ಸರ್ಕಾರಿ ಕಚೇರಿಗಳಲ್ಲಿ ದುಡ್ಡು ಕೇಳಿದ್ರೆ ಲೋಕಾಯುಕ್ತಕ್ಕೆ ದೂರು ಕೊಡಿ

| Published : Aug 14 2025, 01:00 AM IST

ಸರ್ಕಾರಿ ಕಚೇರಿಗಳಲ್ಲಿ ದುಡ್ಡು ಕೇಳಿದ್ರೆ ಲೋಕಾಯುಕ್ತಕ್ಕೆ ದೂರು ಕೊಡಿ
Share this Article
  • FB
  • TW
  • Linkdin
  • Email

ಸಾರಾಂಶ

ಸರ್ಕಾರಿ ಕಚೇರಿಗಳಲ್ಲಿ ಹಣ ಕೇಳುವುದು, ದಲ್ಲಾಳಿಗಳು ಕಂಡು ಬಂದರೆ ಕೂಡಲೇ ಲೋಕಾಯುಕ್ತಕ್ಕೆ ಸಾರ್ವಜನಿಕರು ದೂರು ಸಲ್ಲಿಸಿ ಎಂದು ಲೋಕಾಯುಕ್ತ ಉಪ ಅಧೀಕ್ಷಕ ಗಜೇಂದ್ರ ಪ್ರಸಾದ್‌ ಹೇಳಿದರು.

ಗುಂಡ್ಲುಪೇಟೆ: ಸರ್ಕಾರಿ ಕಚೇರಿಗಳಲ್ಲಿ ಹಣ ಕೇಳುವುದು, ದಲ್ಲಾಳಿಗಳು ಕಂಡು ಬಂದರೆ ಕೂಡಲೇ ಲೋಕಾಯುಕ್ತಕ್ಕೆ ಸಾರ್ವಜನಿಕರು ದೂರು ಸಲ್ಲಿಸಿ ಎಂದು ಲೋಕಾಯುಕ್ತ ಉಪ ಅಧೀಕ್ಷಕ ಗಜೇಂದ್ರ ಪ್ರಸಾದ್‌ ಹೇಳಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಾರ್ವಜನಿಕರ ಕುಂದುಕೊರತೆ ಸಭೆಯಲ್ಲಿ ಮಾತನಾಡಿ, ಸಾರ್ವಜನಿಕರ ದೂರಿಗೆ ಸ್ಪಂದಿಸಬೇಕು. ಸರ್ಕಾರದ ಕೆಲಸ ದೇವರ ಕೆಲಸ ಎಂಬ ಮಾತಿನಂತೆ ಸರ್ಕಾರಿ ಅಧಿಕಾರಿಗಳು ಸಾರ್ವಜನಿಕರ ಅಲೆಸಬೇಡಿ. ಯಾವುದೇ ಸಮಸ್ಯೆ ಇರಲಿ ಸಮಯ ನಿಗದಿಪಡಿಸಿ ಸಮಸ್ಯೆಗೆ ಮುಕ್ತಿ ನೀಡಿ ಎಂದರು. ಸಾರ್ವಜನಿಕರು ಕೂಡ ಅಧಿಕಾರಿಗಳ ಭ್ರಷ್ಠಾಚಾರ ಕಂಡು ಬಂದರೆ ಲೋಕಾಯುಕ್ತ ಸಂಪರ್ಕಸಿದರೆ ನಿಮಗೆ ನ್ಯಾಯ ಕೊಡಿಸುವ ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡಿದರು. ಲೋಕಾಯುಕ್ತ ನಿರೀಕ್ಷಕ ಶಶಿಕುಮಾರ್‌, ಉಪ ತಹಸೀಲ್ದಾರ್‌ ಜಯಪ್ರಕಾಶ್‌, ಕೃಷಿ ಸಹಾಯಕ ನಿರ್ದೇಶಕ ಶಶಿಧರ್‌ ಇದ್ದರು.