ಪ್ರಯಾಣಿಕರ ಅನುಕೂಲಕ್ಕಾಗಿ ಯಶವಂತಪುರ - ಸರ್‌ಎಂವಿ ರೈಲು ನಿಲ್ದಾಣ ಮಧ್ಯ ಬಿಎಂಟಿಸಿ ಬಸ್‌ ಸೇವೆ

| Published : Aug 23 2024, 07:47 AM IST

BMTC

ಸಾರಾಂಶ

ರೈಲು ಪ್ರಯಾಣಿಕರ ಅನುಕೂಲಕ್ಕಾಗಿ ಯಶವಂತಪುರ ರೈಲು ನಿಲ್ದಾಣ ಮತ್ತು ಸರ್‌ ಎಂ. ವಿಶ್ವೇಶ್ವರಯ್ಯ ರೈಲು ನಿಲ್ದಾಣದ ನಡುವೆ ಆ. 26ರಿಂದ ಬಿಎಂಟಿಸಿ ನೂತನ ಬಸ್ ಸೇವೆ ಆರಂಭಿಸುತ್ತಿದೆ.

ಬೆಂಗಳೂರು: ರೈಲು ಪ್ರಯಾಣಿಕರ ಅನುಕೂಲಕ್ಕಾಗಿ ಯಶವಂತಪುರ ರೈಲು ನಿಲ್ದಾಣ ಮತ್ತು ಸರ್‌ ಎಂ. ವಿಶ್ವೇಶ್ವರಯ್ಯ ರೈಲು ನಿಲ್ದಾಣದ ನಡುವೆ ಆ. 26ರಿಂದ ಬಿಎಂಟಿಸಿ ನೂತನ ಬಸ್ ಸೇವೆ ಆರಂಭಿಸುತ್ತಿದೆ.

 ನೂತನ ಮಾರ್ಗ ಸಂಖ್ಯೆ 300ಆರ್ ಅಡಿಯಲ್ಲಿ ಯಶವಂತಪುರ ರೈಲ್ವೆ ನಿಲ್ದಾಣದಿಂದ ಹೊರಡುವ ಬಸ್‌ ದಂಡು ರೈಲ್ವೆ ನಿಲ್ದಾಣ, ಈಸ್ಟ್‌ ರೈಲ್ವೆ ನಿಲ್ದಾಣ ಹಾಗೂ ಮಾರುತಿ ಸೇವಾ ನಗರ ಮಾರ್ಗದ ಮೂಲಕ ಸಾಗಿ ಸರ್‌ ಎಂ. ವಿಶ್ವೇಶ್ವರಯ್ಯ ರೈಲು ನಿಲ್ದಾಣಕ್ಕೆ ತಲುಪಲಿದೆ. ಅದೇ ರೀತಿ ಸರ್‌ ಎಂ. ವಿಶ್ವೇಶ್ವರಯ್ಯ ರೈಲು ನಿಲ್ದಾಣದಿಂದ ಯಶವಂತಪುರ ರೈಲ್ವೆ ನಿಲ್ದಾಣಕ್ಕೂ ಬಸ್‌ ಸೇವೆ ನೀಡಲಾಗುತ್ತದೆ. 

ಎರಡೂ ನಿಲ್ದಾಣಗಳಿಂದ ಪ್ರತಿದಿನ ಬೆಳಗ್ಗೆ 5 ಗಂಟೆಗೆ ಬಸ್‌ ಸೇವೆ ಆರಂಭವಾಗಲಿದೆ. ಅದರಲ್ಲಿ ಯಶವಂತಪುರ ರೈಲ್ವೆ ನಿಲ್ದಾಣದಿಂದ ರಾತ್ರಿ 9.30 ಹಾಗೂ ಸರ್‌ ಎಂ. ವಿಶ್ವೇಶ್ವರಯ್ಯ ರೈಲು ನಿಲ್ದಾಣದಿಂದ ರಾತ್ರಿ 8.50ಕ್ಕೆ ಅಂತಿಮ ಬಸ್‌ ಹೊರಡಲಿದೆ ಎಂದು ಬಿಎಂಟಿಸಿ ಪ್ರಕಟಣೆಯಲ್ಲಿ ತಿಳಿಸಿದೆ.