ಕೊಡಗು ಜಿಲ್ಲಾ ಬಿಜೆಪಿಗೆ ನೂನತ ಪದಾಧಿಕಾರಿಗಳ ನೇಮಕ

| Published : Feb 08 2024, 01:32 AM IST

ಸಾರಾಂಶ

ಮಡಿಕೇರಿ ನಗರ ಮಂಡಲ ಅಧ್ಯಕ್ಷರಾಗಿ ಉಮೇಶ್ ಸುಬ್ರಮಣಿ, ಮಡಿಕೇರಿ ಗ್ರಾಮಾಂತರ ಮಂಡಲ ಅಧ್ಯಕ್ಷರಾಗಿ ನಾಗೇಶ್ ಕುಂದಲ್ಪಾಡಿ, ವಿರಾಜಪೇಟೆ ತಾಲೂಕು ಮಂಡಲ ಅಧ್ಯಕ್ಷರಾಗಿ ಸುವಿನ್ ಗಣಪತಿ, ಸೋಮವಾರಪೇಟೆ ತಾಲೂಕು ಮಂಡಲ ಅಧ್ಯಕ್ಷರಾಗಿ ಗೌತಮ್ ಗೌಡ ಅವರನ್ನು ನೇಮಿಸಲಾಗಿದೆ.

ಕನ್ನಡಪ್ರಭ ವಾರ್ತೆ ಮಡಿಕೇರಿ ಕೊಡಗು ಜಿಲ್ಲೆಯ ಬಿಜೆಪಿ ಜಿಲ್ಲಾ ಪದಾಧಿಕಾರಿಗಳಾಗಿ ಈ ಪ್ರಮುಖರನ್ನು ನಿಯಕ್ತಿಗೊಳಿಸಲಾಗಿದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ ತಿಳಿಸಿದ್ದಾರೆ.

ಉಪಾಧ್ಯಕ್ಷರಾಗಿ ಎಚ್.ಕೆ. ಮಾದಪ್ಪ ಅರುಣ್ ಭೀಮಯ್ಯ, ಕಿಲನ್ ಗಣಪತಿ, ಆರ್.ಕೆ. ಚಂದ್ರು, ಭವ್ಯ ಅಪ್ಪಡೇರಂಡ, ಕಾಂಗೀರ ಸತೀಶ್ ಅಶ್ವಿನ್, ಮನು ಮಂಜುನಾಥ್, ಮನು ಕುಮಾರ್ ರೈ ಅವರನ್ನು ನೇಮಕ ಮಾಡಲಾಗಿದೆ. ಪ್ರಧಾನ ಕಾರ್ಯದರ್ಶಿಯಾಗಿ ಮಹೇಶ್ ಜೈನಿ, ವಿ.ಕೆ. ಲೋಕೇಶ್, ಚಲನ್ ಕುಮಾರ್, ಕಾರ್ಯದರ್ಶಿಗಳಾಗಿ ಪ್ರಶಾಂತ್ ಭೀಮಯ್ಯ, ಕನ್ನಿಕೆ, ಮಲಚೀರ ಕವಿತ, ಉಮಾ ಪ್ರಭು, ಇಂದೀರಾ ರಮೇಶ್, ಅನಂತ್ ಕುಮಾರ್, ಜಯವರ್ಧನ, ಬೀನಾ ಬೊಳ್ಳಮ್ಮ ಅವರನ್ನು ನೇಮಿಸಲಾಗಿದೆ. ಕೋಶಾಧಿಕಾರಿಯಾಗಿ ಕನ್ನಂಡ ಸಂಪತ್ , ಮಾಧ್ಯಮ ಪ್ರಮುಖ್ ಆಗಿ ದೀಪಕ್, ಸಜೀಲ್ ಕೃಷ್ಣನ್, ಜಿಲ್ಲಾ ವಕ್ತಾರರಾಗಿ ಬಿ.ಕೆ. ಅರುಣ್ ಕುಮಾರ್, ತಳೂರು ಕಿಶೋರ್ ಕುಮಾರ್, ಸುಬ್ರಮಣ್ಯ ಉಪಾಧ್ಯಾಯ, ಸಾಮಾಜಿಕ ಜಾಲತಾಣ ಸಂಚಾಲಕರಾಗಿ ಸಚಿನ್ ಪೆಮ್ಮಯ್ಯ, ಶಿವಕುಮಾರ್ ನಾಣಯ್ಯ ಮತ್ತು ಸಹಸಂಚಾಲಕರಾಗಿ ದರ್ಶನ್ , ಸಂಪ್ರೀತ್ ಅವರು ನೇಮಕವಾಗಿದ್ದಾರೆ.

ಮಹಿಳಾ ಮೋರ್ಚಾ ಅಧ್ಯಕ್ಷೆಯಾಗಿ ಅನಿತಾ ಪೂವಯ್ಯ, ಯುವ ಮೋರ್ಚಾ ಅಧ್ಯಕ್ಷರಾಗಿ ಮಹೇಶ್ ತಿಮ್ಮಯ್ಯ, ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷರಾಗಿ ಅಪ್ಪು ರವೀಂದ್ರ, ಎಸ್.ಸಿ. ಮೋರ್ಚಾ ಅಧ್ಯಕ್ಷರಾಗಿ ಮುಗೇರ ರವಿ, ಎಸ್.ಟಿ. ಮೋರ್ಚಾ ಅಧ್ಯಕ್ಷರಾಗಿ ಪರಮೇಶ್ವರ, ರೈತ ಮೋರ್ಚಾ ಅಧ್ಯಕ್ಷರಾಗಿ ಅಜ್ಜಿಕುಟೀರ ಪ್ರವೀಣ್, ಅಲ್ಪಸಂಖ್ಯಾತರ ಮೋರ್ಚಾ ಅಧ್ಯಕ್ಷರಾಗಿ ಜೋಸ್ ಆಯ್ಕೆಯಾಗಿದ್ದಾರೆ.

ಮಡಿಕೇರಿ ನಗರ ಮಂಡಲ ಅಧ್ಯಕ್ಷರಾಗಿ ಉಮೇಶ್ ಸುಬ್ರಮಣಿ, ಮಡಿಕೇರಿ ಗ್ರಾಮಾಂತರ ಮಂಡಲ ಅಧ್ಯಕ್ಷರಾಗಿ ನಾಗೇಶ್ ಕುಂದಲ್ಪಾಡಿ, ವಿರಾಜಪೇಟೆ ತಾಲೂಕು ಮಂಡಲ ಅಧ್ಯಕ್ಷರಾಗಿ ಸುವಿನ್ ಗಣಪತಿ, ಸೋಮವಾರಪೇಟೆ ತಾಲೂಕು ಮಂಡಲ ಅಧ್ಯಕ್ಷರಾಗಿ ಗೌತಮ್ ಗೌಡ ಅವರನ್ನು ನೇಮಿಸಲಾಗಿದೆ.