ಸಾರಾಂಶ
ಅಂಬೇಡ್ಕರ್ ರಚಿಸಿರುವ ಸಂವಿಧಾನ ಪ್ರಸ್ತುತ ಎಲ್ಲರಿಗೂ ಅನಿವಾರ್ಯವಾಗಿದೆ, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಾಮಾಜಿಕ ನ್ಯಾಯ ಕಲ್ಪಿಸಲು ಸಂವಿಧಾನದ ಅಗತ್ಯವಿದ್ದು, ಅದೊಂದು ಪವಿತ್ರ ಗ್ರಂಥವಾಗಿದೆ, ಪ್ರತಿಯೊಬ್ಬರ ಜೀವನಕ್ಕೂ ಸಂವಿಧಾನ ಅವಶ್ಯವಾಗಿದ್ದು, ಇದನ್ನು ಸದ್ಬಳಿಸಿಕೊಂಡು ಸಮಾಜಮುಖಿಗಳಾಗಲು ಪೂರಕವಾಗಿದೆ.
ಕನ್ನಡಪ್ರಭ ವಾರ್ತೆ ಕೋಲಾರನಗರದ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಏ.೧೪ರಂದು ಬೆಳಗ್ಗೆ ೧೦ ಗಂಟೆಗೆ ಅಂಬೇಡ್ಕರ್ ಜಯಂತಿ ಆಯೋಜಿಸಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮೀನಾರಾಯಣ ತಿಳಿಸಿದರು.ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಂಬೇಡ್ಕರ್ ರಚಿಸಿರುವ ಸಂವಿಧಾನ ಪ್ರಸ್ತುತ ಎಲ್ಲರಿಗೂ ಅನಿವಾರ್ಯವಾಗಿದೆ, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಾಮಾಜಿಕ ನ್ಯಾಯ ಕಲ್ಪಿಸಲು ಸಂವಿಧಾನದ ಅಗತ್ಯವಿದೆ ಎಂದರು.
ಸಂವಿಧಾನ ಪವಿತ್ರ ಗ್ರಂಥಜಿಲ್ಲಾ ಕಾಂಗ್ರೇಸ್ ಕಾರ್ಯಾಧ್ಯಕ್ಷ ಊರುಬಾಗಿಲು ಶ್ರೀನಿವಾಸ್ ಮಾತನಾಡಿ, ಅಂಬೇಡ್ಕರ ರಚನೆಯ ಸಂವಿಧಾನವು ವಿಶ್ವಮಟ್ಟದಲ್ಲಿ ಮೆಚ್ಚುಗೆ ಪಡೆದಿರುವಂತ ಪವಿತ್ರ ಗ್ರಂಥವಾಗಿದೆ, ಪ್ರತಿಯೊಬ್ಬರ ಜೀವನಕ್ಕೂ ಸಂವಿಧಾನ ಅವಶ್ಯವಾಗಿದ್ದು, ಇದನ್ನು ಸದ್ಬಳಿಸಿಕೊಂಡು ಸಮಾಜಮುಖಿಗಳಾಗಲು ಪೂರಕವಾಗಿದೆ ಎಂದರು.
ಉಪಾಧ್ಯಕ್ಷ ಎಲ್.ಎ.ಮಂಜುನಾಥ್ ಮಾತನಾಡಿ ಅಂಬೇಡ್ಕರ್ ರಚಿಸಿರುವ ಸಂವಿಧಾನ ಜಾತ್ಯತೀತ, ಧರ್ಮಾತೀತ, ಪಕ್ಷಾತೀತವಾಗಿ ರಚಿಸಿ ಕೊಟ್ಟಿರುವ ಗ್ರಂಥದಲ್ಲಿ ತತ್ವ ಸಿದ್ದಾಂತಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ದೇಶವನ್ನು ಕಟ್ಟಬೇಕು ಎಂದರು.ಜನಗಣತಿಯಲ್ಲಿ ತಪ್ಪು ಮಾಹಿತಿ
ರಾಜ್ಯ ಸರ್ಕಾರಕ್ಕೆ ಸಲ್ಲಿಸಿರುವ ಜನಗಣತಿಯಲ್ಲಿ ತಿಗಳ ಸಮುದಾಯದವರು ೨೫ ಲಕ್ಷ ಇದ್ದರೆ ೫ ಲಕ್ಷವೆಂದು, ಕುರುಬರ ಸಮುದಾಯ ೧೫ ಲಕ್ಷ ಇದ್ದರೆ ಅದನ್ನು ಸಹ ೫ ಲಕ್ಷವೆಂದು ನಮೂದಿಸಿರುವುದಂತೆ ತಿದ್ದುಪಡಿ ಮಾಡಬೇಕೆಂದು ಮನವಿ ಮಾಡಿದೆ ಎಂದು ತಿಳಿಸಿದರು. ಎಸ್.ಸಿ. ಘಟಕದ ಅಧ್ಯಕ್ಷ ಕೆ.ಜಯದೇವ್, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪ್ರಸಾದ್ ಬಾಬು, ಉದಯಶಂಕರ್, ಎಸ್.ಟಿ. ಘಟಕದ ಅಧ್ಯಕ್ಷ ನಾಗರಾಜ್, ಓ.ಬಿ.ಸಿ. ಅಧ್ಯಕ್ಷ ಮಂಜುನಾಥ್, ಲಾಲ್ ಬಹುದ್ದೂರ್ ಶಾಸ್ತ್ರಿ, ಹಾರೋಹಳ್ಳಿ ರವಿ, ಸುರೇಶ್, ಶ್ರೀನಿವಾಸ್, ನಾರಾಯಣಸ್ವಾಮಿ, ಪರ್ವಿಜ್, ಆಸ್ಲಾಂ, ಗುರು ಮತ್ತಿತರರು ಇದ್ದರು.