ಹೆಚ್ಚು ಮೊಬೈಲ್‌, ಲ್ಯಾಪ್‌ಟಾಪ್‌ ಬಳಕೆ ಬೇಡ

| Published : Jun 28 2025, 12:21 AM IST

ಸಾರಾಂಶ

ವಾಸನ್ ಐ ಕೇರ್ ಸೆಂಟರಿನ ಎ.ಹರಿಹರನ್, ಮೈಲಾರ ಸುಣಗಾರ, ಶ್ವೇತಾ ಕುಲಕರ್ಣಿ ವಿದ್ಯಾರ್ಥಿಗಳಿಗೆ ಕಣ್ಣಿನ ತಪಾಸಣೆ ಹಾಗೂ ಆರೋಗ್ಯದ ತಪಾಸಣೆ ಮಾಡಿದರು

ಧಾರವಾಡ: ಇತ್ತೀಚಿನ ದಿನಗಳಲ್ಲಿ ಮೊಬೈಲ್ ಫೋನ್ ಹಾಗೂ ಲ್ಯಾಪ್‌ಟಾಪ್‌ನ ಅತಿಯಾದ ಬಳಕೆಯಿಂದ ವಿದ್ಯಾರ್ಥಿಗಳಲ್ಲಿ ಕಣ್ಣಿನ ದೃಷ್ಟಿದೋಷ ಹೆಚ್ಚಾಗಿದೆ. ಜತೆಗೆ ಸಣ್ಣ ವಯಸ್ಸಿನಲ್ಲಿಯೇ ಆರೋಗ್ಯ ಸಮಸ್ಯೆ ಉಲ್ಬಣಿಸುತ್ತಿರುವುದು ಕಳವಳಕಾರಿ ಸಂಗತಿ ಎಂದು ಕಣ್ಣಿನ ವೈದ್ಯ ಡಾ.ವೀಣಾ ಪಟವರ್ಧನ ಹೇಳಿದರು. ಜನತಾ ಶಿಕ್ಷಣ ಸಮಿತಿಯ ಕೆ.ಎಚ್. ಕಬ್ಬೂರ ತಾಂತ್ರಿಕ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಮಾತನಾಡಿ, ವಿದ್ಯಾರ್ಥಿಗಳು ಆರೋಗ್ಯದ ಕಡೆ ಹೆಚ್ಚಿನ ಒತ್ತು ನೀಡಬೇಕು ಹಾಗೂ ಮೊಬೈಲ್ ಫೋನಿನ ಅತಿಯಾದ ಬಳಕೆ ಮಾಡಬಾರದು ಎಂದರು.

ಸಂಸ್ಥೆಯ ಪ್ರಾಚಾರ್ಯರಾದ ವೇದಾವತಿ ತಿವಾರಿ ಅಧ್ಯಕ್ಷತೆ ವಹಿಸಿದ್ದರು. ಸಂಯೋಜನಾಧಿಕಾರಿ ವಿ.ಕೆ. ಭರಣಿ, ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥ ರಾಜಕುಮಾರ ಜೋಗುಳೆ, ರವಿ ಯಮಕನಮರಡಿ, ಇ ಮತ್ತುಇ ವಿಭಾಗದ ಮುಖ್ಯಸ್ಥ ಗಿರೀಶ ಬೆಳಗಾಂವಕರ ಇದ್ದರು.

ವಾಸನ್ ಐ ಕೇರ್ ಸೆಂಟರಿನ ಎ.ಹರಿಹರನ್, ಮೈಲಾರ ಸುಣಗಾರ, ಶ್ವೇತಾ ಕುಲಕರ್ಣಿ ವಿದ್ಯಾರ್ಥಿಗಳಿಗೆ ಕಣ್ಣಿನ ತಪಾಸಣೆ ಹಾಗೂ ಆರೋಗ್ಯದ ತಪಾಸಣೆ ಮಾಡಿದರು. ಮಂಜುನಾಥ ಗಜಾಕೋಶ ಸ್ವಾಗತಿಸಿದರು. ಈಶ್ವರಗೌಡ ದೇವಲಾಪುರ ನಿರೂಪಿಸಿದರು.