ಬೇಡಿಕೆ ಈಡೇರಿಕೆಗಾಗಿ ತಲೆ ಮೇಲೆ ಕಲ್ಲು ಹೊತ್ತು ಪೌರಕಾರ್ಮಿಕರ ಪ್ರತಿಭಟನೆ

| Published : Dec 17 2024, 01:00 AM IST

ಬೇಡಿಕೆ ಈಡೇರಿಕೆಗಾಗಿ ತಲೆ ಮೇಲೆ ಕಲ್ಲು ಹೊತ್ತು ಪೌರಕಾರ್ಮಿಕರ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾ​ಲಿಕೆ ಸ​ಭೆ​ಯಲ್ಲಿ ಆ​ಯು​ಕ್ತರು 15 ದಿನಗಳಲ್ಲಿ ನೇರ ನೇಮಕಾತಿ ಆದೇಶ ಪತ್ರ ನೀಡುವುದಾಗಿ ಮತ್ತು ನೇರ ವೇತನ ಬಗ್ಗೆ ಸರ್ಕಾರದ ಅನುಮೋದನೆ ಪಡೆಯುವುದಾಗಿ ಭ​ರ​ವಸೆ ನೀ​ಡಿ​ದ್ದರು. ಆ​ದರೆ ಅ​ದನ್ನು ಈ​ಡೇ​ರಿ​ಸಲು ವಿ​ಫ​ಲ​ರಾ​ಗಿ​ದ್ದಾರೆ.

ಹು​ಬ್ಬ​ಳ್ಳಿ:

ಪೌರ ಕಾ​ರ್ಮಿ​ಕರು ತಮ್ಮ ಬೇ​ಡಿ​ಕೆ ಈ​ಡೇ​ರಿ​ಕೆಗೆ ಆ​ಗ್ರ​ಹಿಸಿ ಇ​ಲ್ಲಿನ ಪಾ​ಲಿಕೆ ಕ​ಚೇರಿ ಎ​ದುರು ನ​ಡೆ​ಸು​ತ್ತಿ​ರುವ ಧ​ರಣಿ ಸ​ತ್ಯಾ​ಗ್ರಹ ಸೋ​ಮ​ವಾರ 6ನೇ ದಿ​ನಕ್ಕೆ ಮುಂದು​ವ​ರಿ​ದಿದ್ದು, ತ​ಲೆಯ ಮೇಲೆ ಕಲ್ಲು ಹೊ​ತ್ತು​ಕೊಂಡು ಪ್ರ​ತಿ​ಭ​ಟನೆ ನ​ಡೆ​ಸಿ​ದ​ರು.

ಬೆ​ಳ​ಗ್ಗೆ​ಯಿಂದ ಸಂಜೆ​ಯ ​ವ​ರೆಗೂ ಪ್ರ​ತಿ​ಭ​ಟ​ನಾ​ಕಾ​ರರು ತ​ಲೆಯ ಮೇಲೆ ಭಾ​ರದ ಕ​ಲ್ಲು ​ಳನ್ನು ಹೊ​ತ್ತು​ಕೊಂಡು, ವಿ​ನೂ​ತನ ರೀ​ತಿ​ಯಲ್ಲಿ ಸರ್ಕಾರದ ​ವಿ​ರುದ್ಧ ತಮ್ಮ ಆ​ಕ್ರೋಶ ವ್ಯ​ಕ್ತ​ಪ​ಡಿ​ಸಿ​ದ​ರು.

ಈ ಹಿಂದೆ ನ​ಡೆದ ಪಾ​ಲಿಕೆ ಸ​ಭೆ​ಯಲ್ಲಿ ಆ​ಯು​ಕ್ತರು 15 ದಿನಗಳಲ್ಲಿ ನೇರ ನೇಮಕಾತಿ ಆದೇಶ ಪತ್ರ ನೀಡುವುದಾಗಿ ಮತ್ತು ನೇರ ವೇತನ ಬಗ್ಗೆ ಸರ್ಕಾರದ ಅನುಮೋದನೆ ಪಡೆಯುವುದಾಗಿ ಭ​ರ​ವಸೆ ನೀ​ಡಿ​ದ್ದರು. ಆ​ದರೆ ಅ​ದನ್ನು ಈ​ಡೇ​ರಿ​ಸಲು ವಿ​ಫ​ಲ​ರಾ​ಗಿ​ದ್ದಾರೆ. ಪಾಲಿಕೆ ಸಾಮಾನ್ಯ ಸಭೆಯಲ್ಲಿ 3 ಬಾರಿ ನಮ್ಮ ಸಂಘದ ಬೇಡಿಕೆಗಳನ್ನು ಈಡೇರಿಸುವಂತೆ ಠರಾವು ಪಾಸ್‌ ಮಾಡಿದ್ದಾರೆ. ಆ​ದರೂ ಆ​ಯು​ಕ್ತರು ಬೇ​ಡಿಕೆ ಈ​ಡೇ​ರಿ​ಸಿಲ್ಲ. ಅ​ಲ್ಲ​ದೇ ಸರ್ಕಾರ ನಮ್ಮ ಬೇಡಿಕೆಗಳ ಬಗ್ಗೆ ನಕಾರಾತ್ಮಕ ಧೋರಣೆ ತಾ​ಳು​ತ್ತಿ​ರು​ವುದು ಖಂಡ​ನೀಯ ಎಂದು ಆ​ರೋ​ಪಿ​ಸಿ​ದ​ರು.

ಪೌ​ರ​ಕಾ​ರ್ಮಿ​ಕರ ಸಂಘದ ಜಿಲ್ಲಾಧ್ಯಕ್ಷ ಡಾ. ವಿಜಯ ಗುಂಟ್ರಾಳ, ಗಾಳೆಪ್ಪಾ ದ್ವಾಸಲಕೇರಿ, ಗಂಗಮ್ಮ ಸಿದ್ರಾಮಪುರ, ನೀಲವ್ವ ಬೆಳವಟಗಿ, ಶಿವಮ್ಮ ಬೇವಿನಮರದ, ಪದ್ಮಾ ಚಿಕ್ಕಣವರ, ಕಮಲವ್ವ ಕಲಕ್ಕನವರ, ರೇಣುಕಾ ಹೊಸಮನಿ, ರಾಮು ಮಾದರ, ಗಳೆಪ್ಪಾ ರಣತೂರ, ಶರೀ​ಫ್‌ ಮಸರಕಲ, ನಾಗಮ್ಮ ಅಂಗಡಿ, ನೀಲಮ್ಮ ಕದಂ, ಸುನೀತಾ ಮಾದರ, ಮುತ್ಯಾಲಮ್ಮ ಪೂಜಾ​ರ, ರಾಮಸುಲೋಚನಾ, ಪ್ರಿಯಾಂಕಾ ಹೊಸಪೇಟ್‌, ದಯಾನಂದ ಗೊಲ್ಲರ ಉಪಸ್ಥಿತರಿದ್ದರು.