ಬಿಜೆಪಿಯಲ್ಲಿನ ಗೊಂದಲ ಹೈಕಮಾಂಡ್‌ ಬಗೆಹರಿಸುತ್ತದೆ: ಶೆಟ್ಟರ

| Published : Dec 02 2024, 01:17 AM IST

ಸಾರಾಂಶ

ಬಿಜೆಪಿಯಲ್ಲಿ ಎಲ್ಲವೂ ಗೊಂದಲಮಯವಾಗಿದ್ದು, ಪಕ್ಷದ ಹೈಕಮಾಂಡ್‌ ಶೀಘ್ರದಲ್ಲೇ ಗೊಂದಲ ನಿವಾರಿಸುತ್ತಾರೆ ಎಂದು ಮಾಜಿ ಸಿಎಂ, ಸಂಸದ ಜಗದೀಶ ಶೆಟ್ಟರ ವಿಶ್ವಾಸ ವ್ಯಕ್ತಪಡಿಸಿದರು.

ಹುಬ್ಬ​ಳ್ಳಿ: ಬಿ​ಜೆ​ಪಿ​ಯಲ್ಲಿ ಎ​ಲ್ಲವೂ ಗೊಂದ​ಲ​ಮ​ಯ​ವಾ​ಗಿ​ದ್ದು, ಪಕ್ಷದ ಹೈಕಮಾಂಡ್‌ ಶೀಘ್ರದಲ್ಲೇ ಗೊಂದಲ ನಿವಾರಿಸುತ್ತಾರೆ ಎಂದು ಮಾಜಿ ಸಿಎಂ, ಸಂಸದ ಜಗದೀಶ ಶೆಟ್ಟರ ವಿಶ್ವಾಸ ವ್ಯಕ್ತಪಡಿಸಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಬಿ​ಜೆ​ಪಿ​ಯ​ಲ್ಲಿನ ಗೊಂದವನ್ನು ದೆ​ಹಲಿ ವ​ರಿ​ಷ್ಠರು ಸೂಕ್ಷ್ಮವಾಗಿ ಗ​ಮ​ನಿ​ಸು​ತ್ತಿ​ದ್ದಾ​ರೆ. ಬಿ​ಜೆ​ಪಿ​ಯಲ್ಲಿ ಗೊಂದಲ ಇ​ರು​ವುದು ಸತ್ಯ. ಆ​ದರೆ ನಿ​ವಾ​ರಿ​ಸುವ ಶಕ್ತಿ ಹೈ​ಕ​ಮಾಂಡ್‌ಗೆ ಮಾತ್ರ ಇದೆ. ಆ​ದಷ್ಟು ಬೇಗ ವ​ರಿ​ಷ್ಠರು ಸ​ರಿ​ಯಾದ ಕ್ರಮ ಕೈ​ಗೊ​ಳ್ಳು​ತ್ತಾ​ರೆ ಎಂದರು.

ವಿಜಯೇಂದ್ರ ಪರವಾಗಿ ಮಾಜಿ ಶಾ​ಸ​ಕರು ಸಭೆ ನ​ಡೆಸಿರುವ ವಿ​ಚಾ​ರದ ಕು​ರಿತು ಪ್ರ​ಶ್ನೆಗೆ ಪ್ರ​ತಿ​ಕ್ರಿ​ಯಿ​ಸಿದ ಶೆ​ಟ್ಟರ್‌, ನಾನು ಯಾರ ಪ​ರ​ವಾ​ಗಿಯೂ ಮಾ​ತ​ನಾ​ಡು​ವು​ದಿಲ್ಲ. ಪ​ಕ್ಷ​ದ​ ವ್ಯ​ವ​ಸ್ಥೆ​ಯನ್ನು ಸರಿಪ​ಡಿ​ಸುವ ಕೆ​ಲ​ಸ​ ಹೈ​ಕ​ಮಾಂಡ್‌ ಮಾ​ಡ​ಬೇ​ಕಿದೆ ಎಂದ​ರು.

