ಧರ್ಮಸ್ಥಳ ಯೋಜನೆ ಗ್ರಾಮೀಣ ಜನರಿಗೆ ಅನುಕೂಲ

| Published : Aug 25 2024, 01:55 AM IST

ಸಾರಾಂಶ

ಗ್ರಾಮೀಣ ಜನರಲ್ಲಿ ಸ್ವಾಭಿಮಾನದ ಸಂದೇಶವನ್ನು ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಮಾಡುತ್ತಿದೆ ಎಂದು ಜಿಲ್ಲಾ ನಿರ್ದೇಶಕ ಸತೀಶ್ ಸುವರ್ಣ ತಿಳಿಸಿದರು.

ತಿಪಟೂರು: ಗ್ರಾಮೀಣ ಜನರಲ್ಲಿ ಸ್ವಾಭಿಮಾನದ ಸಂದೇಶವನ್ನು ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಮಾಡುತ್ತಿದೆ ಎಂದು ಜಿಲ್ಲಾ ನಿರ್ದೇಶಕ ಸತೀಶ್ ಸುವರ್ಣ ತಿಳಿಸಿದರು.

ತಾಲೂಕಿನ ಕಾಮಸಮುದ್ರದ ಹೊಳಲ್ಕೆರೆ ರಾಮೇಶ್ವರ ಸಮುದಾಯ ಭವನದಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಜ್ಞಾನ ವಿಕಾಸ ಕೇಂದ್ರದಡಿ ಮಹಿಳೆಯರ ಸ್ವ-ಉದ್ಯೋಗಕ್ಕೆ ಸಾಲಸೌಲಭ್ಯ, ದೇವಸ್ಥಾನಗಳಿಗೆ ಅನುದಾನ, ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗಾಗಿ ಸುಜ್ಞಾನ ನಿಧಿ ಶಿಷ್ಯವೇತನ, ಆರೋಗ್ಯ ಮಾಹಿತಿ ಹೀಗೆ ಹಲವಾರು ಜನಪರ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದರು. ನಿವೃತ್ತ ಮುಖ್ಯಶಿಕ್ಷಕ ರಾಮಣ್ಣ ಮಾತನಾಡಿ, ಧರ್ಮಸ್ಥಳ ಯೋಜನೆಯು ಎಲ್ಲರೂ ಆರ್ಥಿಕ ಪರಿಸ್ಥಿತಿ ಸಮತೋಲನ ಮಾಡಿಕೊಂಡು ಮಕ್ಕಳಿಗೆ ಉತ್ತಮ ಶಿಕ್ಷಣ, ಆರೋಗ್ಯಕ್ಕೂ ಆದ್ಯತೆ ನೀಡುತ್ತಿರುವುದು ಶ್ಲಾಘನೀಯ ಎಂದರು.ಉಪನ್ಯಾಸಕಿ ರೂಪ ವಿಶ್ವನಾಥ್, ಗ್ರಾಪಂ ಅಧ್ಯಕ್ಷೆ ಶಶಿಕಲಾ, ಸದಸ್ಯ ಕರುಣಾಕರ್, ಬಸವರಾಜು, ಯೋಜನಾಧಿಕಾರಿ, ಉದಯ್, ಎಂ.ಡಿ. ಪದ್ಮಾವತಿ ಮತ್ತಿತರರಿದ್ದರು.