ಚನ್ನಗಿರಿ: ಬಾಲಕನ ವಿವಸ್ತ್ರಗೊಳಿಸಿದ ಪ್ರಕರಣ- 9 ಆರೋಪಿಗಳ ಬಂಧನ

| Published : Apr 08 2025, 12:32 AM IST

ಚನ್ನಗಿರಿ: ಬಾಲಕನ ವಿವಸ್ತ್ರಗೊಳಿಸಿದ ಪ್ರಕರಣ- 9 ಆರೋಪಿಗಳ ಬಂಧನ
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕಿನ ಅಸ್ತಾಫನಹಳ್ಳಿ ಗ್ರಾಮದ ಬಾಲಕ, 17 ವರ್ಷದ ಥೊಮೆಸ್‌ನಿಗೆ ಕಳ್ಳತನ ಆರೋಪ ಮೇಲೆ ಡ್ರಿಪ್ ವೈರ್‌ನಿಂದ ಮರಕ್ಕೆ ಕಟ್ಟಿಹಾಕಿ ಥಳಿಸಿ, ವಿವಸ್ತ್ರಗೊಳಿಸಿದ ಪ್ರಕರಣದಲ್ಲಿ 9 ಆರೋಪಿಗಳನ್ನು ಭಾನುವಾರ ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ತಾಲೂಕು ಪರಿಶಿಷ್ಟ ಪಂಗಡಗಳ ಇಲಾಖೆ ವ್ಯವಸ್ಥಾಪಕ ಬಸವರಾಜ್ ತಿಳಿಸಿದ್ದಾರೆ.

- ಬಂಧಿತರಿಗೆ ನ್ಯಾಯಾಂಗ ಬಂಧನ: ತಾಲೂಕು ಪರಿಶಿಷ್ಟ ಪಂಗಡಗಳ ಇಲಾಖೆ ವ್ಯವಸ್ಥಾಪಕ

- ಅಸ್ತಾಫನಹಳ್ಳಿಗೆ ಇಲಾಖೆ ಜಿಲ್ಲಾ ಅಧಿಕಾರಿ ಭಕ್ತಮಾರ್ಕಂಡಯ್ಯ, ತಾಲೂಕು ಅಧಿಕಾರಿ ರುದ್ರೇಶ್ ಭೇಟಿ

- - - ಕನ್ನಡಪ್ರಭ ವಾರ್ತೆ ಚನ್ನಗಿರಿ

ತಾಲೂಕಿನ ಅಸ್ತಾಫನಹಳ್ಳಿ ಗ್ರಾಮದ ಬಾಲಕ, 17 ವರ್ಷದ ಥೊಮೆಸ್‌ನಿಗೆ ಕಳ್ಳತನ ಆರೋಪ ಮೇಲೆ ಡ್ರಿಪ್ ವೈರ್‌ನಿಂದ ಮರಕ್ಕೆ ಕಟ್ಟಿಹಾಕಿ ಥಳಿಸಿ, ವಿವಸ್ತ್ರಗೊಳಿಸಿದ ಪ್ರಕರಣದಲ್ಲಿ 9 ಆರೋಪಿಗಳನ್ನು ಭಾನುವಾರ ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ತಾಲೂಕು ಪರಿಶಿಷ್ಟ ಪಂಗಡಗಳ ಇಲಾಖೆ ವ್ಯವಸ್ಥಾಪಕ ಬಸವರಾಜ್ ತಿಳಿಸಿದ್ದಾರೆ.

ಈ ಘಟನೆಗೆ ಸಂಬಂಧಪಟ್ಟಂತೆ ಪರಿಶಿಷ್ಟ ಪಂಗಡಗಳ ಇಲಾಖೆ ಜಿಲ್ಲಾ ಅಧಿಕಾರಿ ಭಕ್ತಮಾರ್ಕಂಡಯ್ಯ, ತಾಲೂಕು ಅಧಿಕಾರಿ ರುದ್ರೇಶ್ ಅಸ್ತಾಫನಹಳ್ಳಿಗೆ ಭೇಟಿ ನೀಡಿದರು. ಪೊಲೀಸ್ ಠಾಣೆಗೆ ದೂರು ನೀಡಿದ್ದ ಬಾಲಕನ ಅಜ್ಜ ಮಧುಸೂದನ್ ಎಂಬವರಿಂದ ಬಾಲಕನಿಗೆ ಥಳಿಸಿದ ಘಟನೆ ಕುರಿತು ಮಾಹಿತಿ ಪಡೆದುಕೊಂಡರು.

ಬಂಧಿತ 9 ಆರೋಪಿತರೆಲ್ಲ ಒಂದೇ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಬಾಲಕ ತೋಟಗಳಲ್ಲಿ ಸಣ್ಣಪುಟ್ಟ ಕಳ್ಳತನ ಮಾಡುತ್ತಿದ್ದ. ಹೀಗೆ ಕಳ್ಳತನ ಮಾಡಬೇಡ ಎಂದು ಹೊಡೆದಿದ್ದಾರೆ. ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಇಷ್ಟೆಲ್ಲಾ ರಾದ್ದಾಂತವಾಗಿದೆ ಎಂದು ಮಧುಸೂಧನ್ ತನ್ನಿಖಾ ತಂಡದ ಅಧಿಕಾರಿಗಳ ಎದುರು ತಿಳಿಸಿರುವುದಾಗಿ ಅಧಿಕಾರಿ ಬಸವರಾಜ್ ಮಾಹಿತಿ ನೀಡಿದ್ದಾರೆ.

- - - -7ಕೆಸಿಎನ್‌ಜಿ8:

ಚನ್ನಗಿರಿ ತಾಲೂಕಿನ ಅಸ್ತಾಪನಹಳ್ಳಿಗೆ ಪರಿಶಿಷ್ಟ ವರ್ಗಗಳ ಇಲಾಖೆ ಅಧಿಕಾರಿಗಳು ಭೇಟಿ ನೀಡಿ, ಥಳಿತಕ್ಕೊಳಗಾದ ಬಾಲಕನ ಪೋಷಕರಿಂದ ಮಾಹಿತಿ ಪಡೆದುಕೊಂಡರು.