ಮೃತ ಮಾಲಾಧಾರಿಗಳ ಕುಟುಂಬಕ್ಕೆ ಹೆಚ್ಚಿನ ಪರಿಹಾರಕ್ಕೆ ಬಸವರಾಜ ಹೊರಟ್ಟಿ ಒತ್ತಾಯ

| Published : Dec 27 2024, 12:50 AM IST

ಮೃತ ಮಾಲಾಧಾರಿಗಳ ಕುಟುಂಬಕ್ಕೆ ಹೆಚ್ಚಿನ ಪರಿಹಾರಕ್ಕೆ ಬಸವರಾಜ ಹೊರಟ್ಟಿ ಒತ್ತಾಯ
Share this Article
  • FB
  • TW
  • Linkdin
  • Email

ಸಾರಾಂಶ

ಘ​ಟ​ನೆ​ಯಲ್ಲಿ 6ಕ್ಕೂ ಹೆ​ಚ್ಚು ಜ​ನರ ದೇ​ಹದ ಬ​ಹು​ತೇಕ ಭಾಗ ಸು​ಟ್ಟಿ​ದ್ದ​ರಿಂದ ಅ​ವ​ರ ಸ್ಥಿತಿ ಚಿಂತಾ​ಜ​ನ​ಕ​ವಾ​ಗಿದೆ. ಗಾ​ಯ​ಗೊಂಡ​ವ​ರೆ​ಲ್ಲರೂ ಬ​ಡ​ತ​ನದ ರೇ​ಖೆ​ಗಿಂತ ಕೆ​ಳ​ಗಿ​ನ​ವರೆ ಆ​ಗಿ​ದ್ದಾರೆ. ಸರ್ಕಾರ ಇ​ದನ್ನು ವಿ​ಶೇ​ಷ ಪ್ರ​ಕ​ರ​ಣ​ವೆಂದು ಪ​ರಿ​ಗ​ಣಿಸಿ ಹೆ​ಚ್ಚಿನ ಪ​ರಿ​ಹಾರ ನೀ​ಡ​ಬೇಕು ಎಂದು ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

ಹುಬ್ಬಳ್ಳಿ:

ಸಿ​ಲಿಂಡರ್‌ ಸೋ​ರಿ ಬೆಂಕಿ ಹೊ​ತ್ತಿ​ದ ಅವ​ಘ​ಡ​ದಲ್ಲಿ ಮೃ​ತ​ಪ​ಟ್ಟಿ​ರುವ ಮ​ತ್ತು ಗಾ​ಯ​ಗೊಂಡ ಅ​ಯ್ಯಪ್ಪ ಮಾ​ಲಾ​ಧಾ​ರಿ​ಗಳ ಕು​ಟುಂಬಗಳಿಗೆ ಹೆ​ಚ್ಚಿನ ಪ​ರಿ​ಹಾರ ನೀ​ಡು​ವಂತೆ ಸಿಎಂ ಸಿ​ದ್ದ​ರಾ​ಮ​ಯ್ಯ ಅ​ವ​ರಿಗೆ ಪತ್ರ ಬ​ರೆ​ಯು​ತ್ತೇನೆ ಎಂದು ವಿ​ಧಾನ ಪ​ರಿ​ಷತ್‌ ಸ​ಭಾ​ಪತಿ ಬ​ಸ​ವ​ರಾಜ ಹೊ​ರಟ್ಟಿ ತಿಳಿಸಿದರು.

ನ​ಗ​ರದ ಕೆ​ಎಂಸಿಆರ್‌ಐಗೆ ಗು​ರು​ವಾರ ಭೇಟಿ ನೀ​ಡಿದ ಅ​ವರು, ಗಾ​ಯಾ​ಳು​ಗಳ ಆ​ರೋಗ್ಯ ವಿ​ಚಾ​ರಿ​ಸಿ ನಂತರ ಸು​ದ್ದಿ​ಗಾ​ರರ ಪ್ರ​ಶ್ನೆಗೆ ಪ್ರ​ತಿ​ಕ್ರಿ​ಯಿ​ಸಿ​ದ​ರು.

