ನ ನಾಲ್ಕು ಜಿಲ್ಲೆಗಳ ಪದಾಧಿಕಾರಿಗಳ ನೇಮಕ ಸಂಬಂಧ ಈ ಕಾರ್ಯಕ್ರಮ ಆಯೋಜಿಸಲಾಗಿದ್ದು, ಕಾರ್ಯಕ್ರಮದಲ್ಲಿ ನೀಡಿರುವ ಜವಾಬ್ದಾರಿಯನ್ನು ಅರಿತು ಎಲ್ಲರೂ ಸಂಘಟಿತರಾಗಿ ಮುಂದೆ ಸಾಗೋಣ
ಕನ್ನಡಪ್ರಭ ವಾರ್ತೆ ಪಿರಿಯಾಪಟ್ಟಣರಾಜ್ಯದ 28 ಜಿಲ್ಲೆಗಳಲ್ಲಿ ದಸಂಸ ಭೀಮ ವಾದ ಸಕ್ರಿಯವಾಗಿದೆ ಎಂದು ರಾಜ್ಯ ಸಂಚಾಲಕರು ಬಿ.ಎನ್. ವೆಂಕಟೇಶ್ ಹೇಳಿದರು. ಪಟ್ಟಣದ ಕಚೇರಿಯಲ್ಲಿ ಮಂಡ್ಯ, ಹಾಸನ, ಮೈಸೂರು, ಮಡಿಕೇರಿ ಪದಾಧಿಕಾರಿಗಳಿಗೆ ಜವಾಬ್ದಾರಿ ಪ್ರಮಾಣ ಪತ್ರ ವಿತರಿಸಿ ಅವರು ಮಾತನಾಡಿದರು.ಈ ದಿನ ನಾಲ್ಕು ಜಿಲ್ಲೆಗಳ ಪದಾಧಿಕಾರಿಗಳ ನೇಮಕ ಸಂಬಂಧ ಈ ಕಾರ್ಯಕ್ರಮ ಆಯೋಜಿಸಲಾಗಿದ್ದು, ಕಾರ್ಯಕ್ರಮದಲ್ಲಿ ನೀಡಿರುವ ಜವಾಬ್ದಾರಿಯನ್ನು ಅರಿತು ಎಲ್ಲರೂ ಸಂಘಟಿತರಾಗಿ ಮುಂದೆ ಸಾಗೋಣ ಎಂದರು.ರಾಜ್ಯ ಸಂಘಟನಾ ಸಂಚಾಲಕ ಸಂಜೀವ ಕಾಂಬಳೆ, ಪುಟ್ಟರಾಜು, ರಾಜ್ಯ ಸಂಘಟನಾ ಸಂಚಾಲಕ, ರಾಜ್ಯ ಸಮಿತಿ ಸದಸ್ಯ ಸೊನ್ನೆಗೌಡ. ಎಸ್.ಆರ್. ವೆಂಕಟೇಶ್, ಹಾಸನ ಜಿಲ್ಲಾ ಉಸ್ತುವಾರಿ ಚೇತನ್ ಗೌಡ, ರಾಜ್ಯ ಮಹಿಳಾ ಸಂಘಟನಾ ಸಂಚಾಲಕ ಗಿರಿಜಮ್ಮ, ಬೆಂಗಳೂರು ಗ್ರಾಮಾಂತರ ತಾಲೂಕು ಸಂಚಾಲಕ ಶ್ರೀನಿವಾಸ್, ಹಾಸನ ಜಿಲ್ಲೆ ಸಂಚಾಲಕ ಕುಮಾರ್. ಕೊಡಗು ಜಿಲ್ಲಾ ಸಂಚಾಲಕ ಮಹೇಶ್, ಮೈಸೂರು, ಕೊಡಗು ಜಿಲ್ಲಾ ಮಹಿಳಾ ಉಸ್ತುವಾರಿ ಲತಾ, ಮುಖಂಡರಾದ ಮಂಜುನಾಥ್, ಮಹೇಶ್, ರವಿ, ಎಜುಗೌಡ ಕುಮಾರ್ ಇದ್ದರು.