ಕಾಂಗ್ರೆಸ್‌ನ​ಲ್ಲಿಯೂ ಸಾ​ಕಷ್ಟು ಅ​ಸ​ಮಾ​ಧಾನ ಮತ್ತು ಒ​ಳ​ಜ​ಗ​ಳ​ಗ​ಳಿದ್ದು, ಅ​ದು ಯಾ​ವಾಗ ಹೊರ ಬೀ​ಳುತ್ತೋ ಗೊತ್ತಿಲ್ಲ. ಸಿಎಂ ಸಿ​ದ್ದ​ರಾ​ಮ​ಯ್ಯ ಅ​ವ​ರನ್ನು ಕೆ​ಳ​ಗಿ​ಳಿಸಲು ಕೆ​ಲ​ವರು ಮುಂದಾ​ಗಿ​ದ್ದು, ಸ​ದ್ಯ​ದಲ್ಲೇ ಕಾಂಗ್ರೆಸ್‌ ಜ​ಗಳ ಬೀ​ದಿಗೆ ಬ​ರು​ವುದು ಗ್ಯಾ​ರಂಟಿ. ಹಾಸನದಲ್ಲಿ ಸಮಾವೇಶಕ್ಕೆ ಅವರಲ್ಲೇ ಅಪಸ್ವರ ಕೇಳಿ ಬಂದಿದೆ ಎಂದು ಪ್ರ​ಶ್ನೆಯೊಂದಕ್ಕೆ ಪ್ರ​ತಿ​ಕ್ರಿ​ಯಿ​ಸಿ​ದ​ರು.

ಭ್ರಷ್ಟಾಚಾರಕ್ಕೆ ಸ್ಪರ್ಧೆ

ರಾಜ್ಯ ಸ​ರ್ಕಾ​ರದ ಭ್ರ​ಷ್ಟಾ​ಚಾ​ರದ ವಿ​ಚಾ​ರ​ದಲ್ಲಿ ಸ​ಚಿ​ವರ ಮ​ಧ್ಯೆಯೇ ಕಾಂಪಿ​ಟೇ​ಶನ್‌ ನ​ಡೆ​ಯು​ತ್ತಿದೆ. ಭ್ರ​ಷ್ಟಾ​ಚಾ​ರ​ದಲ್ಲಿ ನಾನು ಹೆಚ್ಚೋ ನೀನು ಹೆಚ್ಚೋ ಎಂಬ ಲೆ​ಕ್ಕಾ​ಚಾರ ನ​ಡೆ​ದಿದೆ. ಆ​ಡ​ಳಿ​ತ​ದ​ಲ್ಲಿನ ಭ್ರ​ಷ್ಟಾ​ಚಾರ ನೋಡಿ ಸಾ​ಕಾ​ಗಿದೆ ಎಂದು ಹೇ​ಳಿ​ರುವ ಸ​ಚಿವ ಆ​ರ್‌.ಬಿ.​ ತಿ​ಮ್ಮಾಪುರ ಅ​ವರ ಇ​ಲಾ​ಖೆ​ಯಲ್ಲಿ ಭ್ರ​ಷ್ಟಾ​ಚಾರ ಕ​ಡಿ​ಮೆ​ಯಾ​ಗಿ​ದೆ​ಯಾ? ಎಂದು ಶೆ​ಟ್ಟರ್‌ ಪ್ರ​ಶ್ನಿ​ಸಿ​ದ​ರು. ವಕ್ಫ್‌ ಮ​ಸೂದೆ ತಿ​ದ್ದು​ಪ​ಡಿಯ ಅ​ವಧಿ ವಿ​ಸ್ತ​ರಣೆ ಮಾ​ಡ​ಲಾ​ಗಿದೆ. ಬ​ಜೆಟ್‌ ಅಧಿವೇಶನದ ​ವ​ರೆಗೂ ಅ​ವಧಿ ವಿ​ಸ್ತ​ರಣೆ ಮಾ​ಡ​ಲಾ​ಗಿದೆ. ಬ​ಜೆಟ್‌ ಅ​ಧಿ​ವೇ​ಶ​ನ​ದ​ ವರೆಗೆ ಯಾ​ವುದೇ ಬಿಲ್‌ ಅ​ನು​ಮೋ​ದ​ನೆ​ಯಾ​ಗಲ್ಲ ಎಂದು ಶೆ​ಟ್ಟರ ಹೇ​ಳಿ​ದ​ರು.