃಪೆಗೆ ಪಾತ್ರರಾಗಬೇಕು ಎಂದರು.
ಈ ಸಂದರ್ಭದಲ್ಲಿ ಸ್ಥಳೀಯ ಬದ್ರಿಯಾ ಜಾಮಿಯಾ ಮಸ್ಜಿದ್ ಕಮಿಟಿ ಅಧ್ಯಕ್ಷ ಖಾದರ್ ಬಾಷಾ ಎಫ್. ಸಾಬ್ ಹಬ್ಬದ ಶುಭಾಶಯ ಕೋರಿದರು. ಪಪಂ ಮಾಜಿ ಸದಸ್ಯ ಮುನವ್ವರ್ ಗುರ್ಕಾರ್ ಸಮಾಜ ಹಾಗೂ ಮಸೀದಿ ಕಾಂಪ್ಲೆಕ್ಸ್ ಅಭಿವೃದ್ಧಿ ಕುರಿತು ಮಾತನಾಡಿದರು.ನಂತರ ಜೋಗ ರಸ್ತೆಯಲ್ಲಿರುವ ಹಜ್ರತ್ ಷರ್ಮದ್ ಷಾ ವಲಿ ಅಲ್ಲಾಹ್ ದರ್ಗಾಕ್ಕೆ ತೆರಳಿದ ನೂರಾರು ಮುಸ್ಲಿಮರು ವಿಶ್ವಶಾಂತಿಗಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಕಮಿಟಿ ಉಪಾಧ್ಯಕ್ಷ ರಿಯಾಜ್ ರಹೀಮ್ ಸಾಬ್ ಹೊಸೂರ್, ಕಾರ್ಯದರ್ಶಿ ಫಿರೋಜ್ ಮಹಮ್ಮದ್ ಹುಸೇನ್ ಸಾಬ್, ಖಜಾಂಚಿ ಇಬ್ರಾಹಿಂ ಸಾಬ್ ಸದಸ್ಯರಾದ ಇಲಿಯಾಸ್ ಇಬ್ರಾಹಿಂ ಸಾಬ್ ಸ್ಯೆಯದ್ ಮುಷೀರ್ ಫಯಾಜ್ ಅಹ್ಮದ್ ಇದ್ರೂಸ್ ಅಬ್ದುಲ್ ಮುನಾಫ್ ಮರ್ದಾನ್ ಸಾಬ್, ಅಬ್ದುಲ್ ರಶೀದ್ ಸತ್ತಾರ್ ಸಾಬ್ ಸಿರಾಜ್ ಶೇಖ, ಹಮೀದ್ ಎಂ. ಖಾನ್ ಮತ್ತು ಅಮ್ಜದ್ ಹುಸೇನ್ ಸಾಬ್ ಮೊದಲಾದವರು ಉಪಸ್ಥಿತರಿದ್ದರು.
ಸಿದ್ದಾಪುರದಲ್ಲಿ ಬಕ್ರೀದ್ ಹಬ್ಬದ ನಿಮಿತ್ತ ಮುಸ್ಲಿಮರು ಪ್ರಾರ್ಥನೆ ಸಲ್ಲಿಸಿದರು.