ಶಿವಮೊಗ್ಗದಲ್ಲಿ ಮಕ್ಕಳಿಂದ ಸೈನಿಕರಿಗೆ ‘ಸಿಂದೂರ ನಡೆ’ ನಮನ

| Published : May 10 2025, 01:08 AM IST

ಶಿವಮೊಗ್ಗದಲ್ಲಿ ಮಕ್ಕಳಿಂದ ಸೈನಿಕರಿಗೆ ‘ಸಿಂದೂರ ನಡೆ’ ನಮನ
Share this Article
  • FB
  • TW
  • Linkdin
  • Email

ಸಾರಾಂಶ

ಕಾಶ್ಮೀರ ಕಣಿವೆ ಪೆಹಲ್ಗಾಮ್‌ನಲ್ಲಿ ಉಗ್ರರ ಹೇಡಿ ಕೃತ್ಯಕ್ಕೆ ಪ್ರತೀಕಾರವಾಗಿ ಸತತ ಮೂರು ದಿನಗಳಿಂದ ನಡೆಯುತ್ತಿರುವ ‘ಆಪರೇಷನ್ ಸಿಂದೂರ್’ ಯಶಸ್ಸಿ ಹಿನ್ನೆಲೆ ನಗರದ ಆರ್ಯ ಪಿಯು ಕಾಲೇಜ್, ಪ್ರಿಯದರ್ಶಿನಿ ಏಜುಕೇಶನ್ ಸಂಸ್ಥೆಯಿಂದ ಶುಕ್ರವಾರ ಭಾರತ ಸಿಂದೂರ ನಡೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

‘ಆಪರೇಷನ್ ಸಿಂದೂರ’ದ ಯಶಸ್ಸಿಗೆ ವಿದ್ಯಾರ್ಥಿಗಳಿಂದ ಯೋಧರಿಗೆ ಗೌರವ । ಧ್ವಜ ಹಿಡಿದು ಮೆರವಣಿಗೆ, ದೇಶ ಪರ ಘೋಷಣೆ

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಕಾಶ್ಮೀರ ಕಣಿವೆ ಪೆಹಲ್ಗಾಮ್‌ನಲ್ಲಿ ಉಗ್ರರ ಹೇಡಿ ಕೃತ್ಯಕ್ಕೆ ಪ್ರತೀಕಾರವಾಗಿ ಸತತ ಮೂರು ದಿನಗಳಿಂದ ನಡೆಯುತ್ತಿರುವ ‘ಆಪರೇಷನ್ ಸಿಂದೂರ್’ ಯಶಸ್ಸಿ ಹಿನ್ನೆಲೆ ನಗರದ ಆರ್ಯ ಪಿಯು ಕಾಲೇಜ್, ಪ್ರಿಯದರ್ಶಿನಿ ಏಜುಕೇಶನ್ ಸಂಸ್ಥೆಯಿಂದ ಶುಕ್ರವಾರ ಭಾರತ ಸಿಂದೂರ ನಡೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ನಗರದ ಸೀನಪ್ಪ ಶೆಟ್ಟಿ (ಗೋಪಿ ಸರ್ಕಲ್) ವೃತ್ತದಿಂದ ಶಿವಪ್ಪನಾಯಕ ವೃತ್ತದವರೆಗೆ ಭಾರತ ದೇಶದ ಧ್ವಜ ಹಿಡಿದು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದ ವಿದ್ಯಾರ್ಥಿಗಳು ದೇಶದ ಪರ ಘೋಷಣೆ ಕೂಗುತ್ತ ಸಾಗಿದರು.

ಭಾರತದ ಸಾರ್ವಭೌಮತೆ ಮತ್ತು ಐಕ್ಯತೆಯನ್ನು ಬುಡಮೇಲು ಮಾಡಲು ಯತ್ನಿಸುತ್ತಿರುವ ಉಗ್ರಗಾಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಂಡಿರುವ ಭಾರತ ಸರ್ಕಾರದ ದಿಟ್ಟ ನಿರ್ಧಾರವನ್ನು ಬೆಂಬಲಿಸಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಈ ಸಂದರ್ಭ ಸಂಸ್ಥೆಯ ಕಾರ್ಯದರ್ಶಿ ಎನ್. ರಮೇಶ್, ಪ್ರಮುಖರಾದ ಮುರಳಿಕೃಷ್ಣ, ನಿರ್ಮಲ, ಚಂದ್ರಶೇಖರ್, ಮೋನಿಷಾ ಹಾಗೂ ವಿದ್ಯಾರ್ಥಿಗಳಿದ್ದರು.

ಬಿಜೆಪಿಯಿಂದ ವಿಶೇಷ ಪೂಜೆ

ಕಾಶ್ಮೀರ ಕಣಿವೆ ಪೆಹಲ್ಗಾಮ್‌ನಲ್ಲಿ ಉಗ್ರರ ಹೇಡಿ ಕೃತ್ಯಕ್ಕೆ ಪ್ರತೀಕಾರವಾಗಿ ‘ಆಪರೇಷನ್ ಸಿಂದೂರ್’ ಯಶಸ್ಸಿಗೆ ಹಾಗೂ ಮುಸಲ್ಮಾನ್ ಭಯೋತ್ಪಾದಕರನ್ನು ಹೊಡೆದುರುಳಿಸಿ ಪಾಕಿಸ್ತಾನದ ನಿದ್ದೆಗೆಡಿಸುತ್ತಿರುವ ನಮ್ಮ ಹೆಮ್ಮೆಯ ಭಾರತೀಯ ಸೈನಿಕರ ಸುರಕ್ಷತೆಗಾಗಿ ಪ್ರಾರ್ಥಿಸಿ ನಗರದ ಕೋಟೆ ಶ್ರೀ ಸೀತಾರಾಮಾಂಜನೇಯ ದೇವಸ್ಥಾನದಲ್ಲಿ ಬಿಜೆಪಿ ಶಿವಮೊಗ್ಗ ನಗರ ಘಟಕದಿಂದ ವಿಶೇಷ ಪೂಜೆ ಸಲ್ಲಿಸಲಾಯಿತು.

ಶಾಸಕ ಎಸ್.ಎನ್. ಚನ್ನಬಸಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಜಗದೀಶ್ ಎನ್.ಕೆ., ಬಿಜೆಪಿ ನಗರಾಧ್ಯಕ್ಷ ಮೋಹನ್ ರೆಡ್ಡಿ ಇನ್ನಿತರ ಬಿಜೆಪಿ ಪ್ರಮುಖರಿದ್ದರು.