ಸಾರಾಂಶ
ಬಾರಕೂರಿನ ‘ದಿ ಪ್ಯಾಲೇಸ್ ಕಮರ್ಶಿಯಲ್ ಪ್ಲಾಜ್ಹ’ ವಾಣಿಜ್ಯ ಸಂಕೀರ್ಣದಲ್ಲಿ ಕಾರ್ಯಾಚರಿಸುತ್ತಿದ್ದ ಕೆಥೊಲಿಕ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಶಾಖೆಯನ್ನು ಬಾರಕೂರು ಬಸ್ ನಿಲ್ದಾಣದ ಸಮೀಪವಿರುವ ಬಟ್ಟೆ ವಿನಾಯಕ ಟವರ್ಸ್ನ ಮೊದಲನೇ ಮಹಡಿಗೆ ಸ್ಥಳಾಂತರಗೊಂಡಿತು. ನೂತನ ಕಚೇರಿಯನ್ನು ಎಸ್.ಎಂ.ಎಸ್. ಕಥೆಡ್ರಲ್ನ ವಿಕಾರ್ ಜನರಲ್ ಎಂ.ಸಿ. ಮಥಾಯ್ ಉದ್ಘಾಟಿಸಿ ನೆರವೇರಿಸಿದರು.
ಕನ್ನಡಪ್ರಭ ವಾರ್ತೆ ಬ್ರಹ್ಮಾವರ
ಬಾರಕೂರಿನ ‘ದಿ ಪ್ಯಾಲೇಸ್ ಕಮರ್ಶಿಯಲ್ ಪ್ಲಾಜ್ಹ’ ವಾಣಿಜ್ಯ ಸಂಕೀರ್ಣದಲ್ಲಿ ಕಾರ್ಯಾಚರಿಸುತ್ತಿದ್ದ ಕೆಥೊಲಿಕ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಶಾಖೆಯನ್ನು ಬಾರಕೂರು ಬಸ್ ನಿಲ್ದಾಣದ ಸಮೀಪವಿರುವ ಬಟ್ಟೆ ವಿನಾಯಕ ಟವರ್ಸ್ನ ಮೊದಲನೇ ಮಹಡಿಗೆ ಸ್ಥಳಾಂತರಗೊಂಡಿತು. ನೂತನ ಕಚೇರಿಯನ್ನು ಎಸ್.ಎಂ.ಎಸ್. ಕಥೆಡ್ರಲ್ನ ವಿಕಾರ್ ಜನರಲ್ ಎಂ.ಸಿ. ಮಥಾಯ್ ಉದ್ಘಾಟಿಸಿ ನೆರವೇರಿಸಿದರು.ಬಾರಕೂರು ಸೈಂಟ್ ಪೀಟರ್ ಚರ್ಚಿನ ಧರ್ಮಗುರುಗಳಾದ ರೊನಾಲ್ಡ್ ಮಿರಾಂದಾರವರು ಪ್ರಾರ್ಥನಾ ವಿಧಿ ನೆರವೇರಿಸಿ ನೂತನ ಕಚೇರಿಯನ್ನು ಆಶೀರ್ವದಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಸಂಘ ಅಧ್ಯಕ್ಷ ಜೆರಾಲ್ಡ್ ಎಂ. ಗೊನ್ಸಾಲ್ವಿಸ್ ಅವರು ವಹಿಸಿ ಸಂಘದ ಪ್ರಮುಖ ಸೇವೆಗಳನ್ನು ತಿಳಿಸಿದರು.ಮುಖ್ಯ ಅತಿಥಿಯಾಗಿ ಬಾರಕೂರು ಗ್ರಾಪಂ ಅಧ್ಯಕ್ಷ ಬಿ. ಶಾಂತಾರಾಮ ಶೆಟ್ಟಿ, ಲೆಕ್ಕ ಪರಿಶೋದಕ ಪದ್ಮನಾಭ ಕಾಂಚನ್, ಬಟ್ಟೆ ವಿನಾಯಕ ಟವರ್ಸ್ ಕಟ್ಟಡದ ಪಾಲುದಾರ ಶ್ರೀನಿವಾಸ ಶೆಟ್ಟಿಗಾರ್ ಮತ್ತು ಸಂತೋಷ್ ಕುಮಾರ್ ಶೆಟ್ಟಿ ಶುಭಕೋರಿದರು.ಸೊಸೈಟಿಯ ನಿರ್ದೇಶಕ ಗಿಲ್ಬರ್ಟ್ ರೊಡ್ರಿಗಸ್, ಜೋಸ್ಫಿನ್ ಲುವಿಸ್, ಜಸಿಂತಾ ಎ.ಎಂ. ಸೆರಾವೊ, ಆಲ್ವಿನ್ ಕ್ವಾಡ್ರಸ್, ಜೇಮ್ಸ್ ಡಿಸಿಲ್ವ, ಜೋಸೆಫ್ ಡಿಆಲ್ಮೇಡಾ, ಜಾನೆಟ್ ಬಾಂಜ್, ಡೇನಿಯಲ್ ಮೊಂತೇರೊ, ಅರುಣ್ ಡಿಸೋಜ, ಮೆಲ್ವಿನ್ ಸಿಕ್ವೇರ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಂಜಯ್ ಫರ್ನಾಂಡಿಸ್ ಉಪಸ್ಥಿತರಿದ್ದರು.ಮಾಜಿ ಅಧ್ಯಕ್ಷ ವಲೇರಿಯನ್ ಮಿನೇಜಸ್ ಸ್ವಾಗತಿಸಿದರು. ನಿರ್ದೇಶಕ ಆಲ್ಬರ್ಟ್ ಮೊಂತೇರೊ ಕಾರ್ಯಕ್ರಮ ನಿರ್ವಹಿಸಿ, ಉಪಾಧ್ಯಕ್ಷ ಜೋಸೆಫ್ ಸುವಾರಿಸ್ ವಂದಿಸಿದರು.