ಚೆನ್ನೈನಲ್ಲಿ ನಡೆದ ನ್ಯಾಶನಲ್ ಆ್ಯಂಡ್ ಇಂಡಿಯಾ-ಶ್ರೀಲಂಕಾ ಇಂಟರ್ನ್ಯಾಶನಲ್ ಕರಾಟೆ ಚಾಂಪಿಯನ್ಷಿಪ್ನಲ್ಲಿ ಚೇರಂಬಾಣೆಯ ಅರುಣ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿ ಭವಿತ್ ರೈ ಅತ್ಯುತ್ತಮ ಸಾಧನೆ ಮಾಡಿದ್ದಾರೆ.
ನಾಪೋಕ್ಲು: ಚೆನ್ನೈನಲ್ಲಿ ನಡೆದ ನ್ಯಾಶನಲ್ ಆ್ಯಂಡ್ ಇಂಡಿಯಾ-ಶ್ರೀಲಂಕಾ ಇಂಟರ್ನ್ಯಾಶನಲ್ ಕರಾಟೆ ಚಾಂಪಿಯನ್ಷಿಪ್ನಲ್ಲಿ ಚೇರಂಬಾಣೆಯ ಅರುಣ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿ ಭವಿತ್ ರೈ ಅತ್ಯುತ್ತಮ ಸಾಧನೆ ಮಾಡಿದ್ದಾರೆ.
ಕರಾಟೆಯ ಕಟಾ ವಿಭಾಗದಲ್ಲಿ ಪ್ರಥಮ ಸ್ಥಾನ ಹಾಗೂ ಕುಮಿಟೆ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದು ಗಮನಾರ್ಹ ಸಾಧನೆ ಮಾಡಿದ್ದಾರೆ. ಭವಿತ್ ರೈ ಅವರು ಕೊಳಗದಾಳು ಗ್ರಾಮದ ಪ್ರದೀಪ್ ರೈ ಮತ್ತು ಪ್ರಮೀಳಾ ರೈ ಅವರ ಪುತ್ರ.