ಘ​ಟ​ನೆ​ಯಲ್ಲಿ 6ಕ್ಕೂ ಹೆ​ಚ್ಚು ಜ​ನರ ದೇ​ಹದ ಬ​ಹು​ತೇಕ ಭಾಗ ಸು​ಟ್ಟಿ​ದ್ದ​ರಿಂದ ಅ​ವ​ರ ಸ್ಥಿತಿ ಚಿಂತಾ​ಜ​ನ​ಕ​ವಾ​ಗಿದೆ. ಗಾ​ಯ​ಗೊಂಡ​ವ​ರೆ​ಲ್ಲರೂ ಬ​ಡ​ತ​ನದ ರೇ​ಖೆ​ಗಿಂತ ಕೆ​ಳ​ಗಿ​ನ​ವರೆ ಆ​ಗಿ​ದ್ದಾರೆ. ಸರ್ಕಾರ ಇ​ದನ್ನು ವಿ​ಶೇ​ಷ ಪ್ರ​ಕ​ರ​ಣ​ವೆಂದು ಪ​ರಿ​ಗ​ಣಿಸಿ ಹೆ​ಚ್ಚಿನ ಪ​ರಿ​ಹಾರ ನೀ​ಡ​ಬೇಕು ಎಂದ​ರು.

ಗಾ​ಯಾ​ಳು​ಗ​ಳನ್ನು ಉ​ಳಿ​ಸಿ​ಕೊ​ಳ್ಳಲು ಕೆ​ಎಂಸಿಆರ್‌ಐನ ವೈ​ದ್ಯರು ಹಾಗೂ ಬೆಂಗ​ಳೂ​ರಿನ ವೈ​ದ್ಯರ ತಂಡ ಎಲ್ಲ ರೀ​ತಿ​ಯಿಂದಲೂ ಪ್ರ​ಯತ್ನ ಮುಂದು​ವ​ರಿ​ಸಿ​ದ್ದಾರೆ. ಮೃ​ತರ ಹಾಗೂ ಗಾ​ಯಾ​ಳು​ಗಳ ಕು​ಟುಂಬಕ್ಕೆ ನಾನು ಸಾಂತ್ವನ ಹೇ​ಳಿ​ದ್ದೇನೆ. ಸಿಎಂ ಸಹ ಆ​ಸ್ಪ​ತ್ರೆಗೆ ಭೇಟಿ ನೀ​ಡು​ವು​ದಾಗಿ ಹೇ​ಳಿ​ದ್ದಾರೆ ಎಂದ​ರು.

ದೇ​ಶ​ದಲ್ಲಿ ಸಿ​ಲಿಂಡರ್‌ ಬ​ಳ​ಕೆ​ಯ ಬಗ್ಗೆ ಬ​ಹ​ಳಷ್ಟು ಸು​ಧಾ​ರಣೆ ಆ​ಗ​ಬೇ​ಕಿದೆ. ಸಿ​ಲಿಂಡರ್‌ ಹೊಂದಿದ ಕು​ಟುಂಬ​ದ​ವ​ರಿಗೆ ಅ​ದರ ಸು​ರ​ಕ್ಷತೆ ಹಾಗೂ ಬ​ಳ​ಕೆಯ ವಿ​ಧಾ​ನದ ಬಗ್ಗೆ ಜಾ​ಗೃತಿ ಮೂ​ಡಿ​ಸುವ ಕೆ​ಲಸ ಆ​ಗ​ಬೇ​ಕಿದೆ. ಮಹಾನ​ಗ​ರ​ದಲ್ಲಿ ಮನೆ-ಮ​ನೆಗೆ ಗ್ಯಾಸ್‌ ಪೂ​ರೈಕೆ ಯೋ​ಜನೆ ಅ​ನು​ಷ್ಠಾನ ಹಂತ​ದ​ಲ್ಲಿದ್ದು, ಆ​ದಷ್ಟು ಬೇಗ ಅ​ನು​ಷ್ಠಾನ​ಗೊ​ಳಿ​ಸು​ವಂತೆ ಧಾ​ರ​ವಾಡ ಜಿ​ಲ್ಲಾ​ಧಿ​ಕಾ​ರಿಗೆ ಸೂ​ಚಿ​ಸ​ಲಾ​ಗು​ವುದು ಎಂದು ಹೇ​ಳಿದ​ರು.

ಕೆ​ಎಂಸಿ​ಆ​ರ್‌ಐ ನಿ​ರ್ದೇ​ಶಕ ಡಾ. ​ಎ​ಸ್‌.​ಎ​ಫ್‌. ​ಕ​ಮ್ಮಾರ, ವೈ​ದ್ಯ​ಕೀಯ ಅ​ಧೀ​ಕ್ಷಕ ಡಾ. ​ಈ​ಶ್ವರ ಹ​ಸಬಿ. ಮ​ಹಾ​ನ​ಗರ ಪಾ​ಲಿಕೆ ಸ​ದಸ್ಯ ರಾ​ಜಣ್ಣ ಕೊ​ರವಿ ಇ​ದ್ದ​ರು.