ಕನ್ನಡಪ್ರಭ ವಾರ್ತೆ ಸೇಡಂ

ಕಳಪೆ ಆಹಾರ ಆಹಾರ ಸೇವಿಸಿ ಅಸ್ವಸ್ಥಗೊಂಡಿದ್ದ ಸೇಡಂ ತಾಲೂಕಿನ ಮುಧೋಳ ಗ್ರಾಮದ ಇಂದಿರಾಗಾಂಧಿ ವಸತಿಶಾಲೆಯ ವಿದ್ಯಾಥಿ೯ಗಳಿಗೆ ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೆಲ್ಕೂರ್‌ ಹಾಗೂ ಕಲಬುರಗಿ ಬಿಜೆಪಿ ಮುಖಂಡರ ನಿಯೋಗ ಭೇಟಿ ಮಾಡಿ ಯೋಗಕ್ಷೇಮ ವಿಚಾರಿಸಿತು.

ಕಲಬುರಗಿ ಜಿಲ್ಲಾ ಬಿಜೆಪಿ ನಿಯೋಗದೊಂದಿಗೆ ವಸತಿನಿಲಯಕ್ಕೆ ಭೇಟಿ ನೀಡಿ, ಅಸ್ವಸ್ಥಗೊಂಡಿದ್ದ ವಿದ್ಯಾಥಿ೯ಗಳ ಆರೋಗ್ಯ ವಿಚಾರಿಸಿದರು. ವಸತಿನಿಲಯದ ವಾತವರಣದ ಕುರಿತು ಮಕ್ಕಳಿಂದ ಮಾಹಿತಿ ಪಡೆದು ಸಮಾಜ ಕಲ್ಯಾಣ ಇಲಾಖೆ ಜಂಟಿ ನಿದೆ೯ಶಕರಿಗೆ ದೂರವಾಣಿ ಕರೆ ಮೂಲಕ ಮಾತನಾಡಿ, ಸಮಸ್ಯೆಗಳನ್ನು ಕೂಡಲೇ ಬಗೆಹರಿಸಬೇಕು ಮತ್ತು ಈ ಘಟನೆಗೆ ಕಾರಣರಾದವರನ್ನು ಅಮಾನತುಗೊಳಿಸಬೆಕೆಂದು ಆಗ್ರಹಿಸಿದರು.

ಸಚಿವ ಶರಣ ಪ್ರಕಾಶ ಪಾಟೀಲ್ ಅವರು ಮತಕ್ಷೇತ್ರದ ಕಡೆ ಗಮನ ಹರಿಸಬೇಕು, ಕಾಟಚಾರಕ್ಕೆ ಭೇಟಿ ನಿಡುವುದನ್ನು ಬಿಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಸಚಿವರು ಇದರ ಪರಿಣಾಮ ಎದುರಿಸಬೆಕಾಗುತ್ತದೆ ಎಂದು ಎಚ್ಚರಿಕೆ ನಿಡಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಅಶೋಕ ಬಗಲಿ, ಶಾಸಕ ಬಸವರಾಜ ಮತ್ತಿಮೂಡ, ಮಾಜಿ ಸಂಸದ ಉಮೇಶ ಜಾಧವ್, ಮಂಡಲ ಅಧ್ಯಕ್ಷ ಶರಣು ಮೆಡಿಕಲ್‌, ಮುಖಂಡರಾದ ಶರಣಪ್ಪ ತಳವಾರ, ಬಸವರಾಜ ಬೆಣ್ಣೂರಕರ್ ಸೇರಿದಂತೆ ಪಕ್ಷದ ಮುಖಂಡರು ಕಾಯ೯ಕರ್ತರು ಉಪಸ್ಥಿತರಿದ್ದರು.


ಫೋಟೋ- ಬಿಜೆಪಿ 1 ಮತ್ತು ಬಿಜೆಪಿ 2