ಕಾಪು: ಅದಾನಿ ಸಮೂಹದ ಸ್ಥಾಪಕ, ಅಧ್ಯಕ್ಷ ಗೌತಮ್ ಅದಾನಿ ಅವರ 64 ನೇ ಜನ್ಮದಿನದ ಪ್ರಯುಕ್ತ ಅದಾನಿ ಪವರ್ ಲಿಮಿಟೆಡ್‌ನ ಉಡುಪಿ ಥರ್ಮಲ್ ಪವರ್ ಪ್ಲಾಂಟ್ ವತಿಯಿಂದ ತನ್ನ ಸಿಎಸ್‌ಆರ್ ಕಾರ್ಯಕ್ರಮದಡಿ ಗೋ-ರೆಡ್ ಹೆಸರಿನಲ್ಲಿ ಬೃಹತ್ ರಕ್ತದಾನ ಶಿಬಿರವನ್ನು ಯಶ್ವಸಿಯಾಗಿ ಆಯೋಜಿಸಿತು. ದಿನವಿಡೀ ನಡೆದ ಈ ರಕ್ತದಾನ ಶಿಬಿರದಲ್ಲಿ ಒಟ್ಟು 206 ಯುನಿಟ್ ರಕ್ತವನ್ನು ಸಂಗ್ರಹಿಸಲಾಯಿತು. ಈ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಶರತ್ ಕುಮಾರ್, ಉಡುಪಿ ಜಿಲ್ಲಾಸ್ಪತ್ರೆಯ ರಕ್ತನಿಧಿ ವಿಭಾಗದ ಮುಖ್ಯಸ್ಥೆ ಡಾ. ವೀಣಾ ಕುಮಾರಿ, ಅದಾನಿ ಸಮೂಹದ ಕಾರ್ಯನಿರ್ವಾಹಕರ ನಿರ್ದೇಶಕ ಕಿಶೋರ್ ಆಳ್ವ ಅವರು ಜೊತೆಯಾಗಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಕಿಶೋರ್ ಆಳ್ವ ಅವರು, ದೇಶಾದ್ಯಂತ ಇರುವ ಅದಾನಿ ಸಮೂಹದ ಎಲ್ಲ ಘಟಕಗಳಲ್ಲಿ ಗೌತಮ್ ಅದಾನಿ ಅವರ ಜನ್ಮದಿನವನ್ನು ಮಾನವೀಯ ಸೇವೆಯ ಸಂಕೇತವಾಗಿ ಆಚರಿಸಲು ಗೋ-ರೆಡ್’ ಕಾರ್ಯಕ್ರಮದ ಮೂಲಕ ಸಾವಿರಾರು ನೌಕರರು ಒಂದಾಗಿ ರಕ್ತದಾನ ಮಾಡುತ್ತಾರೆ. ರಕ್ತದಾನವು ಮಾನವೀಯತೆಯ ಅತ್ಯಂತ ಶ್ರೇಷ್ಟ ಅಭಿವ್ಯಕ್ತಿಗಳಲ್ಲೊಂದಾಗಿದ್ದು, ಇದು ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ನಮ್ಮ ಕೊಡುಗೆಯ ಸಂಕೇತವಾಗಿದೆ ಎಂದರು.