ಜಾನುವಾರು ಸಿಡಿಮದ್ದು ತಿಂದು ಮುಖ ಛಿದ್ರ

| Published : Apr 03 2025, 12:30 AM IST

ಸಾರಾಂಶ

ಕೌದಳ್ಳಿ ಗ್ರಾಮದಲ್ಲಿ ಜಾನುವಾರು ಸಿಡಿಮದ್ದು ತಿಂದು ಮುಖ ಛಿದ್ರಗೊಂಡಿರುವ ಘಟನೆ ಜರುಗಿದೆ. ತಾಲೂಕಿನ ಕೌದಳ್ಳಿ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ತಾಲೂಕು ದಂಡಾಧಿಕಾರಿಗಳ ಮತ್ತು ಪೊಲೀಸ್ ಇಲಾಖೆ ಅರಣ್ಯ ಇಲಾಖೆ ಪಶು ಸಂಗೋಪನ ಇಲಾಖೆ ವಿವಿಧ ಇಲಾಖೆಗಳ ಸಹಯೋಗದಲ್ಲಿ ಜಾನುವಾರುಗಳ ಉಳಿವಿಗಾಗಿ ಜಾಗೃತಿ ಸಭೆ ನಡೆದ ಬೆನ್ನಲ್ಲೇ ಗ್ರಾಮದ ವರವಲಯದ ಪೆಟ್ರೋಲ್ ಬಂಕ್ ಸಮೀಪದ ಜಮೀನೊಂದರಲ್ಲಿ ಜಾನುವಾರು ಸಿಡಿಮದ್ದು ತಿಂದು ತೀವ್ರವಾಗಿ ಗಾಯಗೊಂಡಿದೆ.

ಕನ್ನಡಪ್ರಭ ವಾರ್ತೆ ಹನೂರು

ಕೌದಳ್ಳಿ ಗ್ರಾಮದಲ್ಲಿ ಜಾನುವಾರು ಸಿಡಿಮದ್ದು ತಿಂದು ಮುಖ ಛಿದ್ರಗೊಂಡಿರುವ ಘಟನೆ ಜರುಗಿದೆ. ತಾಲೂಕಿನ ಕೌದಳ್ಳಿ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ತಾಲೂಕು ದಂಡಾಧಿಕಾರಿಗಳ ಮತ್ತು ಪೊಲೀಸ್ ಇಲಾಖೆ ಅರಣ್ಯ ಇಲಾಖೆ ಪಶು ಸಂಗೋಪನ ಇಲಾಖೆ ವಿವಿಧ ಇಲಾಖೆಗಳ ಸಹಯೋಗದಲ್ಲಿ ಜಾನುವಾರುಗಳ ಉಳಿವಿಗಾಗಿ ಜಾಗೃತಿ ಸಭೆ ನಡೆದ ಬೆನ್ನಲ್ಲೇ ಗ್ರಾಮದ ವರವಲಯದ ಪೆಟ್ರೋಲ್ ಬಂಕ್ ಸಮೀಪದ ಜಮೀನೊಂದರಲ್ಲಿ ಜಾನುವಾರು ಸಿಡಿಮದ್ದು ತಿಂದು ತೀವ್ರವಾಗಿ ಗಾಯಗೊಂಡಿದೆ.

ಕೌದಳ್ಳಿ ಹಾಗೂ ಶೆಟ್ಟಳ್ಳಿ ಐದು ಆರು ತಿಂಗಳಲ್ಲಿ ನಾಲ್ಕು ಹೆಚ್ಚು ಪ್ರಕರಣಗಳು ಜಾನುವಾರುಗಳು ಸಿಡಿಮದ್ದು ತಿಂದು ತೀವ್ರವಾಗಿ ಗಾಯಗೊಂಡಿರುವುದು ರೈತರಲ್ಲಿ ಆತಂಕ ಮನೆ ಮಾಡಿದೆ. ಹೀಗಾಗಿ ಜಿಲ್ಲಾಧಿಕಾರಿಗಳು ಗ್ರಾಮದಲ್ಲಿ ಸಭೆ ನಡೆಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಸಭೆ ನಡೆಸುವಂತೆ ಸೂಚನೆ ನೀಡಿರುವ ಬೆನ್ನಲ್ಲೆ ಸಭೆ ನಡೆಯುತ್ತಿದ್ದ ವೇಳೆಯಲ್ಲಿಯೇ ಜಾನುವಾರು ಸಿಡಿಮದ್ದು ತಿಂದು ತೀವ್ರವಾಗಿ ಗಾಯಗೊಂಡಿರುವ ಬಗ್ಗೆ ಘಟನಾ ಸ್ಥಳಕ್ಕೆ ತಾಲೂಕು ದಂಡಾಧಿಕಾರಿ ಗುರುಪ್ರಸಾದ್ ಪೊಲೀಸ್ ಇನ್ಸ್‌ಪೆಕ್ಟರ್ ಶೆಟ್ಟಿ, ಅರಣ್ಯ ಇಲಾಖೆ ಅಧಿಕಾರಿ ಮತ್ತು ಪಶು ಸಂಗೋಪನಾ ಇಲಾಖೆ ಅಧಿಕಾರಿ ಮತ್ತು ರೈತ ಸಂಘಟನೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಜಾನುವಾರುಗಳು ಸಿಡಿಮದ್ದಿನಿಂದ ಮುಖ ಬಾಯಿ ಛಿದ್ರಗೊಂಡು ಐದಾರು ಪ್ರಕರಣಗಳು ನಡೆದಿದೆ ಈ ಬಗ್ಗೆ ಗ್ರಾಮದಲ್ಲಿ ನಡೆದ ಸಭೆ ಬೆನ್ನಲ್ಲೇ ಮತ್ತೊಂದು ಪ್ರಕರಣ ಸಿಡಿಮದ್ದು ತಿಂದು ಜಾನುವಾರು ಮುಖ ಬಾಯಿ ಛಿದ್ರಗೊಂಡಿದೆ ಹೀಗಾಗಿ ಸಂಬಂಧಪಟ್ಟ ಪೊಲೀಸ್ ಇಲಾಖೆ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಹಂದಿ ಗುಂಡು ಇಟ್ಟು ಪ್ರಾಣಿಗಳನ್ನು ಹತ್ಯೆ ಮಾಡಲು ಸಂಚುರೂಪಿಸುತ್ತಿರುವ ಕಿಡಿಗೇಡಿಗಳ ಬಗ್ಗೆ ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಜೊತೆಗೆ ಜಾನುವಾರುಗಳ ಉಳಿವಿಗಾಗಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು.

ಚಂಗಡಿ ಕರಿಯಪ್ಪ

ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ತಾಲೂಕು ಘಟಕ ಅಧ್ಯಕ್ಷರು